<p><strong>ಮೈಸೂರು: </strong>‘ಜಾನಪದಕ್ಕೆ ಸಾವಿಲ್ಲ. ಜನರಿರೋ ತನಕವೂ ಜೀವಂತವಿರುತ್ತದೆ’ ಎಂದು ಕರ್ನಾಟಕ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಭಾನುವಾರ ಇಲ್ಲಿ ತಿಳಿಸಿದರು.</p>.<p>ನಗರದ ಮನೆಯಂಗಳದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ನ ಮೈಸೂರು ಜಿಲ್ಲಾ ಘಟಕದ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು ‘ಪೀಳಿಗೆಯಿಂದ ಪೀಳಿಗೆಗೆ ಜಾನಪದ ಪಸರಿಸುತ್ತಿದೆ’ ಎಂದರು.</p>.<p>‘ಜಾನಪದ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಯಾರೋ ಒಬ್ಬರಿಂದ ರಚನೆಯಾಗಿದ್ದಲ್ಲ. ಅಸಂಖ್ಯಾತ ಜನರ ಗುಂಪಿನಿಂದ ರಚನೆಯಾಗಿರೋದು’ ಎಂದು ಅವರು ಹೇಳಿದರು.</p>.<p>‘ಜನರಿಂದ ಜನರಿಗಾಗಿ ರಚನೆಯಾಗಿದ್ದೇ ಜನಪದ. ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡಿದೆ. ಜನಪದದಲ್ಲಿರುವ ಮಂಟೇಸ್ವಾಮಿ, ಯಲ್ಲಮ್ಮ, ಮಾದೇಶ್ವರ ಕಾವ್ಯಗಳು ರಾಮಾಯಣದಷ್ಟೇ ಮಹತ್ವವಾದವು’ ಎಂದು ಮರಿದೇವಯ್ಯ ಅಭಿಪ್ರಾಯಪಟ್ಟರು.</p>.<p>ವಾರ್ಷಿಕೋತ್ಸವ ಉದ್ಘಾಟಿಸಿ, ಕಲಾವಿದರಿಗೆ ಪರಿಷತ್ನ ಪ್ರಶಂಸನಾ ಪತ್ರ ವಿತರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ ‘ಜನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.</p>.<p>ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಘಟಕದ ಅಧ್ಯಕ್ಷ ಡಾ.ಕ್ಯಾತನಹಳ್ಳಿ ಪ್ರಕಾಶ್ ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ವೇದವ್ಯಾಸ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಪನ್ನಗ ವಿಜಯಕುಮಾರ್ ಉಪಸ್ಥಿತರಿದ್ದರು.</p>.<p>ಜನಪದ ಗಾಯಕರು ಜನಪದ ಹಾಡುಗಳನ್ನಾಡಿದರು. ವಿವಿಧ ಭಾಗದ ಕಲಾವಿದರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಜಾನಪದಕ್ಕೆ ಸಾವಿಲ್ಲ. ಜನರಿರೋ ತನಕವೂ ಜೀವಂತವಿರುತ್ತದೆ’ ಎಂದು ಕರ್ನಾಟಕ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಭಾನುವಾರ ಇಲ್ಲಿ ತಿಳಿಸಿದರು.</p>.<p>ನಗರದ ಮನೆಯಂಗಳದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ನ ಮೈಸೂರು ಜಿಲ್ಲಾ ಘಟಕದ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು ‘ಪೀಳಿಗೆಯಿಂದ ಪೀಳಿಗೆಗೆ ಜಾನಪದ ಪಸರಿಸುತ್ತಿದೆ’ ಎಂದರು.</p>.<p>‘ಜಾನಪದ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಯಾರೋ ಒಬ್ಬರಿಂದ ರಚನೆಯಾಗಿದ್ದಲ್ಲ. ಅಸಂಖ್ಯಾತ ಜನರ ಗುಂಪಿನಿಂದ ರಚನೆಯಾಗಿರೋದು’ ಎಂದು ಅವರು ಹೇಳಿದರು.</p>.<p>‘ಜನರಿಂದ ಜನರಿಗಾಗಿ ರಚನೆಯಾಗಿದ್ದೇ ಜನಪದ. ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡಿದೆ. ಜನಪದದಲ್ಲಿರುವ ಮಂಟೇಸ್ವಾಮಿ, ಯಲ್ಲಮ್ಮ, ಮಾದೇಶ್ವರ ಕಾವ್ಯಗಳು ರಾಮಾಯಣದಷ್ಟೇ ಮಹತ್ವವಾದವು’ ಎಂದು ಮರಿದೇವಯ್ಯ ಅಭಿಪ್ರಾಯಪಟ್ಟರು.</p>.<p>ವಾರ್ಷಿಕೋತ್ಸವ ಉದ್ಘಾಟಿಸಿ, ಕಲಾವಿದರಿಗೆ ಪರಿಷತ್ನ ಪ್ರಶಂಸನಾ ಪತ್ರ ವಿತರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ ‘ಜನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.</p>.<p>ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಘಟಕದ ಅಧ್ಯಕ್ಷ ಡಾ.ಕ್ಯಾತನಹಳ್ಳಿ ಪ್ರಕಾಶ್ ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ವೇದವ್ಯಾಸ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಪನ್ನಗ ವಿಜಯಕುಮಾರ್ ಉಪಸ್ಥಿತರಿದ್ದರು.</p>.<p>ಜನಪದ ಗಾಯಕರು ಜನಪದ ಹಾಡುಗಳನ್ನಾಡಿದರು. ವಿವಿಧ ಭಾಗದ ಕಲಾವಿದರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>