ಈಶ ಫೌಂಡೇಷನ್ನ ಜಗ್ಗಿ ವಾಸುದೇವ್ ಮಾತನಾಡಿ, ‘ರಾಜ್ಯದಲ್ಲಿ ಹೆಚ್ಚು ಮಳೆ ಬಿದ್ದಿದ್ದರಿಂದ ಅನಾವೃಷ್ಟಿಯಾಗಿಲ್ಲ. ಹಿಂದೆ ಎಷ್ಟು ಮಳೆ ಬಿದ್ದಿತ್ತೊ ಅಷ್ಟೇ ಮಳೆ ಈಗಲೂ ಬಿದ್ದಿದೆ. ಆದರೆ, ಆ ಮಳೆ ನೀರನ್ನು ಹಿಡಿದಿಡುವಂತಹ ಮರಗಳು ಕಡಿಮೆಯಾಗಿವೆ. ಹೀಗಾಗಿ, ನೀರು ಭೂಮಿಯಲ್ಲಿ ಇಂಗದೇ ಹರಿದು ಹೋಗುತ್ತಿದ್ದು, ಇದೇ ಪ್ರವಾಹ ಎನಿಸಿದೆ’ ಎಂದು ತಿಳಿಸಿದರು.