<p><strong>ಮೈಸೂರು:</strong> ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಹೊಸಹಳ್ಳಿ ವಿವೇಕ ಗಿರಿಜನ ಶಿಕ್ಷಣ ಕೇಂದ್ರದಲ್ಲಿ ಸೆ.2ರಿಂದ 6ರವರೆಗೆ ರಾಜ್ಯ ಮಟ್ಟದ ‘ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿ ಶಿಬಿರ’ ನಡೆಯಲಿದೆ.</p>.<p>‘ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ ನಡೆಯುವ ಶಿಬಿರವನ್ನು ಡಾ.ಆರ್. ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ್ ಕುಮಾರ್ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p><strong>2ರಂದು ‘ಬುಡಕಟ್ಟು ಸಮುದಾಯ</strong></p>.<p><strong></strong>ಸ್ವರೂಪ, ಲಕ್ಷಣ’ ಕುರಿತು ಡಾ.ಹಿ.ಚಿ.ಬೋರಲಿಂಗಯ್ಯ, ‘ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ’– ಡಾ.ನಾಗ.ಎಚ್.ಹುಬ್ಳಿ, ಕರ್ನಾಟಕ ಬುಡಕಟ್ಟುಗಳು ಕುರಿತು ಡಾ. ನಾಗೇಶ ಹೆಬ್ಬಾಳೆ ಮಾತನಾಡಲಿದ್ದಾರೆ ಎಂದು ಹೇಳಿದರು.</p>.<p>3ರಂದು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಪಿ.ಪಿ.ತಮ್ಮಯ್ಯ ಅವರು ತರಬೇತಿ ನೀಡ<br />ಲಿದ್ದು, ಡಾ.ಮಾಧವ ಪೆರಾಜೆ (ಕನ್ನಡ, ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ), ಡಾ.ಎಸ್.ಎಂ.ಮುತ್ತಯ್ಯ (ಬುಡಕಟ್ಟು ಸಾಹಿತ್ಯ ಮತ್ತು ಆಶಯ, ಅಭಿವ್ಯಕ್ತಿ), ಡಾ.ಕೃಷ್ಣಮೂರ್ತಿ ಹನೂರು (ಬುಡ<br />ಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ ), ಕುರುವ ಬಸವರಾಜ್ (ಬುಡಕಟ್ಟು ಸಂಸ್ಕೃತಿ ಆಚರಣೆ ಪರಂಪರೆ), ಕೆ.ಭಾಸ್ಕರ್ ದಾಸ್ ಎಕ್ಕಾರು (ಬುಡಕಟ್ಟು ಅಭಿವೃದ್ದಿ: ಸಂಘಸಂಸ್ಥೆಗಳ ಪಾತ್ರ) ಮಾತನಾಡಲಿದ್ದಾರೆ ಎಂದರು.</p>.<p>4ರಂದು ಡಾ.ಎಚ್.ಪಿ.ಜ್ಯೋತಿ (ಬುಡಕಟ್ಟು ಮಹಿಳೆ), ಡಾ.ಪಿ.ಕೆ. ಖಂಡೋಬ (ಬುಡಕಟ್ಟು ಭಾಷೆಗಳು: ಸ್ಥಿತ್ಯಂತರ), ಡಾ.ಮೀರಾಸಾಬಿಹಳ್ಳಿ ಶಿವಣ್ಣ (ಬುಡಕಟ್ಟು ಮಹಾಕಾವ್ಯ: ಸಾಂಸ್ಕೃತಿಕ ನಾಯಕ), ಪ್ರೊ.ಟಿ.ಟಿ.ಬಸವನಗೌಡ (ಬುಡಕಟ್ಟು ಯೋಜನೆ), ಸಂತೋಷ್ ತಮ್ಮಯ್ಯ (ಸ್ವಾತಂತ್ರ್ಯ ಹೋರಾಟ), 5ರಂದು ಮೈಸೂರು ಉಮೇಶ್ (ಬುಡಕಟ್ಟು ಮತ್ತು ಸಮೂಹ ಮಾಧ್ಯಮ), ಡಾ.ಎಂ.ಆರ್.ಸೀತಾರಾಂ (ಜೀವನ ಮೌಲ್ಯ), ವಾದಿರಾಜ (ಸಾಮಾಜಿಕ ಸಾಮರಸ್ಯ) ವಿಚಾರ ಮಂಡಿಸಲಿದ್ದಾರೆ ಎಂದರು.</p>.<p>ಶಿಬಿರದ ಸಮಾರೋಪ 6ರಂದು ನಡೆಯಲಿದ್ದು, ಕವಿಗೋಷ್ಠಿ, ಕಥಾಗೋಷ್ಠಿ ಏರ್ಪಡಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಡಾ.ಎಲ್.ಗೋಮತಿದೇವಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.</p>.<p>ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಷಣ್ಮುಖ, ಶಿಬಿರದ ಸಂಚಾಲಕ ಡಾ. ಪಿ.ಎಂ.ಕುಮಾರ್, ಗಿರಿಜನ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಹೊಸಹಳ್ಳಿ ವಿವೇಕ ಗಿರಿಜನ ಶಿಕ್ಷಣ ಕೇಂದ್ರದಲ್ಲಿ ಸೆ.2ರಿಂದ 6ರವರೆಗೆ ರಾಜ್ಯ ಮಟ್ಟದ ‘ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿ ಶಿಬಿರ’ ನಡೆಯಲಿದೆ.</p>.<p>‘ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ ನಡೆಯುವ ಶಿಬಿರವನ್ನು ಡಾ.ಆರ್. ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ್ ಕುಮಾರ್ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p><strong>2ರಂದು ‘ಬುಡಕಟ್ಟು ಸಮುದಾಯ</strong></p>.<p><strong></strong>ಸ್ವರೂಪ, ಲಕ್ಷಣ’ ಕುರಿತು ಡಾ.ಹಿ.ಚಿ.ಬೋರಲಿಂಗಯ್ಯ, ‘ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ’– ಡಾ.ನಾಗ.ಎಚ್.ಹುಬ್ಳಿ, ಕರ್ನಾಟಕ ಬುಡಕಟ್ಟುಗಳು ಕುರಿತು ಡಾ. ನಾಗೇಶ ಹೆಬ್ಬಾಳೆ ಮಾತನಾಡಲಿದ್ದಾರೆ ಎಂದು ಹೇಳಿದರು.</p>.<p>3ರಂದು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಪಿ.ಪಿ.ತಮ್ಮಯ್ಯ ಅವರು ತರಬೇತಿ ನೀಡ<br />ಲಿದ್ದು, ಡಾ.ಮಾಧವ ಪೆರಾಜೆ (ಕನ್ನಡ, ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ), ಡಾ.ಎಸ್.ಎಂ.ಮುತ್ತಯ್ಯ (ಬುಡಕಟ್ಟು ಸಾಹಿತ್ಯ ಮತ್ತು ಆಶಯ, ಅಭಿವ್ಯಕ್ತಿ), ಡಾ.ಕೃಷ್ಣಮೂರ್ತಿ ಹನೂರು (ಬುಡ<br />ಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ ), ಕುರುವ ಬಸವರಾಜ್ (ಬುಡಕಟ್ಟು ಸಂಸ್ಕೃತಿ ಆಚರಣೆ ಪರಂಪರೆ), ಕೆ.ಭಾಸ್ಕರ್ ದಾಸ್ ಎಕ್ಕಾರು (ಬುಡಕಟ್ಟು ಅಭಿವೃದ್ದಿ: ಸಂಘಸಂಸ್ಥೆಗಳ ಪಾತ್ರ) ಮಾತನಾಡಲಿದ್ದಾರೆ ಎಂದರು.</p>.<p>4ರಂದು ಡಾ.ಎಚ್.ಪಿ.ಜ್ಯೋತಿ (ಬುಡಕಟ್ಟು ಮಹಿಳೆ), ಡಾ.ಪಿ.ಕೆ. ಖಂಡೋಬ (ಬುಡಕಟ್ಟು ಭಾಷೆಗಳು: ಸ್ಥಿತ್ಯಂತರ), ಡಾ.ಮೀರಾಸಾಬಿಹಳ್ಳಿ ಶಿವಣ್ಣ (ಬುಡಕಟ್ಟು ಮಹಾಕಾವ್ಯ: ಸಾಂಸ್ಕೃತಿಕ ನಾಯಕ), ಪ್ರೊ.ಟಿ.ಟಿ.ಬಸವನಗೌಡ (ಬುಡಕಟ್ಟು ಯೋಜನೆ), ಸಂತೋಷ್ ತಮ್ಮಯ್ಯ (ಸ್ವಾತಂತ್ರ್ಯ ಹೋರಾಟ), 5ರಂದು ಮೈಸೂರು ಉಮೇಶ್ (ಬುಡಕಟ್ಟು ಮತ್ತು ಸಮೂಹ ಮಾಧ್ಯಮ), ಡಾ.ಎಂ.ಆರ್.ಸೀತಾರಾಂ (ಜೀವನ ಮೌಲ್ಯ), ವಾದಿರಾಜ (ಸಾಮಾಜಿಕ ಸಾಮರಸ್ಯ) ವಿಚಾರ ಮಂಡಿಸಲಿದ್ದಾರೆ ಎಂದರು.</p>.<p>ಶಿಬಿರದ ಸಮಾರೋಪ 6ರಂದು ನಡೆಯಲಿದ್ದು, ಕವಿಗೋಷ್ಠಿ, ಕಥಾಗೋಷ್ಠಿ ಏರ್ಪಡಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಡಾ.ಎಲ್.ಗೋಮತಿದೇವಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.</p>.<p>ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಷಣ್ಮುಖ, ಶಿಬಿರದ ಸಂಚಾಲಕ ಡಾ. ಪಿ.ಎಂ.ಕುಮಾರ್, ಗಿರಿಜನ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>