ಬ್ರೇನ್ ಹೆಮಾರೈಜ್ಗೆ ಒಳಗಾಗಿದ್ದ ಕುಶಾಲನಗರದ ಶೋಭಾ (48) ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇವರ ಒಂದು ಮೂತ್ರಪಿಂಡ ಹಾಗೂ ಲಿವರ್ ಅನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ, ಒಂದು ಮೂತ್ರಪಿಂಡವನ್ನು ಜೆಎಸ್ಎಸ್ ಆಸ್ಪತ್ರೆಗೆ, ಒಂದು ಹೃದಯದ ವಾಲ್ವ್ ಅನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೂ ನೀಡಲಾಗಿದೆ. ಇಬ್ಬರ ಕಾರ್ನಿಯಾಗಳನ್ನು ಮೈಸೂರಿನ ನೇತ್ರ ಬ್ಯಾಂಕಿಗೆ ನೀಡಲಾಗಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ್ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.