‘ಸೋಮವಾರ ಬಂಧನಕ್ಕೆ ಒಳಗಾಗಿದ್ದ ಗಿರೀಶ್, ತಾನು ತಯಾರಿಸುತ್ತಿದ್ದ ನಕಲಿ ರೆಮ್ಡಿಸಿವಿರ್ಅನ್ನು ಔಷಧ ಕಂಪನಿಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಮತ್ತು ಪ್ರಶಾಂತ್ ಎಂಬುವವರ ಮೂಲಕ ಮಾರಾಟ ಮಾಡುತ್ತಿದ್ದ. ಈಗ ಇವರು, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ವಿವರಗಳನ್ನು ತನಿಖಾ ತಂಡಕ್ಕೆ ನೀಡಿದ್ದಾರೆ. ಮೈಸೂರು, ಬೆಂಗಳೂರು ಮಾತ್ರವಲ್ಲದೇ; ಆಂಧ್ರಪ್ರದೇಶಕ್ಕೂ ಮಾರಾಟ ಮಾಡಿರುವ ಅಂಶ ಗೊತ್ತಾಗಿದೆ. ಇವರಿಂದ ನಕಲಿ ರೆಮ್ಡಿಸಿವರ್ ಖರೀದಿಸಿದವರ ವಿವರ ಕಲೆ ಹಾಕಲಾಗುತ್ತಿದೆ. ಸುಮಾರು 800 ಮಂದಿಗೆ ನಕಲಿ ರೆಮ್ಡಿಸಿವಿರ್ ನೀಡಲಾಗಿದ್ದು, ಇವುಗಳನ್ನು ಪಡೆದ ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ರೆಮ್ಡಿಸಿವಿರ್ ಖಾಲಿ ಬಾಟಲಿಗಳನ್ನು ಪೂರೈಸುತ್ತಿದ್ದ ಆರೋಪಿಗಳಾದ ಶಿವಪ್ಪ ಹಾಗೂ ಮಂಗಳಾ ಅವರ ವಿಚಾರಣೆ ತೀವ್ರಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.