<p><strong>ಮೈಸೂರು:</strong> ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆಯ ಮೇಲಿನ ದಾಳಿ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.</p>.<p>ಈ ವೇಳೆ ಮಾತನಾಡಿದ ಮುಖಂಡ ಪುರುಷೋತ್ತಮ, ಅಸ್ಪೃಶ್ಯತೆಯ ಕೂಪವಾಗಿದ್ದ ಭಾರತಕ್ಕೆ ಬೆಳಕು ನೀಡುವ ಸಂವಿಧಾನವನ್ನು ನೀಡಿದ್ದು ಅಂಬೇಡ್ಕರ್. ಇದರಿಂದಾಗಿ ಭಾರತ ಮನುವಾದಿ ಹಿಂದೂ ರಾಷ್ಟ್ರವಾಗುವುದು ತಪ್ಪಿತು. ಹೀಗಾಗಿ, ಮನುವಾದಿಗಳಿಗೆ ಇವರ ಮೇಲೆ ದ್ವೇಷ ಇದೆ’ ಎಂದರು.</p>.<p>ಅಂಬೇಡ್ಕರ್ ನಿವಾಸದ ಮೇಲೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ಪಾಲಿಕೆ ಸದಸ್ಯ ಸುನಂದಕುಮಾರ್, ಮುಖಂಡರಾದ ವಿಜಯನಗರ ಅಶೋಕ್, ರೇವಣ್ಣ, ಪ್ರದೀಪ್ಕುಮಾರ್, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆಯ ಮೇಲಿನ ದಾಳಿ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.</p>.<p>ಈ ವೇಳೆ ಮಾತನಾಡಿದ ಮುಖಂಡ ಪುರುಷೋತ್ತಮ, ಅಸ್ಪೃಶ್ಯತೆಯ ಕೂಪವಾಗಿದ್ದ ಭಾರತಕ್ಕೆ ಬೆಳಕು ನೀಡುವ ಸಂವಿಧಾನವನ್ನು ನೀಡಿದ್ದು ಅಂಬೇಡ್ಕರ್. ಇದರಿಂದಾಗಿ ಭಾರತ ಮನುವಾದಿ ಹಿಂದೂ ರಾಷ್ಟ್ರವಾಗುವುದು ತಪ್ಪಿತು. ಹೀಗಾಗಿ, ಮನುವಾದಿಗಳಿಗೆ ಇವರ ಮೇಲೆ ದ್ವೇಷ ಇದೆ’ ಎಂದರು.</p>.<p>ಅಂಬೇಡ್ಕರ್ ನಿವಾಸದ ಮೇಲೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ಪಾಲಿಕೆ ಸದಸ್ಯ ಸುನಂದಕುಮಾರ್, ಮುಖಂಡರಾದ ವಿಜಯನಗರ ಅಶೋಕ್, ರೇವಣ್ಣ, ಪ್ರದೀಪ್ಕುಮಾರ್, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>