‘ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ನಡೆಸುವ ಸಂಬಂಧ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶಾಖಾ ಮಠಗಳಲ್ಲಿ, ಜಿಲ್ಲೆಗಳಲ್ಲಿ ಸಭೆ ಕರೆದಿದ್ದಾರೆ. ಎಲ್ಲ ಕಡೆಗಳಿಂದ ಸಮುದಾಯದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಮ್ಮ ಜನಾಂಗವನ್ನು ಮುಂದೆಯೂ ಇದೇ ರೀತಿ ತುಳಿಯುವುದಾದರೆ ನಾವು ಬೇರೆ ರಾಜ್ಯವನ್ನೇ ಕೇಳಬೇಕಾದೀತು ಎಂಬ ಸುಳಿವನ್ನೂ ಪೀಠಾಧ್ಯಕ್ಷರು ಕೊಟ್ಟಿದ್ದಾರೆ’ ಎಂದು ಹೇಳಿದರು.