ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಬೇಕಾದೀತು: ಸೋಮೇಶ್ವರನಾಥ ಸ್ವಾಮೀಜಿ

ಮೈಸೂರು: ‘ಮೀಸಲಾತಿ ವಿಚಾರದಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎಬ್ಬಿಸಬೇಕಾದೀತು’ ಎಂದು ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ ಎಚ್ಚರಿಸಿದರು.
ಭಾನುವಾರ ನಡೆದ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಸಭೆಯಲ್ಲಿ ಮಾತನಾಡಿ, ’ಮೈಸೂರು ಅಥವಾ ಬೆಂಗಳೂರು ನಗರ ಬೆಳೆದಿರುವುದು ಒಕ್ಕಲಿಗ ಸಮಾಜದವರ ಆಸ್ತಿಯಿಂದ. ಈಗ ಅವರೆಲ್ಲರೂ ಆಸ್ತಿ ಕಳೆದುಕೊಂಡು ಕೂಲಿ ಮಾಡುತ್ತಿದ್ದಾರೆ. ಸರ್ಕಾರ ಶೇ 4 ರಷ್ಟು ಮಾತ್ರ ಮೀಸಲಾತಿ ನೀಡಿ ಅನ್ಯಾಯ ಮಾಡಿದೆ’ ಎಂದರು.
‘ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ನಡೆಸುವ ಸಂಬಂಧ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶಾಖಾ ಮಠಗಳಲ್ಲಿ, ಜಿಲ್ಲೆಗಳಲ್ಲಿ ಸಭೆ ಕರೆದಿದ್ದಾರೆ. ಎಲ್ಲ ಕಡೆಗಳಿಂದ ಸಮುದಾಯದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಮ್ಮ ಜನಾಂಗವನ್ನು ಮುಂದೆಯೂ ಇದೇ ರೀತಿ ತುಳಿಯುವುದಾದರೆ ನಾವು ಬೇರೆ ರಾಜ್ಯವನ್ನೇ ಕೇಳಬೇಕಾದೀತು ಎಂಬ ಸುಳಿವನ್ನೂ ಪೀಠಾಧ್ಯಕ್ಷರು ಕೊಟ್ಟಿದ್ದಾರೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.