ಧರ್ಮಸ್ಥಳದ ಎಸ್ಕೆಡಿಆರ್ಡಿಪಿ, ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಿ.ಪೈಸ್ ಮಾತನಾಡಿ, ‘ಪರಿಸರದ ಪ್ರೀತಿ ಪ್ರತಿ ನಿತ್ಯದ ಧ್ಯೇಯವಾಗಬೇಕು. ನಿಸರ್ಗದ ಈ ಭೂಮಿಯಲ್ಲಿ ಅರಣ್ಯ ಗರ್ಭಗುಡಿ ಇದ್ದಂತೆ. ಇದನ್ನು ರಕ್ಷಿಸುವ ಕಾಳಜಿ, ಬದ್ಧತೆ ಹೊಂದಬೇಕು. ಅರಣ್ಯ ನಾಶದಿಂದ ಮಳೆ ಕೊರತೆ ಸಂಭವಿಸಿದ್ದು, ನದಿಗಳು ಬತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.