<p><strong>ಮೈಸೂರು</strong>: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಮಾರುಕಟ್ಟೆ ಮತ್ತು ಗ್ರಾಹಕರ ನಡುವಿನ ಸಹಾಯಸೇತು ಆಗಬಲ್ಲದು’ ಎಂದು ಅವಿವಾ ಇಂಡಿಯಾದ ಬ್ಯಾಂಕ್ ಅಶ್ಯೂರನ್ಸ್ನ ನ್ಯಾಷನಲ್ ಹೆಡ್ ಛಾಯನ್ ಗುಪ್ತ ಹೇಳಿದರು.</p>.<p>ಇಲ್ಲಿನ ಚಾಮುಂಡಿಬೆಟ್ಟ ರಸ್ತೆಯ ಎಸ್ಡಿಎಂ ಮ್ಯಾನೇಜ್ಮೆಂಟ್ ಸಂಸ್ಥೆ (ಎಸ್ಡಿಎಂ–ಐಎಂಡಿ)<br>ಯಲ್ಲಿ ‘ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಮತ್ತು ರೂಪಾಂತರ: ಸುಧಾರಣೆ ಉದ್ದೇಶ, ಕಾರ್ಯಕ್ಷಮತೆ ಮತ್ತು ಪರಿಣಾಮಕ್ಕಾಗಿ ವೈಯಕ್ತಿಕಗೊಳಿಸುವಿಕೆ’ ಕುರಿತು ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.</p>.<p>‘ಭಾರತೀಯ ಬ್ಯಾಂಕಿಂಗ್ ಇಂದು ಪ್ರಸ್ತುತ ಗಮನಾರ್ಹವಾದ ಡಿಜಿಟಲ್ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಪ್ರಸ್ತುತ ನಿತ್ಯ ಏಳು ಲಕ್ಷದಷ್ಟು ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ. ಇದು ಅದ್ಭುತ ಎನಿಸಿದರೂ ರಾಷ್ಟ್ರದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಈ ವಹಿವಾಟಿನ ಸಂಖ್ಯೆ ಅತ್ಯಲ್ಪ ಎನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<h2>ಹೊಸ ಆಯಾಮ:</h2>.<p>‘ಪ್ರಸ್ತುತ ಹೆಚ್ಚಿನ ಬ್ಯಾಂಕಿಂಗ್ ವಹಿವಾಟುಗಳು ಆನ್ಲೈನ್ನಲ್ಲಿ ನಡೆಯುತ್ತಿದ್ದು, ಗ್ರಾಹಕರೊಂದಿಗೆ ನೇರವಾಗಿ ಒಡನಾಡುವ ಅವಕಾಶಗಳು ಕಡಿಮೆಯಾಗಿವೆ. ಆದಾಗ್ಯೂ, ಜನರೇಟಿವ್ ಎಐನಂತಹ ತಂತ್ರಜ್ಞಾನಗಳು ಈ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತಿವೆ. ಜೊತೆಗೆ, ಗ್ರಾಹಕರ ಅಗತ್ಯತೆಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಅವಕಾಶ ಕಲ್ಪಿಸಿವೆ’ ಎಂದರು.</p>.<p>‘ಇಂದಿನ ಗ್ರಾಹಕರ ಅಗತ್ಯಗಳು, ನಿರೀಕ್ಷೆಗಳು ನಿರಂತರವಾಗಿ ಬದಲಾಗುತ್ತಲೇ ಇದ್ದು, ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಗೆಯ ಸವಾಲಾಗಿದೆ. ಆದರೆ, ತಂತ್ರಜ್ಞಾನದ ಸಹಾಯದೊಂದಿಗೆ ಡೇಟಾ ಸೆಟ್ಗಳ ಆಧಾರದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಪೂರಕ ಸೇವೆಗಳನ್ನು ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದರು.</p>.<h2>ಮುನ್ನೆಚ್ಚರಿಕೆ ಕ್ರಮ: </h2>.<p>‘ಮಾಹಿತಿ ಕಳವು ಮತ್ತು ಡಿಜಿಟಲ್ ವಂಚನೆಗಳಂತಹ ವಿಷಯದಲ್ಲಿ, ಗ್ರಾಹಕರ ರಕ್ಷಣೆಗಾಗಿ ಬ್ಯಾಂಕ್ಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ. ಜನರೂ ಆರ್ಥಿಕ ಶಿಸ್ತು ಮತ್ತು ಅರಿವನ್ನು ಹೊಂದುವುದೂ ಮುಖ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಭಾರತಲ್ಲಿ ಶೇ 6ರಷ್ಟು ಜನರು ಮಾತ್ರವೇ ವಿಮಾ ಸೌಲಭ್ಯ ಹೊಂದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು, 2047ರ ವೇಳೆಗೆ ಪ್ರತಿ ಭಾರತೀಯನೂ ಬ್ಯಾಂಕ್ ಖಾತೆ ಹಾಗೂ ವಿಮೆ ಹೊಂದುವಂತೆ ಮಾಡುವ ಗುರಿ ಇಟ್ಟುಕೊಂಡಿದೆ’ ಎಂದರು.</p>.<h2>ಅಡ್ಡಿಯಾದೀತು: </h2>.<p>ಐಸೋಕ್ರಾಟ್ಸ್ ಐಎನ್ಸಿಯ ಕಂಟ್ರಿ ಹೆಡ್ ಅಶ್ವಿನಿ ತಮ್ಮಯ್ಯ, ‘ಶೇ 80ರಷ್ಟು ಮಾರುಕಟ್ಟೆ ಪರಿಣತರು ಸೂಕ್ತ ಹಾಗೂ ತಕ್ಷಣಕ್ಕೆ ಕಾರ್ಯತತ್ಪರ ಆಗಬಹುದಾದ ಡೇಟಾಗಳ (ದತ್ತಾಂಶ) ಕೊರತೆಯನ್ನು ಎದುರಿಸುತ್ತಿದ್ದಾರೆ. ಇದು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿ ಉಂಟು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.</p>.<p>ಎಸ್ಡಿಎಂ–ಐಎಂಡಿ ಡೀನ್ ಮೊಹಮ್ಮದ್ ಮಿನ್ಹಾಜ್, ‘ತಂತ್ರಜ್ಞಾನವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದ್ದು, ಎಐ ಅದೆಲ್ಲದರ ಕೇಂದ್ರಸ್ಥಾನದಲ್ಲಿದೆ’ ಎಂದರು.</p>.<p>ಮಾರುಕಟ್ಟೆ ವಿಭಾಗದ ಸಹ ಪ್ರಾಧ್ಯಾಪಕಿ ಕೀರ್ತನ್ ರಾಜ್, ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಟಿಟಿಕೆ ಪ್ರೆಸ್ಟೀಜ್ ಇಂಡಿಯಾದ ಇ-ಕಾಮರ್ಸ್ ವಿಭಾಗದ ಹೆಡ್ ಪವನ್ಕುಮಾರ್ ರಸ್ತೋಗಿ, ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ಆರ್ಒಕೆ ಮತ್ತು ಗೋವಾ ವಿಭಾಗದ ಉಪಾಧ್ಯಕ್ಷ ಗಗನ್ ರಂಕಾ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಮಾರುಕಟ್ಟೆ ಮತ್ತು ಗ್ರಾಹಕರ ನಡುವಿನ ಸಹಾಯಸೇತು ಆಗಬಲ್ಲದು’ ಎಂದು ಅವಿವಾ ಇಂಡಿಯಾದ ಬ್ಯಾಂಕ್ ಅಶ್ಯೂರನ್ಸ್ನ ನ್ಯಾಷನಲ್ ಹೆಡ್ ಛಾಯನ್ ಗುಪ್ತ ಹೇಳಿದರು.</p>.<p>ಇಲ್ಲಿನ ಚಾಮುಂಡಿಬೆಟ್ಟ ರಸ್ತೆಯ ಎಸ್ಡಿಎಂ ಮ್ಯಾನೇಜ್ಮೆಂಟ್ ಸಂಸ್ಥೆ (ಎಸ್ಡಿಎಂ–ಐಎಂಡಿ)<br>ಯಲ್ಲಿ ‘ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಮತ್ತು ರೂಪಾಂತರ: ಸುಧಾರಣೆ ಉದ್ದೇಶ, ಕಾರ್ಯಕ್ಷಮತೆ ಮತ್ತು ಪರಿಣಾಮಕ್ಕಾಗಿ ವೈಯಕ್ತಿಕಗೊಳಿಸುವಿಕೆ’ ಕುರಿತು ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.</p>.<p>‘ಭಾರತೀಯ ಬ್ಯಾಂಕಿಂಗ್ ಇಂದು ಪ್ರಸ್ತುತ ಗಮನಾರ್ಹವಾದ ಡಿಜಿಟಲ್ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಪ್ರಸ್ತುತ ನಿತ್ಯ ಏಳು ಲಕ್ಷದಷ್ಟು ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ. ಇದು ಅದ್ಭುತ ಎನಿಸಿದರೂ ರಾಷ್ಟ್ರದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಈ ವಹಿವಾಟಿನ ಸಂಖ್ಯೆ ಅತ್ಯಲ್ಪ ಎನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<h2>ಹೊಸ ಆಯಾಮ:</h2>.<p>‘ಪ್ರಸ್ತುತ ಹೆಚ್ಚಿನ ಬ್ಯಾಂಕಿಂಗ್ ವಹಿವಾಟುಗಳು ಆನ್ಲೈನ್ನಲ್ಲಿ ನಡೆಯುತ್ತಿದ್ದು, ಗ್ರಾಹಕರೊಂದಿಗೆ ನೇರವಾಗಿ ಒಡನಾಡುವ ಅವಕಾಶಗಳು ಕಡಿಮೆಯಾಗಿವೆ. ಆದಾಗ್ಯೂ, ಜನರೇಟಿವ್ ಎಐನಂತಹ ತಂತ್ರಜ್ಞಾನಗಳು ಈ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತಿವೆ. ಜೊತೆಗೆ, ಗ್ರಾಹಕರ ಅಗತ್ಯತೆಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಅವಕಾಶ ಕಲ್ಪಿಸಿವೆ’ ಎಂದರು.</p>.<p>‘ಇಂದಿನ ಗ್ರಾಹಕರ ಅಗತ್ಯಗಳು, ನಿರೀಕ್ಷೆಗಳು ನಿರಂತರವಾಗಿ ಬದಲಾಗುತ್ತಲೇ ಇದ್ದು, ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಗೆಯ ಸವಾಲಾಗಿದೆ. ಆದರೆ, ತಂತ್ರಜ್ಞಾನದ ಸಹಾಯದೊಂದಿಗೆ ಡೇಟಾ ಸೆಟ್ಗಳ ಆಧಾರದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಪೂರಕ ಸೇವೆಗಳನ್ನು ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದರು.</p>.<h2>ಮುನ್ನೆಚ್ಚರಿಕೆ ಕ್ರಮ: </h2>.<p>‘ಮಾಹಿತಿ ಕಳವು ಮತ್ತು ಡಿಜಿಟಲ್ ವಂಚನೆಗಳಂತಹ ವಿಷಯದಲ್ಲಿ, ಗ್ರಾಹಕರ ರಕ್ಷಣೆಗಾಗಿ ಬ್ಯಾಂಕ್ಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ. ಜನರೂ ಆರ್ಥಿಕ ಶಿಸ್ತು ಮತ್ತು ಅರಿವನ್ನು ಹೊಂದುವುದೂ ಮುಖ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಭಾರತಲ್ಲಿ ಶೇ 6ರಷ್ಟು ಜನರು ಮಾತ್ರವೇ ವಿಮಾ ಸೌಲಭ್ಯ ಹೊಂದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು, 2047ರ ವೇಳೆಗೆ ಪ್ರತಿ ಭಾರತೀಯನೂ ಬ್ಯಾಂಕ್ ಖಾತೆ ಹಾಗೂ ವಿಮೆ ಹೊಂದುವಂತೆ ಮಾಡುವ ಗುರಿ ಇಟ್ಟುಕೊಂಡಿದೆ’ ಎಂದರು.</p>.<h2>ಅಡ್ಡಿಯಾದೀತು: </h2>.<p>ಐಸೋಕ್ರಾಟ್ಸ್ ಐಎನ್ಸಿಯ ಕಂಟ್ರಿ ಹೆಡ್ ಅಶ್ವಿನಿ ತಮ್ಮಯ್ಯ, ‘ಶೇ 80ರಷ್ಟು ಮಾರುಕಟ್ಟೆ ಪರಿಣತರು ಸೂಕ್ತ ಹಾಗೂ ತಕ್ಷಣಕ್ಕೆ ಕಾರ್ಯತತ್ಪರ ಆಗಬಹುದಾದ ಡೇಟಾಗಳ (ದತ್ತಾಂಶ) ಕೊರತೆಯನ್ನು ಎದುರಿಸುತ್ತಿದ್ದಾರೆ. ಇದು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿ ಉಂಟು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.</p>.<p>ಎಸ್ಡಿಎಂ–ಐಎಂಡಿ ಡೀನ್ ಮೊಹಮ್ಮದ್ ಮಿನ್ಹಾಜ್, ‘ತಂತ್ರಜ್ಞಾನವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದ್ದು, ಎಐ ಅದೆಲ್ಲದರ ಕೇಂದ್ರಸ್ಥಾನದಲ್ಲಿದೆ’ ಎಂದರು.</p>.<p>ಮಾರುಕಟ್ಟೆ ವಿಭಾಗದ ಸಹ ಪ್ರಾಧ್ಯಾಪಕಿ ಕೀರ್ತನ್ ರಾಜ್, ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಟಿಟಿಕೆ ಪ್ರೆಸ್ಟೀಜ್ ಇಂಡಿಯಾದ ಇ-ಕಾಮರ್ಸ್ ವಿಭಾಗದ ಹೆಡ್ ಪವನ್ಕುಮಾರ್ ರಸ್ತೋಗಿ, ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ಆರ್ಒಕೆ ಮತ್ತು ಗೋವಾ ವಿಭಾಗದ ಉಪಾಧ್ಯಕ್ಷ ಗಗನ್ ರಂಕಾ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>