ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯರ ವಲಸೆ ಎಂಬುದು ಬ್ರಿಟಿಷರ ಸೃಷ್ಟಿ: ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದನೆ

ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದನೆ
Last Updated 26 ಮಾರ್ಚ್ 2023, 1:55 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಆಡಳಿತ ಸುಗಮವಾಗಿ ನಡೆಸಲು ಆರ್ಯರು ಹೊರಗಿನಿಂದ ಬಂದರು ಎಂಬ ವಾದವನ್ನು ಬ್ರಿಟಿಷರು ಹುಟ್ಟುಹಾಕಿದರು’ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದಿಸಿದರು.

ನಗರದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಅಜಕ್ಕಳ ಗಿರೀಶ ಭಟ್ ಅವರ ‘ಬಹುವಚನಕ್ಕೊಂದೇ ತತ್ತ್ವ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು,

‘ಕ್ವಿಟ್‌ ಇಂಡಿಯಾ ಚಳವಳಿ ತೀವ್ರವಾಗಿದ್ದಾಗ ಆರ್ಯರ ವಾದ ಮುನ್ನಲೆಗೆ ಬಂದಿತು. ಅದನ್ನೇ ಜವಹರಲಾಲ್‌ ನೆಹರೂ ಅವರು ಡಿಸ್ಕವರಿ ಆಫ್‌ ಇಂಡಿಯಾದಲ್ಲಿ ಹೇಳಿದರು’ ಎಂದರು.

‘ಸಾವರ್ಕರ್‌ ಹಾಗೂ ನೆಹರೂ ಇಬ್ಬರೂ ಜೈಲು ಅನುಭವಿಸಿದ್ದಾರೆ. ನೆಹರೂ ಐಷಾರಾಮಿಯ ನೈನಿತಾಲ್‌ ಜೈಲಿಗೆ ಕಳುಹಿಸಿದರೆ, ಸಾವರ್ಕರ್‌ ಅಂಡಮಾನ್ ಜೈಲಿನಲ್ಲಿ ದೀರ್ಘ ಕಾಲ ನರಕಯಾತನೆ ಅನುಭವಿಸಿದರು. ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದು ಬಿಡುಗಡೆಯಾದರು. ಅದನ್ನೇ ಕ್ಷಮೆಯಾಚಿಸಿದರು ಎಂದು ಟೀಕಿಸಲಾಗುತ್ತದೆ. ನೆಹರೂ ಹಾಗೂ ಸಾವರ್ಕರ್‌ ಅವರಿಗೆ ಹೋಲಿಕೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

ಲೇಖಕ ರೋಹಿತ್‌ ಚಕ್ರತೀರ್ಥ, ‘ವಲಸಿಗರಾದ ಆರ್ಯರು ಸ್ಥಳೀಯರ ಮೇಲೆ ಆಕ್ರಮಣ ಮಾಡಿದರು ಎಂಬ ಸುಳ್ಳುಗಳನ್ನು ಬಿತ್ತಲಾಗಿದೆ. ಇದೀಗ ನಿಜವಾದ ಇತಿಹಾಸ ಏನು ಎಂಬುದು ಭಾರತೀಯರಿಗೆ ಅರ್ಥವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಒ.ಶಾಮ ಭಟ್, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್. ಮುರಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT