<p><strong>ಮೈಸೂರು:</strong> ‘ಈಚಿನ ದಿನಗಳಲ್ಲಿ ಒಕ್ಕಲಿಗ ನಾಯಕರ ನಡುವಿನ ಸಾರ್ವಜನಿಕ ಸಂವಾದ ಗೌರವ ತರುವಂತೆ ಇಲ್ಲ. ಮಠಾಧೀಶರು ತಮ್ಮ ಧಾರ್ಮಿಕ ಅಧಿಕಾರ ಬಳಸಿ ತಿಳಿಹೇಳಿ ಅಂತ್ಯ ಹಾಡಬೇಕು’ ಎಂದು ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಕೋರಿದರು.</p>.<p>‘ಫಸ್ಟ್ ಸರ್ಕಲ್’ ಸೊಸೈಟಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಒಕ್ಕಲಿಗ ಹೂಡಿಕೆದಾರರ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸದಾ ಪ್ರಚಾರದಲ್ಲಿರಬೇಕು ಎಂಬ ಧೋರಣೆಯಿಂದ ಈ ಸಮಸ್ಯೆಯಾಗಿದೆ. ರಾಜಕಾರಣಿಗಳು ಹಳಿ ತಪ್ಪಿದ್ದು, ಅವರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದರು.</p>.<p>‘ಇತರರು ನಮ್ಮ ಸಮುದಾಯದ ಬಗ್ಗೆ ಲೇವಡಿ ಮಾಡಬಾರದು. ಹೀಗಾಗಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಶ್ರೀಗಳು ಮಧ್ಯಸ್ಥಿಕೆ ವಹಿಸಬೇಕು’ ಎಂದು ಕೋರಿದರು.</p>.<p>‘1952ರಿಂದ ಈವರೆಗೆ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಸಾಕಷ್ಟು ರಾಜಕಾರಣಿಗಳು ಉತ್ತಮ ಕೆಲಸ ಮಾಡಿ, ಹೆಸರು ಪಡೆದಿದ್ದಾರೆ. ವಾದ–ಪ್ರತಿವಾದಗಳು ನಡೆಯಲಿ. ಯಾರಿಗಾದರೂ ಅವಕಾಶ ನೀಡಲಿ. ಜನರ ತೀರ್ಮಾನಕ್ಕೆ ತಲೆಬಾಗೋಣ. ಆದರೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ದೂಷಿಸುವುದು ಬೇಡ’ ಎಂದು ಸಲಹೆ ನೀಡಿದರು.</p>.<p>ಈ ಸಂದರ್ಭದಲ್ಲಿ ನಂಜಾವಧೂತ ಶ್ರೀಗಳು ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಈಚಿನ ದಿನಗಳಲ್ಲಿ ಒಕ್ಕಲಿಗ ನಾಯಕರ ನಡುವಿನ ಸಾರ್ವಜನಿಕ ಸಂವಾದ ಗೌರವ ತರುವಂತೆ ಇಲ್ಲ. ಮಠಾಧೀಶರು ತಮ್ಮ ಧಾರ್ಮಿಕ ಅಧಿಕಾರ ಬಳಸಿ ತಿಳಿಹೇಳಿ ಅಂತ್ಯ ಹಾಡಬೇಕು’ ಎಂದು ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಕೋರಿದರು.</p>.<p>‘ಫಸ್ಟ್ ಸರ್ಕಲ್’ ಸೊಸೈಟಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಒಕ್ಕಲಿಗ ಹೂಡಿಕೆದಾರರ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸದಾ ಪ್ರಚಾರದಲ್ಲಿರಬೇಕು ಎಂಬ ಧೋರಣೆಯಿಂದ ಈ ಸಮಸ್ಯೆಯಾಗಿದೆ. ರಾಜಕಾರಣಿಗಳು ಹಳಿ ತಪ್ಪಿದ್ದು, ಅವರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದರು.</p>.<p>‘ಇತರರು ನಮ್ಮ ಸಮುದಾಯದ ಬಗ್ಗೆ ಲೇವಡಿ ಮಾಡಬಾರದು. ಹೀಗಾಗಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಶ್ರೀಗಳು ಮಧ್ಯಸ್ಥಿಕೆ ವಹಿಸಬೇಕು’ ಎಂದು ಕೋರಿದರು.</p>.<p>‘1952ರಿಂದ ಈವರೆಗೆ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಸಾಕಷ್ಟು ರಾಜಕಾರಣಿಗಳು ಉತ್ತಮ ಕೆಲಸ ಮಾಡಿ, ಹೆಸರು ಪಡೆದಿದ್ದಾರೆ. ವಾದ–ಪ್ರತಿವಾದಗಳು ನಡೆಯಲಿ. ಯಾರಿಗಾದರೂ ಅವಕಾಶ ನೀಡಲಿ. ಜನರ ತೀರ್ಮಾನಕ್ಕೆ ತಲೆಬಾಗೋಣ. ಆದರೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ದೂಷಿಸುವುದು ಬೇಡ’ ಎಂದು ಸಲಹೆ ನೀಡಿದರು.</p>.<p>ಈ ಸಂದರ್ಭದಲ್ಲಿ ನಂಜಾವಧೂತ ಶ್ರೀಗಳು ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>