ನಗರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಸೋಮವಾರ ‘ಮತ್ತೆ ಕಲ್ಯಾಣ’ದ ಅಂಗವಾಗಿ ಸಹಮತ ವೇದಿಕೆ ಆಯೋಜಿಸಿದ್ದ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ರಚಿಸಿರುವ ವಚನ ಚಳವಳಿಯ ಸಂದರ್ಭದ ಚಿತ್ರಗಳ ಪ್ರದರ್ಶನ ಹಾಗೂ ‘ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ’ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಸವೇಶ್ವರರ ತತ್ವ, ಆದರ್ಶ ಸಕಾಲಿಕವಾಗಿವೆ. ಇವು ಸಂವಿಧಾನದಲ್ಲಿ ಅಡಕಗೊಂಡಿದ್ದು, ಇವಕ್ಕೆ ಅಪಚಾರವಾಗದಂತೆ ನಡೆದುಕೊಳ್ಳಬೇಕಿದೆ’ ಎಂದರು.