<p>ಮೈಸೂರು: ಎನ್ಐಇ ಕಾಲೇಜು ತಂಡವು ‘ವಿಟಿಯು– ಮೈಸೂರು ವಲಯ’ದ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. </p>.<p>ಕಾಲೇಜಿನ ಒಳಾಂಗಣ ಕ್ರೀಡಾ ಸಮುಚ್ಛಯದಲ್ಲಿ ಸೋಮವಾರ ನಡೆದ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ತಂಡವು 64–20 ಪಾಯಿಂಟ್ ಅಂತರದಲ್ಲಿ ಮಹಾರಾಜ ತಾಂತ್ರಿಕ ಕಾಲೇಜು (ಎಂಐಟಿ) ತಂಡವನ್ನು ಮಣಿಸಿತು.</p>.<p>ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಎನ್ಐಇ ಕಾಲೇಜು ತಂಡ 41–28 ಅಂತರದಲ್ಲಿ ಪೊನ್ನಂಪೇಟೆಯ ಸಿಐಟಿ ಕಾಲೇಜು ತಂಡದ ವಿರುದ್ಧ ಜಯ ಸಾಧಿಸಿ, ಅಂತಿಮ ಘಟ್ಟಕ್ಕೆ ಪ್ರವೇಶಿಸಿತ್ತು. ಎಂಐಟಿ ತಂಡದವರು 49–48ರಿಂದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡದವರನ್ನು ರೋಚಕವಾಗಿ ಮಣಿಸಿ ಫೈನಲ್ ತಲುಪಿದ್ದರು.</p>.<p>ಟೂರ್ನಿಗೆ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರ ಶ್ರವಣ್ ಅರಸ್ ಚಾಲನೆ ನೀಡಿದರು.</p>.<p>ಎನ್ಐಇ ಆಡಳಿತ ಸಮಿತಿಯ ಕಾರ್ಯದರ್ಶಿ ಎನ್.ಸತ್ಯಕುಮಾರ್, ಉಪ ಪ್ರಾಂಶುಪಾಲ ಕೆ.ಸಿ.ಮಂಜುನಾಥ್, ವಿಟಿಯು ದೈಹಿಕ ಶಿಕ್ಷಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಎಚ್.ಸಿ.ಸುದಿನ, ಕಾಲೇಜಿ ದೈಹಿಕ ಶಿಕ್ಷಣ ನಿರ್ದೇಶಕಿ ಆರ್.ಕಾವ್ಯಾ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಎನ್ಐಇ ಕಾಲೇಜು ತಂಡವು ‘ವಿಟಿಯು– ಮೈಸೂರು ವಲಯ’ದ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. </p>.<p>ಕಾಲೇಜಿನ ಒಳಾಂಗಣ ಕ್ರೀಡಾ ಸಮುಚ್ಛಯದಲ್ಲಿ ಸೋಮವಾರ ನಡೆದ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ತಂಡವು 64–20 ಪಾಯಿಂಟ್ ಅಂತರದಲ್ಲಿ ಮಹಾರಾಜ ತಾಂತ್ರಿಕ ಕಾಲೇಜು (ಎಂಐಟಿ) ತಂಡವನ್ನು ಮಣಿಸಿತು.</p>.<p>ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಎನ್ಐಇ ಕಾಲೇಜು ತಂಡ 41–28 ಅಂತರದಲ್ಲಿ ಪೊನ್ನಂಪೇಟೆಯ ಸಿಐಟಿ ಕಾಲೇಜು ತಂಡದ ವಿರುದ್ಧ ಜಯ ಸಾಧಿಸಿ, ಅಂತಿಮ ಘಟ್ಟಕ್ಕೆ ಪ್ರವೇಶಿಸಿತ್ತು. ಎಂಐಟಿ ತಂಡದವರು 49–48ರಿಂದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡದವರನ್ನು ರೋಚಕವಾಗಿ ಮಣಿಸಿ ಫೈನಲ್ ತಲುಪಿದ್ದರು.</p>.<p>ಟೂರ್ನಿಗೆ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರ ಶ್ರವಣ್ ಅರಸ್ ಚಾಲನೆ ನೀಡಿದರು.</p>.<p>ಎನ್ಐಇ ಆಡಳಿತ ಸಮಿತಿಯ ಕಾರ್ಯದರ್ಶಿ ಎನ್.ಸತ್ಯಕುಮಾರ್, ಉಪ ಪ್ರಾಂಶುಪಾಲ ಕೆ.ಸಿ.ಮಂಜುನಾಥ್, ವಿಟಿಯು ದೈಹಿಕ ಶಿಕ್ಷಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಎಚ್.ಸಿ.ಸುದಿನ, ಕಾಲೇಜಿ ದೈಹಿಕ ಶಿಕ್ಷಣ ನಿರ್ದೇಶಕಿ ಆರ್.ಕಾವ್ಯಾ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>