‘ಈ ಕಾಯ್ದೆಯ ಜಾರಿಯನ್ನು ತಡೆಯಲು ಐದು ವರ್ಷಗಳಿಂದ ನಾಲ್ಕು ಸಾರ್ವತ್ರಿಕ ಮುಷ್ಕರಗಳನ್ನು ಹಾಗೂ ಸಂಸತ್ ಚಲೊ ಚಳವಳಿಗಳನ್ನು ನಡೆಸಲಾಯಿತು. ಆದರೂ, ಸರ್ಕಾರ ಕಾಯ್ದೆ ಜಾರಿಗೊಳಿಸಲು ಅಣಿಯಾಗಿದೆ. ಅಂದು ಸರಿಯಲ್ಲ ಎಂದಿದ್ದನ್ನು,ಇಂದು ಸರಿ ಎಂದು ಒಪ್ಪಿಸಲಾಗುತ್ತಿದೆ. ಇದರ ವಿರುದ್ಧದ ಗಟ್ಟಿದನಿ, ಪಿಸುದನಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.