ಮೈಸೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ನಗರಕ್ಕೆ ಆಗಮಿಸಿದ್ದು, ವೈದ್ಯರೊಬ್ಬರನ್ನು ಭೇಟಿಯಾಗಿ ಆರೋಗ್ಯ ಸಲಹೆ ಪಡೆದರು.
ಬೆಳಿಗ್ಗೆ 11.15ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಬಂದ ಅವರು, ನಂತರ ಖಾಸಗಿ ಕಾರಿನಲ್ಲಿ ನಗರದ ನಂಜುಮಳಿಗೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದರು. ಅಲ್ಲಿ ನರರೋಗ ತಜ್ಞ ಜಿ.ಎಸ್. ಜನಾರ್ಧನ್ ಅವರನ್ನು ಭೇಟಿ ಮಾಡಿ ಆರೋಗ್ಯ ಸಲಹೆ ಪಡೆದರು. ಬಳಿಕ ವಿಶೇಷ ವಿಮಾನದ ಮೂಲಕ ಇಲ್ಲಿಂದ ವಾಪಸ್ ಆದರು ಎಂದು ಮೂಲಗಳು ತಿಳಿಸಿವೆ.
ನಿತೀಶ್ ಅವರಿಗೆ ರಾಜ್ಯಸಭಾ ಸದಸ್ಯ ಸಂಜಯ್ಕುಮಾರ್ ಝಾ ಸೇರಿದಂತೆ ಜೆಡಿಯು ಮುಖಂಡರು ಸಾಥ್ ನೀಡಿದರು. ಇದೊಂದು ಖಾಸಗಿ ಭೇಟಿಯಾಗಿತ್ತು.