‘ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಧ್ಯಾತ್ಮ, ಸಂಸ್ಕೃತಿ, ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಲು ಬಿಡಿ. ಅದರಿಂದ, ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲದೇ, ರೈತ ಬಾಂಧವರಿಗೂ ಒಳ್ಳೆಯದಾಗುತ್ತದೆ. ಮೂರನೇ ದರ್ಜೆಯ ರಾಜಕೀಯವನ್ನು ಮಾಡಬೇಡಿ. ಇದು ರಾಜಕೀಯ ಸಂಚು ಆಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.
‘ಉತ್ತರಪ್ರದೇಶದಲ್ಲಿ ಮಾಡಿದ ಯೋಗಿ ಮೂಲಕ ಮಾಡಿದ ಪ್ರಯೋಗವನ್ನು ರಾಜ್ಯದಲ್ಲಿಯೂ ಪ್ರಯೋಗಿಸಲು ಯತ್ನಿಸುತ್ತಿದ್ದಾರೆ. ಇದನ್ನು ತಡೆಯುವ ಅಗತ್ಯವಿದೆ. ಸ್ವಾಮೀಜಿಗಳಿಗೆ ರಾಜಕೀಯ ಬೇಡ’ ಎಂದು ಈ ವೇಳೆ ಮನವಿ ಮಾಡಿದರು.