‘ಪಕ್ಷದಲ್ಲಿ ನಡೆದಿರುವ ಘಟನೆಗಳು ತೀವ್ರ ನೋವು ತಂದಿದೆ. ಆದರೆ, 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಹೊಸತಾಗಿ ಕಾನೂನು ಜಾರಿಗೆ ತಂದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ನಂಜನಗೂಡು, ಗುಂಡ್ಲುಪೇಟೆ ಕೇರಳದ ಗಡಿ ಭಾಗದಲ್ಲಿದ್ದು, ಇಂತಹ ಘಟನೆಗಳು ನಡೆಯುವುದಿಲ್ಲ ಎನ್ನುವುದಕ್ಕೆ ಗ್ಯಾರೆಂಟಿ ಏನಿದೆ? ಬಿಜೆಪಿ ಬೆಳೆಯಲು ಕಾರ್ಯಕರ್ತರ ಬೆವರು, ರಕ್ತ ಹರಿಸಿದ್ದಾರೆ. ಎಲ್ಲರನ್ನೂ ರಕ್ಷಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಒತ್ತಾಯಿಸಿದರು.