<p><strong>ಮೈಸೂರು</strong>: ‘ಸರ್ಕಾರವು ಮೈಸೂರನ್ನು ಸುಂದರವಾಗಿಡುವುದರ ಜೊತೆಗೆ ಜೀವಿಸಲು ಯೋಗ್ಯವಾದ ನಗರವನ್ನಾಗಿಸಬೇಕು. ನಗರಕ್ಕೆ ಮಾರಕವಾಗುವ ಕೆಲಸಗಳನ್ನು ಕೈಗೊಳ್ಳಬಾರದು. ಬೃಹತ್ ಮೈಸೂರು ಮಹಾನಗರ ಪಾಲಿಕೆ (ಬಿಎಂಸಿಸಿ) ರಚನೆ ನಿರ್ಧಾರ ಕೈಬಿಡಬೇಕು’ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ಉಗ್ರ ನರಸಿಂಹೇಗೌಡ ಒತ್ತಾಯಿಸಿದರು.</p>.<p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಗರದ ಎಲ್ಲ ಬಡಾವಣೆಗಳಿಗೂ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಮಹಾನಗರಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಿರುವಾಗ, ಬೃಹತ್ ಪಾಲಿಕೆಯಿಂದ ನಗರ ವ್ಯಾಪ್ತಿ ವಿಸ್ತರಣೆಗೊಂಡರೆ ನಗರಕ್ಕೆ ಮಾರಕವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಬಿಎಂಸಿಸಿ ವಿಷಯದಲ್ಲಿ ಭೂ ಮಾಫಿಯಾ ಲಾಬಿ ನಡೆದಿದೆ ಎಂಬ ಶಂಕೆ ಇದೆ. ರಾಜಕಾರಣಿಗಳು ಕೂಡ ಸುಮ್ಮನಿದ್ದಾರೆ. ಅವರೂ ಇದರಲ್ಲಿ ಶಾಮೀಲಾಗಿರಬಹುದಾದ ಅನುಮಾನವಿದೆ’ ಎಂದು ದೂರಿದರು.</p>.<p>‘2030ರ ವೇಳೆಗೆ ಮೈಸೂರು ಹೇಗಿರಬೇಕೆಂಬ ಯೋಜನೆ ಇತ್ತು. ಅದನ್ನು ಬದಿಗಿಟ್ಟು ಬಿಎಂಸಿಸಿ ರಚನೆಗೆ ಸರ್ಕಾರ ಮುಂದಾಗಿದೆ. ವ್ಯವಸ್ಥಿತ ಮೈಸೂರು ರಚನೆಗೆ ಕಾರಣರಾದ ನಾಲ್ವಡಿ ಅವರಿಗಿಂತ ಸರ್ಕಾರವು ಮೇಧಾವಿಯೇ’ ಎಂದು ಕೇಳಿದರು. </p>.<p>‘ಮೈಸೂರನ್ನು ರೋಗಗ್ರಸ್ಥ ನಗರವನ್ನಾಗಿ ಮಾಡುವುದಕ್ಕೆ ಹೊರಡುವುದು ಸರಿಯಲ್ಲ. ಭೂಮಾಫಿಯಾದವರ ಲಾಬಿಗೆ ಸರ್ಕಾರ ಮಣಿಯಬಾರದು’ ಎಂದರು.</p>.<p>ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಸರ್ಕಾರವು ಮೈಸೂರನ್ನು ಸುಂದರವಾಗಿಡುವುದರ ಜೊತೆಗೆ ಜೀವಿಸಲು ಯೋಗ್ಯವಾದ ನಗರವನ್ನಾಗಿಸಬೇಕು. ನಗರಕ್ಕೆ ಮಾರಕವಾಗುವ ಕೆಲಸಗಳನ್ನು ಕೈಗೊಳ್ಳಬಾರದು. ಬೃಹತ್ ಮೈಸೂರು ಮಹಾನಗರ ಪಾಲಿಕೆ (ಬಿಎಂಸಿಸಿ) ರಚನೆ ನಿರ್ಧಾರ ಕೈಬಿಡಬೇಕು’ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ಉಗ್ರ ನರಸಿಂಹೇಗೌಡ ಒತ್ತಾಯಿಸಿದರು.</p>.<p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಗರದ ಎಲ್ಲ ಬಡಾವಣೆಗಳಿಗೂ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಮಹಾನಗರಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಿರುವಾಗ, ಬೃಹತ್ ಪಾಲಿಕೆಯಿಂದ ನಗರ ವ್ಯಾಪ್ತಿ ವಿಸ್ತರಣೆಗೊಂಡರೆ ನಗರಕ್ಕೆ ಮಾರಕವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಬಿಎಂಸಿಸಿ ವಿಷಯದಲ್ಲಿ ಭೂ ಮಾಫಿಯಾ ಲಾಬಿ ನಡೆದಿದೆ ಎಂಬ ಶಂಕೆ ಇದೆ. ರಾಜಕಾರಣಿಗಳು ಕೂಡ ಸುಮ್ಮನಿದ್ದಾರೆ. ಅವರೂ ಇದರಲ್ಲಿ ಶಾಮೀಲಾಗಿರಬಹುದಾದ ಅನುಮಾನವಿದೆ’ ಎಂದು ದೂರಿದರು.</p>.<p>‘2030ರ ವೇಳೆಗೆ ಮೈಸೂರು ಹೇಗಿರಬೇಕೆಂಬ ಯೋಜನೆ ಇತ್ತು. ಅದನ್ನು ಬದಿಗಿಟ್ಟು ಬಿಎಂಸಿಸಿ ರಚನೆಗೆ ಸರ್ಕಾರ ಮುಂದಾಗಿದೆ. ವ್ಯವಸ್ಥಿತ ಮೈಸೂರು ರಚನೆಗೆ ಕಾರಣರಾದ ನಾಲ್ವಡಿ ಅವರಿಗಿಂತ ಸರ್ಕಾರವು ಮೇಧಾವಿಯೇ’ ಎಂದು ಕೇಳಿದರು. </p>.<p>‘ಮೈಸೂರನ್ನು ರೋಗಗ್ರಸ್ಥ ನಗರವನ್ನಾಗಿ ಮಾಡುವುದಕ್ಕೆ ಹೊರಡುವುದು ಸರಿಯಲ್ಲ. ಭೂಮಾಫಿಯಾದವರ ಲಾಬಿಗೆ ಸರ್ಕಾರ ಮಣಿಯಬಾರದು’ ಎಂದರು.</p>.<p>ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>