<p><strong>ಮೈಸೂರು</strong>: ‘ಒತ್ತಡದಲ್ಲಿ ಬದುಕುವುದೇ ಇಂದಿನ ಜೀವನಶೈಲಿಯಾಗಿದೆ. ಶ್ರೀಮಂತಿಕೆಯೆಂದರೆ ಆರೋಗ್ಯ, ನೆಮ್ಮದಿ, ಸ್ವಾತಂತ್ರ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.</p>.<p>ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಇಲ್ಲಿನ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಮೈದಾನದಲ್ಲಿ ಭಾನುವಾರ ನಡೆದ 90ನೇ ವಾರ್ಷಿಕೋತ್ಸವ, ಮಹಾಶಿವರಾತ್ರಿ ಪ್ರಯುಕ್ತದ ಸೋಮನಾಥ ದಿವ್ಯ ದರ್ಶನ ಸಮಾರೋಪದಲ್ಲಿ ವಿಶ್ವವಿದ್ಯಾಲಯ ಮೈಸೂರು ಉಪವಲಯ ಮುಖ್ಯ ಸಂಚಾಲಕಿ ಲಕ್ಷ್ಮೀಜಿ ಅವರಿಂದ ಈಶ್ವರೀಯ ಪ್ರಶಸ್ತಿ- 2026 ಸ್ವೀಕರಿಸಿ ಮಾತನಾಡಿದರು.</p>.<p>‘ದ್ವೇಷ, ತಾಪಗಳೇ ನಮ್ಮ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಒತ್ತಡ ಇಂದು ಆಧುನಿಕ ತಂಬಾಕಿನಂತೆ ಕೆಲಸ ಮಾಡುತ್ತಿದೆ. ತಾಳ್ಮೆಯೆಂಬುದೇ ಇಲ್ಲವಾಗಿದೆ. ಸಣ್ಣ ವಿಚಾರಕ್ಕೂ ಆತಂಕ, ಬೇರೆಯವರ ಅಭಿವೃದ್ಧಿ ಕಂಡು ಅಸೂಹೆ ಪಡುವ ಮನೋಭಾವ ನಮ್ಮನ್ನು ಹಾನಿಗೀಡು ಮಾಡುತ್ತದೆ. ಧ್ಯಾನ ಇದಕ್ಕೆ ಉತ್ತಮ ಮದ್ದು’ ಎಂದರು.</p>.<p>‘ಪ್ರಾರ್ಥನೆ, ನಂಬಿಕೆಯನ್ನೇ ಜೀವನದ ಮೌಲ್ಯವಾಗಿ ಪರಿಗಣಿಸಬೇಕು. ಇತರರಿಗೆ ತೊಂದರೆಯಾಗದಂತೆ ಬದುಕುವುದೇ ಸಾಧನೆ. ನಾನೊಬ್ಬನೇ ಜ್ಞಾನಿ ಎನ್ನುವ ಅಹಂಕಾರ ವಿಷವಾಗುತ್ತದೆ. ಮಾನವೀಯತೆಯನ್ನು ಎಂದೂ ಮರೆಯಬಾರದು. ಪರೋಪಕಾರದಲ್ಲಿ ತೊಡಬೇಕು. ಈಶ್ವರೀಯ ವಿಶ್ವವಿದ್ಯಾಲಯ ಇದಕ್ಕೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.</p>.<p>ವಿಶ್ವವಿದ್ಯಾಲಯ ಪ್ರಾಂಶುಪಾಲ ರಂಗನಾಥ್ ಸಮಾರೋಪ ಭಾಷಣ ಮಾತನಾಡಿದರು. ವಕೀಲ ಓ.ಶಾಂ ಭಟ್, ವಿಶ್ರಾಂತ ಕುಲಪತಿಗಳಾದ ಕೆ.ಎಸ್.ರಂಗಪ್ಪ, ಇ.ಟಿ.ಪುಟ್ಟಯ್ಯ ಅತಿಥಿಗಳಾಗಿ ಪಾಲ್ಗೊಂಡರು.</p>.<p>ಜ್ಞಾನ ಸರೋವರ ರಿಟ್ರೀಟ್ ನಿರ್ದೇಶಕಿ ಶಾರದಾ, ಸರಸ್ವತಿಪುರಂ ಕೇಂದ್ರದ ಸಂಚಾಲಕಿ ಮಂಜುಳಾ, ವಿಶ್ವವಿದ್ಯಾಲಯದ ಶಿವಲೀಲಾ, ರಾಮಚಂದ್ರ ರಾವ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಒತ್ತಡದಲ್ಲಿ ಬದುಕುವುದೇ ಇಂದಿನ ಜೀವನಶೈಲಿಯಾಗಿದೆ. ಶ್ರೀಮಂತಿಕೆಯೆಂದರೆ ಆರೋಗ್ಯ, ನೆಮ್ಮದಿ, ಸ್ವಾತಂತ್ರ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.</p>.<p>ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಇಲ್ಲಿನ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಮೈದಾನದಲ್ಲಿ ಭಾನುವಾರ ನಡೆದ 90ನೇ ವಾರ್ಷಿಕೋತ್ಸವ, ಮಹಾಶಿವರಾತ್ರಿ ಪ್ರಯುಕ್ತದ ಸೋಮನಾಥ ದಿವ್ಯ ದರ್ಶನ ಸಮಾರೋಪದಲ್ಲಿ ವಿಶ್ವವಿದ್ಯಾಲಯ ಮೈಸೂರು ಉಪವಲಯ ಮುಖ್ಯ ಸಂಚಾಲಕಿ ಲಕ್ಷ್ಮೀಜಿ ಅವರಿಂದ ಈಶ್ವರೀಯ ಪ್ರಶಸ್ತಿ- 2026 ಸ್ವೀಕರಿಸಿ ಮಾತನಾಡಿದರು.</p>.<p>‘ದ್ವೇಷ, ತಾಪಗಳೇ ನಮ್ಮ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಒತ್ತಡ ಇಂದು ಆಧುನಿಕ ತಂಬಾಕಿನಂತೆ ಕೆಲಸ ಮಾಡುತ್ತಿದೆ. ತಾಳ್ಮೆಯೆಂಬುದೇ ಇಲ್ಲವಾಗಿದೆ. ಸಣ್ಣ ವಿಚಾರಕ್ಕೂ ಆತಂಕ, ಬೇರೆಯವರ ಅಭಿವೃದ್ಧಿ ಕಂಡು ಅಸೂಹೆ ಪಡುವ ಮನೋಭಾವ ನಮ್ಮನ್ನು ಹಾನಿಗೀಡು ಮಾಡುತ್ತದೆ. ಧ್ಯಾನ ಇದಕ್ಕೆ ಉತ್ತಮ ಮದ್ದು’ ಎಂದರು.</p>.<p>‘ಪ್ರಾರ್ಥನೆ, ನಂಬಿಕೆಯನ್ನೇ ಜೀವನದ ಮೌಲ್ಯವಾಗಿ ಪರಿಗಣಿಸಬೇಕು. ಇತರರಿಗೆ ತೊಂದರೆಯಾಗದಂತೆ ಬದುಕುವುದೇ ಸಾಧನೆ. ನಾನೊಬ್ಬನೇ ಜ್ಞಾನಿ ಎನ್ನುವ ಅಹಂಕಾರ ವಿಷವಾಗುತ್ತದೆ. ಮಾನವೀಯತೆಯನ್ನು ಎಂದೂ ಮರೆಯಬಾರದು. ಪರೋಪಕಾರದಲ್ಲಿ ತೊಡಬೇಕು. ಈಶ್ವರೀಯ ವಿಶ್ವವಿದ್ಯಾಲಯ ಇದಕ್ಕೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.</p>.<p>ವಿಶ್ವವಿದ್ಯಾಲಯ ಪ್ರಾಂಶುಪಾಲ ರಂಗನಾಥ್ ಸಮಾರೋಪ ಭಾಷಣ ಮಾತನಾಡಿದರು. ವಕೀಲ ಓ.ಶಾಂ ಭಟ್, ವಿಶ್ರಾಂತ ಕುಲಪತಿಗಳಾದ ಕೆ.ಎಸ್.ರಂಗಪ್ಪ, ಇ.ಟಿ.ಪುಟ್ಟಯ್ಯ ಅತಿಥಿಗಳಾಗಿ ಪಾಲ್ಗೊಂಡರು.</p>.<p>ಜ್ಞಾನ ಸರೋವರ ರಿಟ್ರೀಟ್ ನಿರ್ದೇಶಕಿ ಶಾರದಾ, ಸರಸ್ವತಿಪುರಂ ಕೇಂದ್ರದ ಸಂಚಾಲಕಿ ಮಂಜುಳಾ, ವಿಶ್ವವಿದ್ಯಾಲಯದ ಶಿವಲೀಲಾ, ರಾಮಚಂದ್ರ ರಾವ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>