ಮಳವಳ್ಳಿ, ವೀರನಪುರ, ಮಾಡ್ರಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರ ಪಂಪ್ ಸೆಟ್ಗಳಲ್ಲಿ ತಂಡವೊಂದು ಕೇಬಲ್ ಕಳ್ಳತನ ಮಾಡುತ್ತಿದ್ದ ಬಗ್ಗೆ ಸಂಶಯವಿತ್ತು. ತಿಂಗಳ ಅಂತರದಲ್ಲಿ ಹಲವು ಮಂದಿ ರೈತರ ಪಂಪ್ ಸೆಟ್ಗಳಲ್ಲಿನ ಕೇಬಲ್ ಕಳವು ಮಾಡಿ ಯಾರ ಕೈಗೂ ಸಿಗದೆ ಕಣ್ಮರೆಯಾಗುತ್ತಿದ್ದರು. ಆದರೆ ಬುಧವಾರ ರಾತ್ರಿ ಮತ್ತೆ ಕಳ್ಳತಕ್ಕೆ ಬಂದ ತಂಡದಲ್ಲಿ ಓರ್ವ ವ್ಯಕ್ತಿ ರೈತರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ, ನಂತರ ಗುಂಡ್ಲುಪೇಟೆ ಠಾಣೆ ವಶಕ್ಕೆ ನೀಡಿದ್ದಾರೆ.