ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕೇಬಲ್ ಕಳ್ಳನಿಗೆ ರೈತರಿಂದ ಧರ್ಮದೇಟು

Published 1 ಮೇ 2024, 14:38 IST
Last Updated 1 ಮೇ 2024, 14:38 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಮಳ್ಳವಳ್ಳಿ ಗ್ರಾಮದಲ್ಲಿ ರೈತರ ಜಮೀನಿನ ಕೊಳವೆ ಬಾವಿಗಳಿಗೆ ಅಳವಡಿಸಿರುವ ಕೇಬಲ್ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಜಗದೀಶ್(35)ನನ್ನು ರೈತರು ಬುಧವಾರ ಮುಂಜಾನೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಮಳವಳ್ಳಿ, ವೀರನಪುರ, ಮಾಡ್ರಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರ ಪಂಪ್ ಸೆಟ್‍ಗಳಲ್ಲಿ ತಂಡವೊಂದು ಕೇಬಲ್ ಕಳ್ಳತನ ಮಾಡುತ್ತಿದ್ದ ಬಗ್ಗೆ ಸಂಶಯವಿತ್ತು. ತಿಂಗಳ ಅಂತರದಲ್ಲಿ ಹಲವು ಮಂದಿ ರೈತರ ಪಂಪ್ ಸೆಟ್‍ಗಳಲ್ಲಿನ ಕೇಬಲ್ ಕಳವು ಮಾಡಿ ಯಾರ ಕೈಗೂ ಸಿಗದೆ ಕಣ್ಮರೆಯಾಗುತ್ತಿದ್ದರು. ಆದರೆ ಬುಧವಾರ ರಾತ್ರಿ ಮತ್ತೆ ಕಳ್ಳತಕ್ಕೆ ಬಂದ ತಂಡದಲ್ಲಿ ಓರ್ವ ವ್ಯಕ್ತಿ ರೈತರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ, ನಂತರ ಗುಂಡ್ಲುಪೇಟೆ ಠಾಣೆ ವಶಕ್ಕೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನ ಮಾಡುತ್ತಿರುವ ತಂಡದ ಬಗ್ಗೆ ಮಾಹಿತಿ ಪಡೆದು ಕಳ್ಳರನ್ನು ಹಿಡಿಯುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT