ಶನಿವಾರ ಸುರಿದ ಭಾರಿ ಮಳೆಯಿಂದ ಗಿಡಗಂಟಿಗಳು ಬೆಳೆದಿದ್ದ ಚರಂಡಿಯಲ್ಲಿ ನೀರು ಮುಂದಕ್ಕೆ ಹೋಗದೇ ತುಂಬಿಕೊಂಡಿತ್ತು. ಚರಂಡಿಯೊಳಗೆ ಬೆಳೆದಿದ್ದ ಗಿಡಗಳನ್ನು ಇವರು ಕೀಳುತ್ತಿದ್ದರು. ಈ ವೇಳೆ ಆಯತಪ್ಪಿ ಚರಂಡಿಯೊಳಗೆ ಬಿದ್ದಿದ್ದಾರೆ. ತಲೆಯು ಚರಂಡಿಯ ಕಲುಷಿತ ನೀರಿನಲ್ಲಿ ಸಿಲುಕಿದೆ. ಜತೆಗೆ, ತಲೆಗೆ ಪೆಟ್ಟಾಗಿದೆ. ಇನ್ನಿತರ ಕಾರ್ಮಿಕರು ಬಂದು ಇವರನ್ನು ಮೇಲೆತ್ತುವಷ್ಟರಲ್ಲಿ ಇವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.