ಮೈಸೂರು: ‘ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ನವರು ಕೇಂದ್ರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಆರೋಪಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆ ಭಾಗ್ಯಗಳನ್ನು ಒದಗಿಸುವಲ್ಲಿ ಹಾಗೂ ಬರಗಾಲ ನಿರ್ವಹಿಸುವಲ್ಲೂ ವಿಫಲವಾಗಿದೆ. ಆರ್ಥಿಕ ಸ್ಥಿತಿ ಕಾಪಾಡಿಕೊಳ್ಳುವಲ್ಲೂ ಸೋತಿದೆ. ತಪ್ಪು ಮುಚ್ಚಿಟ್ಟುಕೊಳ್ಳಲು ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸುವುದು ಮಾಡುತ್ತಿದೆ. ಈ ಸರ್ಕಾರ ಪೋಸ್ಟರ್ಗೆ ಸೀಮಿತವಾಗಿದೆ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಜವಾಬ್ದಾರಿಯುತ ಪಕ್ಷವಾಗಿದ್ದರೆ, ದೇಶ ವಿಭಜನೆಯ ಮಾತನ್ನಾಡಿರುವ ಸಂಸದ ಡಿ.ಕೆ.ಶಿವಕುಮಾರ್ ವಿರುದ್ಧ ಈ ವೇಳೆಗಾಗಲೇ ಕ್ರಮ ಕೈಗೊಳ್ಳಬೇಕಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ವಿಭಜನೆಯ ಮಾತುಗಳನ್ನಾಡಿರುವ ಪಕ್ಷವದು. ಭಾರತ–ಪಾಕಿಸ್ತಾನ ಎಂದು ವಿಭಜಿಸಿದೆ. ಅದರಲ್ಲಿ ಎತ್ತಿದ ಕೈ ಆ ಪಕ್ಷದ್ದು’ ಎಂದು ದೂರಿದರು.