‘ನನ್ನ ಪಾಲಿಗೆ ಸಿದ್ದರಾಮಯ್ಯ ದೇವರು. ಅವರೊಟ್ಟಿಗೆ ಸಹಕಾರ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಂಟು ವಿಧಾನಸಭಾ ಕ್ಷೇತ್ರಗಳ ಶಾಸಕರು, ಮುಖಂಡರಿಗೆ ಧನ್ಯವಾದ. ಬೆಂಬಲಿಸಿದ 6.56 ಲಕ್ಷ ಮತದಾರರು, ಸಂಘಟನೆಗಳ ಕಾರ್ಯಕರ್ತರಿಗೆ ಧನ್ಯವಾದ. ನಾನು ಎಲ್ಲಿಯೂ ಕಳೆದು ಹೋಗುವುದಿಲ್ಲ. ಸೋತರೂ ನಿರಂತರ ಜನ ಸಂಪರ್ಕದಲ್ಲಿ ಇರುತ್ತೇನೆ. ಪ್ರತಿ ಕ್ಷೇತ್ರಕ್ಕೆ ಹೋಗಿ ಜನರ ಸಮಸ್ಯೆ ಆಲಿಸುತ್ತೇನೆ. ಮಡಿಕೇರಿಯಲ್ಲೂ ಕಚೇರಿ ತೆರೆಯುತ್ತೇನೆ’ ಎಂದು ಹೇಳಿದರು.