<p><strong>ಹುಣಸೂರು:</strong> ತಂಬಾಕು ಬೆಳೆಯಲ್ಲಿ ಮಾರಕವಾಗುವ ಕುಡಿ ಮತ್ತು ಕಂಕಳು ಕುಡಿ ನಿರ್ವಹಣೆಗೆ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ಫ್ಲೂಮಟಲಿಯನ್ ರಾಸಾಯನಿಕ ಬಳಸಿ ಸಿದ್ಧಪಡಿಸಿದ ‘ಸಕ್ಕರ್ ಸ್ಟಾಪ್’ ಔಷಧಿ ರೈತರಿಗೆ ವರದಾನವಾಗಿದೆ.</p>.<p>ಕುಡಿ ಒಡೆಯುವುದರಿಂದ ರೈತರಿಗೆ ಇಳುವರಿ ಕುಂಠಿತ, ಉತ್ಪಾದನ ವೆಚ್ಚ ಹೆಚ್ಚಳ ಹಾಗೂ ಫಸಲು ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಈ ಹಿಂದೆ ಕುಡಿಯನ್ನು ಕತ್ತರಿಸುವ ಪ್ರಕ್ರಿಯೆ ನಡೆಸಿ, ತಂಬಾಕು ಎಲೆಗೆ ಪೌಷ್ಟಿಕಾಂಶವನ್ನು ದೊರಕಿಸುವ ಪ್ರಯತ್ನ ನಡೆದರೆ ನಿರೀಕ್ಷಿತ ಫಲಿತಾಂಶ ಸಿಗುತ್ತಿರಲಿಲ್ಲ. ಎಲೆ ಉದರಿ ನಷ್ಟವಾಗುತ್ತಿತ್ತು.</p>.<p>‘ಈಗ ಹೈದರಬಾದ್ನ ಎಂ.ಆರ್. ಬಯೋ ಕೆಮಿಕಲ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರಯೋಗಾಲಯದಲ್ಲಿ ಸತತ 3 ವರ್ಷ ಫ್ಲೊಮಟಲಿಯನ್ ಅಂಶವುಳ್ಳ ರಾಸಾಯನಿಕ ಬಳಸಿ ಉತ್ಪಾದಿಸಿದ ಔಷಧಿಗೆ ಸಕ್ಕರ್ ಸ್ಟಾಪ್ ಎಂಬ ಹೆಸರು ನೀಡಲಾಗಿದೆ. ತಂಬಾಕು ಗಿಡದ ಕುಡಿ ಕತ್ತರಿಸಿದ ಬಳಿಕ ಕುಡಿಗೆ 20 ಮಿ.ಲೀ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 8 ರಿಂದ 10 ಮಿ ಲೀ ಕುಡಿ ಭಾಗದಲ್ಲಿ ಕೊಟ್ಟರೆ ಪೌಷ್ಟಿಕಾಂಶ ಸಿಗುತ್ತದೆ’ ಎಂದು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಔಷಧದ ಬಳಕೆಯಿಂದ ಶೇ 10 ರಿಂದ 15ರಷ್ಟು ಹೊಗೆ ಸೊಪ್ಪು ಉದುರುವಿಕೆ ತಗ್ಗಿ, ಗಿಡದ ಮಧ್ಯ ಭಾಗದ ಎಲೆ ದಪ್ಪ ಹಾಗೂ ಅಗಲ ಸರಾಸರಿ 5 ಸೆಂ.ಮೀ. ಹಿಗ್ಗುವುದರಿಂದ ತೂಕ ಹೆಚ್ಚಾಗಿ ರೈತನಿಗೆ ಲಾಭವಾಗುತ್ತದೆ. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 100 ರಿಂದ 150 ಕೆಜಿ ಇಳುವರಿ ಸಿಗಲಿದೆ’ ಎಂದರು.</p>.<p>‘ಔಷಧ ಬಳಸಿದ್ದರಿಂದ ಬೆಳೆ ಹುಲುಸಾಗಿ ಬೆಳೆದು 15 ರಿಂದ 20ರಷ್ಟು ಎಲೆಗಳು ಹೆಚ್ಚಾಗಿ ಸಿಕ್ಕಿವೆ. ಹದಗೊಳಿಸಿದ ತಂಬಾಕು ಗೋಲ್ಡ್ ಕಲರ್ ಇದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುವ ವಿಶ್ವಾಸವಿದೆ’ ಎಂದು ಕಾಳೇಗೌಡನಕೊಪ್ಪಲಿನ ರೈತ ಕೆಂಡಗಣ್ಣ ಸ್ವಾಮಿ, ಶ್ರವಣನಹಳ್ಳಿಯ ಬಾಲಕೃಷ್ಣ ತಿಳಿಸಿದರು.</p>.<div><blockquote>ಸಂಶೋಧನ ಕೇಂದ್ರದ ಹೊಸ ಔಷಧಿ ಬಳಸಿದ್ದರಿಂದ ಕುಡಿ ನಿರ್ವಹಣೆ ಸುಲಭವಾಗಿದೆ. ಹೆಚ್ಚಿನ ಲಾಭವಿದ್ದು ರೈತರು ಬಳಸಿ ಫಸಲಿನ ಗುಣಮಟ್ಟ ವೃದ್ಧಿಸಿಕೊಳ್ಳಬಹುದು </blockquote><span class="attribution">ರಿಯಾಜ್ ಕಡೆಮನುಗನಹಳ್ಳಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ತಂಬಾಕು ಬೆಳೆಯಲ್ಲಿ ಮಾರಕವಾಗುವ ಕುಡಿ ಮತ್ತು ಕಂಕಳು ಕುಡಿ ನಿರ್ವಹಣೆಗೆ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ಫ್ಲೂಮಟಲಿಯನ್ ರಾಸಾಯನಿಕ ಬಳಸಿ ಸಿದ್ಧಪಡಿಸಿದ ‘ಸಕ್ಕರ್ ಸ್ಟಾಪ್’ ಔಷಧಿ ರೈತರಿಗೆ ವರದಾನವಾಗಿದೆ.</p>.<p>ಕುಡಿ ಒಡೆಯುವುದರಿಂದ ರೈತರಿಗೆ ಇಳುವರಿ ಕುಂಠಿತ, ಉತ್ಪಾದನ ವೆಚ್ಚ ಹೆಚ್ಚಳ ಹಾಗೂ ಫಸಲು ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಈ ಹಿಂದೆ ಕುಡಿಯನ್ನು ಕತ್ತರಿಸುವ ಪ್ರಕ್ರಿಯೆ ನಡೆಸಿ, ತಂಬಾಕು ಎಲೆಗೆ ಪೌಷ್ಟಿಕಾಂಶವನ್ನು ದೊರಕಿಸುವ ಪ್ರಯತ್ನ ನಡೆದರೆ ನಿರೀಕ್ಷಿತ ಫಲಿತಾಂಶ ಸಿಗುತ್ತಿರಲಿಲ್ಲ. ಎಲೆ ಉದರಿ ನಷ್ಟವಾಗುತ್ತಿತ್ತು.</p>.<p>‘ಈಗ ಹೈದರಬಾದ್ನ ಎಂ.ಆರ್. ಬಯೋ ಕೆಮಿಕಲ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರಯೋಗಾಲಯದಲ್ಲಿ ಸತತ 3 ವರ್ಷ ಫ್ಲೊಮಟಲಿಯನ್ ಅಂಶವುಳ್ಳ ರಾಸಾಯನಿಕ ಬಳಸಿ ಉತ್ಪಾದಿಸಿದ ಔಷಧಿಗೆ ಸಕ್ಕರ್ ಸ್ಟಾಪ್ ಎಂಬ ಹೆಸರು ನೀಡಲಾಗಿದೆ. ತಂಬಾಕು ಗಿಡದ ಕುಡಿ ಕತ್ತರಿಸಿದ ಬಳಿಕ ಕುಡಿಗೆ 20 ಮಿ.ಲೀ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 8 ರಿಂದ 10 ಮಿ ಲೀ ಕುಡಿ ಭಾಗದಲ್ಲಿ ಕೊಟ್ಟರೆ ಪೌಷ್ಟಿಕಾಂಶ ಸಿಗುತ್ತದೆ’ ಎಂದು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಔಷಧದ ಬಳಕೆಯಿಂದ ಶೇ 10 ರಿಂದ 15ರಷ್ಟು ಹೊಗೆ ಸೊಪ್ಪು ಉದುರುವಿಕೆ ತಗ್ಗಿ, ಗಿಡದ ಮಧ್ಯ ಭಾಗದ ಎಲೆ ದಪ್ಪ ಹಾಗೂ ಅಗಲ ಸರಾಸರಿ 5 ಸೆಂ.ಮೀ. ಹಿಗ್ಗುವುದರಿಂದ ತೂಕ ಹೆಚ್ಚಾಗಿ ರೈತನಿಗೆ ಲಾಭವಾಗುತ್ತದೆ. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 100 ರಿಂದ 150 ಕೆಜಿ ಇಳುವರಿ ಸಿಗಲಿದೆ’ ಎಂದರು.</p>.<p>‘ಔಷಧ ಬಳಸಿದ್ದರಿಂದ ಬೆಳೆ ಹುಲುಸಾಗಿ ಬೆಳೆದು 15 ರಿಂದ 20ರಷ್ಟು ಎಲೆಗಳು ಹೆಚ್ಚಾಗಿ ಸಿಕ್ಕಿವೆ. ಹದಗೊಳಿಸಿದ ತಂಬಾಕು ಗೋಲ್ಡ್ ಕಲರ್ ಇದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುವ ವಿಶ್ವಾಸವಿದೆ’ ಎಂದು ಕಾಳೇಗೌಡನಕೊಪ್ಪಲಿನ ರೈತ ಕೆಂಡಗಣ್ಣ ಸ್ವಾಮಿ, ಶ್ರವಣನಹಳ್ಳಿಯ ಬಾಲಕೃಷ್ಣ ತಿಳಿಸಿದರು.</p>.<div><blockquote>ಸಂಶೋಧನ ಕೇಂದ್ರದ ಹೊಸ ಔಷಧಿ ಬಳಸಿದ್ದರಿಂದ ಕುಡಿ ನಿರ್ವಹಣೆ ಸುಲಭವಾಗಿದೆ. ಹೆಚ್ಚಿನ ಲಾಭವಿದ್ದು ರೈತರು ಬಳಸಿ ಫಸಲಿನ ಗುಣಮಟ್ಟ ವೃದ್ಧಿಸಿಕೊಳ್ಳಬಹುದು </blockquote><span class="attribution">ರಿಯಾಜ್ ಕಡೆಮನುಗನಹಳ್ಳಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>