<p><strong>ಹುಣಸೂರು</strong>: ತಾಲ್ಲೂಕಿನ ಬಿಳಿಕೆರೆ ಹೋಬಳಿ ಹೊಸರಾಮೇನಹಳ್ಳಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ದಂಡಮ್ಮದೇವಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.</p>.<p>ಶುಕ್ರವಾರ ರಾತ್ರಿ ಅದ್ಧೂರಿಯಿಂದ ನಡೆದ ಜಾತ್ರೆಯಲ್ಲಿ ಸುತ್ತಲಿನ 33 ಗ್ರಾಮಗಳ ನೆಂಟರು ಭಕ್ತರು ಒಳಗೂಡಿ ಆಚರಿಸಿದರು. ರಾತ್ರಿ ದಂಡಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಿ ಕುರಿ, ಆಡು ಬಲಿ ನೀಡಿದ ಬಳಿಕ ಉತ್ಸವ ಜರುಗಿತು.</p>.<p>ಜಾತ್ರ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಭಾಗವಹಿಸಿ ದೇವರಿಗೆ ಪೂಜೆ ಅರ್ಪಿಸಿ ತೆರಳಿದರು.</p>.<p>ದಂಡಮ್ಮ ದೇವಿಗೆ ಭಕ್ತರು ಹೊತ್ತಿದ್ದ ಹರಕೆಯನ್ನು ಅರ್ಪಿಸಿದ ಬಳಿಕ ಬಾಡೂಟ ಸಿದ್ಧಪಡಿಸಿ ಅಹೋ ರಾತ್ರಿ ಭಕ್ತರಿಗೆ ಬಡಿಸಿದರು. </p>.<p><strong>ಭತ್ತ ಸಂಗ್ರಹ</strong></p>.<p>‘ದಂಡಮ್ಮ ದೇವಿಗೆ ಗ್ರಾಮದ ಸುತ್ತಲಿನ ಭತ್ತದ ಗದ್ದೆಯಲ್ಲಿ ಸಂಕ್ರಾಂತಿಯಿಂದ ಭತ್ತ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಸಂಗ್ರಹಿಸಿದ ಭತ್ತವನ್ನು ಈ ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹ ಏರ್ಪಡಿಸಿ ತೃಪ್ತಿಪಡಿಸಲಾಗುತ್ತದೆ’ ಎಂದು ಸ್ಥಳಿಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ತಾಲ್ಲೂಕಿನ ಬಿಳಿಕೆರೆ ಹೋಬಳಿ ಹೊಸರಾಮೇನಹಳ್ಳಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ದಂಡಮ್ಮದೇವಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.</p>.<p>ಶುಕ್ರವಾರ ರಾತ್ರಿ ಅದ್ಧೂರಿಯಿಂದ ನಡೆದ ಜಾತ್ರೆಯಲ್ಲಿ ಸುತ್ತಲಿನ 33 ಗ್ರಾಮಗಳ ನೆಂಟರು ಭಕ್ತರು ಒಳಗೂಡಿ ಆಚರಿಸಿದರು. ರಾತ್ರಿ ದಂಡಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಿ ಕುರಿ, ಆಡು ಬಲಿ ನೀಡಿದ ಬಳಿಕ ಉತ್ಸವ ಜರುಗಿತು.</p>.<p>ಜಾತ್ರ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಭಾಗವಹಿಸಿ ದೇವರಿಗೆ ಪೂಜೆ ಅರ್ಪಿಸಿ ತೆರಳಿದರು.</p>.<p>ದಂಡಮ್ಮ ದೇವಿಗೆ ಭಕ್ತರು ಹೊತ್ತಿದ್ದ ಹರಕೆಯನ್ನು ಅರ್ಪಿಸಿದ ಬಳಿಕ ಬಾಡೂಟ ಸಿದ್ಧಪಡಿಸಿ ಅಹೋ ರಾತ್ರಿ ಭಕ್ತರಿಗೆ ಬಡಿಸಿದರು. </p>.<p><strong>ಭತ್ತ ಸಂಗ್ರಹ</strong></p>.<p>‘ದಂಡಮ್ಮ ದೇವಿಗೆ ಗ್ರಾಮದ ಸುತ್ತಲಿನ ಭತ್ತದ ಗದ್ದೆಯಲ್ಲಿ ಸಂಕ್ರಾಂತಿಯಿಂದ ಭತ್ತ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಸಂಗ್ರಹಿಸಿದ ಭತ್ತವನ್ನು ಈ ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹ ಏರ್ಪಡಿಸಿ ತೃಪ್ತಿಪಡಿಸಲಾಗುತ್ತದೆ’ ಎಂದು ಸ್ಥಳಿಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>