<p><strong>ಕಿಕ್ಕೇರಿ:</strong> ಹೋಬಳಿಯ ಗಂಗೇನಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಡೆಂಗಿ ಉಲ್ಬಣದ ಆತಂಕ ಮನೆ ಮಾಡಿದೆ. </p>.<p>ಗ್ರಾಮದ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ, ಸಮರ್ಪಕವಾಗಿ ಒಳಚರಂಡಿ ನೀರು ಹರಿಯದಿರುವುದೇ ಪ್ರಮುಖ ಕಾರಣ ಎನ್ನಲಾಗಿದ್ದು, ಸೊಳ್ಳೆ ಕಾಟ ಹೆಚ್ಚಿದೆ.</p>.<p>ಗ್ರಾಮದ ಚರಂಡಿ ನೀರು ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮುಂದೆ ನಿಲ್ಲುವಂತಾಗಿದೆ. ಸುಮಾರು ಎರಡು ವರ್ಷಗಳಿಂದಲೂ ಚರಂಡಿ ನೀರು ಹರಿಯದೆ ಒಂದೆಡೆ ನಿಂತಿದೆ. ಇದರಿಂದ ಸೊಳ್ಳೆ ಉತ್ಪತಿಯಾಗುತ್ತಿದೆ. </p>.<p>ಜ್ವರದ ತೀವ್ರತೆ ಕಡಿಮೆಯಾಗದೆ ಗ್ರಾಮದಲ್ಲಿ ಜ್ವರದ ಭೀತಿ ಆವರಿಸಿದೆ. ಆರೋಗ್ಯ ಇಲಾಖೆಯವರು ನಿತ್ಯ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.</p>.<p>ಶಾಲಾ ಪರಿಸರದಲ್ಲಿ ನಿಂತಿರುವ ಕೊಳಚೆ ನೀರು ತೆರವು ಮಾಡಿಸಿ, ಸೊಳ್ಳೆಗಳ ನಿಯಂತ್ರಣ ಮಾಡಿಸುವವರಿಗೆ ಶಾಲೆಗೆ ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>ಲಕ್ಷ್ಮೀಪುರ ಗ್ರಾ.ಪಂ ಪಿಡಿಒ ಸುರೇಶ್ಬಾಬು ಸ್ಥಳಕ್ಕೆ ಆಗಮಿಸಿ, ‘ಕಲ್ಲುಮಣ್ಣಿನಿಂದ ಅಡ್ಡಗಟ್ಟಲಾಗಿದ್ದ ಒಳಚರಂಡಿ ಶುಚಿಗೊಳಿಸಿದರು. ಚರಂಡಿ ನೀರು ಹರಿಯಲು ತೊಂದರೆ ಮಾಡಬಾರದು. ಗ್ರಾಮದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಶುಚಿತ್ವಕ್ಕೆ ಸಹಕರಿಸಿ’ ಎಂದು ತಿಳಿಸಿದರು.</p>.<p>ಇಸಿಒ ವೀರಭದ್ರಯ್ಯ, ಗ್ರಾ.ಪಂ ಕಾರ್ಯದರ್ಶಿ ನವೀನ್, ಮುಖ್ಯ ಶಿಕ್ಷಕ ಹನುಮಂತ ಭಜಂತ್ರಿ, ನಟೇಶ್, ಮುಖಂಡರಾದ ಕನಕ ರಾಜೇಶ್, ಶರತ್ಕುಮಾರ್, ಕೃಷ್ಣಪ್ಪ, ರಂಗನಾಥ, ಸುನಿಲ್ ರಾಜೀವ್, ರಘು, ಧರ್ಮ, ಪಾರ್ವತಮ್ಮ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong> ಹೋಬಳಿಯ ಗಂಗೇನಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಡೆಂಗಿ ಉಲ್ಬಣದ ಆತಂಕ ಮನೆ ಮಾಡಿದೆ. </p>.<p>ಗ್ರಾಮದ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ, ಸಮರ್ಪಕವಾಗಿ ಒಳಚರಂಡಿ ನೀರು ಹರಿಯದಿರುವುದೇ ಪ್ರಮುಖ ಕಾರಣ ಎನ್ನಲಾಗಿದ್ದು, ಸೊಳ್ಳೆ ಕಾಟ ಹೆಚ್ಚಿದೆ.</p>.<p>ಗ್ರಾಮದ ಚರಂಡಿ ನೀರು ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮುಂದೆ ನಿಲ್ಲುವಂತಾಗಿದೆ. ಸುಮಾರು ಎರಡು ವರ್ಷಗಳಿಂದಲೂ ಚರಂಡಿ ನೀರು ಹರಿಯದೆ ಒಂದೆಡೆ ನಿಂತಿದೆ. ಇದರಿಂದ ಸೊಳ್ಳೆ ಉತ್ಪತಿಯಾಗುತ್ತಿದೆ. </p>.<p>ಜ್ವರದ ತೀವ್ರತೆ ಕಡಿಮೆಯಾಗದೆ ಗ್ರಾಮದಲ್ಲಿ ಜ್ವರದ ಭೀತಿ ಆವರಿಸಿದೆ. ಆರೋಗ್ಯ ಇಲಾಖೆಯವರು ನಿತ್ಯ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.</p>.<p>ಶಾಲಾ ಪರಿಸರದಲ್ಲಿ ನಿಂತಿರುವ ಕೊಳಚೆ ನೀರು ತೆರವು ಮಾಡಿಸಿ, ಸೊಳ್ಳೆಗಳ ನಿಯಂತ್ರಣ ಮಾಡಿಸುವವರಿಗೆ ಶಾಲೆಗೆ ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>ಲಕ್ಷ್ಮೀಪುರ ಗ್ರಾ.ಪಂ ಪಿಡಿಒ ಸುರೇಶ್ಬಾಬು ಸ್ಥಳಕ್ಕೆ ಆಗಮಿಸಿ, ‘ಕಲ್ಲುಮಣ್ಣಿನಿಂದ ಅಡ್ಡಗಟ್ಟಲಾಗಿದ್ದ ಒಳಚರಂಡಿ ಶುಚಿಗೊಳಿಸಿದರು. ಚರಂಡಿ ನೀರು ಹರಿಯಲು ತೊಂದರೆ ಮಾಡಬಾರದು. ಗ್ರಾಮದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಶುಚಿತ್ವಕ್ಕೆ ಸಹಕರಿಸಿ’ ಎಂದು ತಿಳಿಸಿದರು.</p>.<p>ಇಸಿಒ ವೀರಭದ್ರಯ್ಯ, ಗ್ರಾ.ಪಂ ಕಾರ್ಯದರ್ಶಿ ನವೀನ್, ಮುಖ್ಯ ಶಿಕ್ಷಕ ಹನುಮಂತ ಭಜಂತ್ರಿ, ನಟೇಶ್, ಮುಖಂಡರಾದ ಕನಕ ರಾಜೇಶ್, ಶರತ್ಕುಮಾರ್, ಕೃಷ್ಣಪ್ಪ, ರಂಗನಾಥ, ಸುನಿಲ್ ರಾಜೀವ್, ರಘು, ಧರ್ಮ, ಪಾರ್ವತಮ್ಮ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>