‘ಶಾಸಕ ಸಾ.ರಾ.ಮಹೇಶ್ ಅವರು ಶಾಸಕರ ನಿಧಿಯಿಂದ ₹10 ಲಕ್ಷ ಹಾಗೂ ವೈಯಕ್ತಿಕವಾಗಿ ₹2 ಲಕ್ಷ ದೇಣಿಗೆ ನೀಡಿದ್ದಾರೆ. ದಾನಿಗಳಿಂದ ಸುಮಾರು ₹35 ಲಕ್ಷ ಸಂಗ್ರಹಗೊಂಡಿದೆ. ಗ್ರಾಮದ 160 ಕುಟುಂಬಗಳು, ಅಕ್ಕಪಕ್ಕದ ಗ್ರಾಮಗಳ ಭಕ್ತರು ನೀಡಿದ ದೇಣಿಗೆ ₹40 ಲಕ್ಷ ಸಂಗ್ರಹಗೊಂಡಿದೆ. ಮದುವೆಯಾಗಿ ಬೇರೆ ಊರಿಗೆ ಹೋಗಿರುವ ಹೆಣ್ಣು ಮಕ್ಕಳು ಸಹ ದೇಣಿಗೆ ನೀಡಿದ್ದಾರೆ’ ಎಂದು ಹೇಳಿದರು.