ಎ.ಆರ್.ಕೆ.ಚಕ್ರವರ್ತಿ ಅವರು ದೇಶದಾದ್ಯಂತ ಸಂಚರಿಸಿ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಚರ್ಮ, ಮರ, ಗಾಜು, ಲೋಹ, ಬೊಂಬು, ಮಣ್ಣು, ಪಿಂಗಾಣಿ, ಕಲ್ಲು ಹಾಗೂ ಇತರ ಸಾಮಗ್ರಿಗಳಿಂದ ರಚಿಸಿರುವ ಸುಮಾರು 35ಕ್ಕೂ ಹೆಚ್ಚು ವಿಷಯ ಕ್ಷೇತ್ರಗಳನ್ನು ಆಧರಿಸಿದ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ವಿನಾಯಕ, ಶಿವನಿಂದ ಆರಂಭವಾಗಿ, ರಾಮಾಯಣ, ಮಹಾಭಾರತ, ಗ್ರಾಮಾಂತರ ಜೀವನ, ಜಾನಪದ ಕಲೆ, ವೃತ್ತಿಯಾಧಾರಿತ ವ್ಯಕ್ತಿಗಳು ಇತ್ಯಾದಿ ವಿಷಯಗಳ ಮೇಲೆ ಬೊಂಬೆಗಳನ್ನು ಜೋಡಿಸಲಾಗಿದೆ.