ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರನ್ನು ಕವಿಗೋಷ್ಠಿಯ ಕಾರ್ಯಕ್ರಮಗಳಿಗೆ ಆಹ್ವಾನಿಸದಿರುವುದು ಯಾಕೆ ಎಂಬುದು ನನಗೆ ಅರ್ಥವಾಗಿಲ್ಲ. ಹಿಂದೆ ಆಹ್ವಾನಿಸುತ್ತಿದ್ದರು.
ಮಡ್ಡೀಕೆರೆ ಗೋಪಾಲ್, ಅಧ್ಯಕ್ಷರು, ಕಸಾಪ ಜಿಲ್ಲಾ ಘಟಕ
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯವರೇ ಸಮಿತಿ ರಚಿಸಿಕೊಂಡು ಕವಿಗಳನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಪಾತ್ರವೇನೂ ಅದರಲ್ಲಿಲ್ಲ.
ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ
ಕವಿಗೋಷ್ಠಿಗೆ ಯಾರು ಆಯ್ಕೆಯಾಗಲಿಲ್ಲವೋ ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಆದರೆ ನಾವು ಮಾನದಂಡದ ಪ್ರಕಾರವೇ ನಿರ್ವಹಿಸಿದ್ದೇವೆ.
ಎನ್.ಕೆ. ಲೋಕಾಕ್ಷಿ, ಕಾರ್ಯಾಧ್ಯಕ್ಷೆ, ದಸರಾ ಕವಿಗೋಷ್ಠಿ ಉಪ ಸಮಿತಿ