<p><strong>ಮೈಸೂರು:</strong> ಜಂಬೂಸವಾರಿಯಲ್ಲಿ ಅಭಿಮನ್ಯು ಆನೆಯು ‘ಹ್ಯಾಟ್ರಿಕ್’ ಸಾಧನೆ ಮಾಡಿದೆ.<br /><br />ಗಜಪಡೆಯ ಕ್ಯಾಪ್ಟನ್ ‘ಗಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುವ ಮೂಲಕ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸಮರ್ಥವಾಗಿ ಬನ್ನಿಮಂಟಪದವರೆಗೆ ಸಾಗಿಸಿದ. ಹಿಂದಿನ ಎರಡು ಸರಳ ದಸರೆಯಲ್ಲಿ ಜಂಬೂಸವಾರಿಯು ಅರಮನೆಗೆ ಸೀಮಿತವಾಗಿ ನಡೆದಿತ್ತು. ಆಗಲೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರುನ ನಡೆಸಿದ ಎರಡನೇ ದಸರಾ ಆಯಿತು.</p>.<p>ಇದೇ ಮೊದಲ ಪಾಲ್ಗೊಂಡಿದ್ದ ಆನೆಗಳಲ್ಲಿ ಮಹೇಂದ್ರಗೆ ಮಾತ್ರ ಜಂಬೂಸವಾರಿಯಲ್ಲಿ ಅವಕಾಶ ಸಿಕ್ಕಿತು. 2017ರ ನಂತರ ಭೀಮ ರಾಜಪಥದಲ್ಲಿ ಹೆಜ್ಜೆ ಹಾಕಿದ.</p>.<p>* ಅಂಬಾರಿಗೆ ಪುಷ್ಪಾರ್ಚನೆಯು ಸಂಜೆಗೆ ನಿಗದಿಯಾಗಿದ್ದರಿಂದ, ಮಧ್ಯಾಹ್ನ 1ರ ವೇಳೆಗಾಗಲೇ ಬಹುತೇಕರು ಅರಮನೆ ಆವರಣ ಪ್ರವೇಶಿಸಿದ್ದರು. ಆಹ್ವಾನಿತರು ಪಾಸ್ ಹೊಂದಿದ್ದವರಿಗೆ ನೆರಳಿನ ವ್ಯವಸ್ಥೆಗಾಗಿ ಪೆಂಡಾಲ್ ಹಾಕಲಾಗಿತ್ತು. ಆದರೆ, ಗೋಲ್ಡ್ ಕಾರ್ಡ್, ಟಿಕೆಟ್ ಖರೀದಿಸಿದ್ದವರು, ಗಣ್ಯರಿಗೆ ಬಿಸಿಲಿನಲ್ಲೇ ಆಸನಗಳ ವ್ಯವಸ್ಥೆ ಮಾಡಲಾಗಿತ್ತು!</p>.<p>* ಮೆರವಣಿಗೆಗೆ ಪುಷ್ಪಾರ್ಚನೆ ವೇಳೆ ಗಣ್ಯರೊಂದಿಗೆ ಪಾಲ್ಗೊಂಡಿದ್ದ ಮೇಯರ್ ಶಿವಕುಮಾರ್ ನಂತರ ರಾಜಬೀದಿಯಲ್ಲಿ ಕುದುರೆ ಸವಾರಿ ನಡೆಸಿದರು.</p>.<p>* ಕೃಷಿ ಸಚಿವ ಬಿ.ಸಿ.ಪಾಟೀಲ ಜಂಬೂಸವಾರಿ ವೀಕ್ಷಣೆಗೆ ಕುಟುಂಬ ಸಮೇತ ಬಂದಿದ್ದರು.</p>.<p>* ಕಲಾತಂಡಗಳು ಜಿಲ್ಲಾಡಳಿತ ನೀಡಿದ್ದ ಪಟ್ಟಿಯಂತೆ ಅನುಕ್ರಮವಾಗಿ ಬರಲಿಲ್ಲ. ಇದು, ಗೊಂದಲಕ್ಕೆ ಕಾರಣವಾಯಿತು.</p>.<p>ಮೆರವಣಿಗೆಯಲ್ಲಿ ಅವ್ಯವಸ್ಥೆ:</p>.<p>* ಮೆರವಣಿಗೆಯಲ್ಲಿ ಅವ್ಯವಸ್ಥೆ ಕಂಡುಬಂತು. ಹಾದಿಯಲ್ಲಿ ಕಲಾವಿದರಿಗಿಂತ ಕಲಾವಿದರೇತರರೇ ಇದ್ದರು. ಬಿಜೆಪಿ ಕಾರ್ಯಕರ್ತರು, ಅವರ ಬೆಂಬಲಿಗರು, ಅಧಿಕಾರಿಗಳ ಕಡೆಯವರೇ ತುಂಬಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ವಿಜಯಪುರ ಸ್ತಬ್ಧಚಿತ್ರದ ನಂತರ ಮತ್ತೊಂದು ಕಲಾತಂಡ ಹಾಗೂ ಸ್ತಬ್ಧಚಿತ್ರ ಬರುವುದು ತಡವಾಯಿತು. ಈ ವೇಳೆ, ಮಾರ್ಗವು ಖಾಲಿಯೇ ಇತ್ತು. ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಪ್ರದರ್ಶನ ಮುಗಿದ ಬಳಿಕ ಅರಮನೆ ಆವರಣದ ವಿಶೇಷ ವೇದಿಕೆಯ ಬಳಿ ನೆರೆದಿದ್ದವರನ್ನು ಕಳುಹಿಸಲು ಪೊಲೀಸರಿಗೆ ಬಹಳ ಸಮಯ ಹಿಡಿಯಿತು!</p>.<p>* ಜಂಬೂಸವಾರಿಯ ಮಾರ್ಗದಲ್ಲಿನ ಹಸಿರು ಚಪ್ಪರ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಗಣಪತಿ ದೇವಸ್ಥಾನದ ಬಳಿ ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಬಾರಿ ಆನೆ ಅಭಿಮನ್ಯುಗೆ ಹಣ್ಣು ನೀಡಲಾಯಿತು.</p>.<p>* ಎಲ್ಇಡಿ ಪರದೆ ಇರಲಿಲ್ಲ: ಪ್ರತಿ ಬಾರಿ ಅರಮನೆಯಲ್ಲಿ ಜಂಬೂಸವಾರಿ ಚಾಲನೆ ದೃಶ್ಯವನ್ನು ಸಾರ್ವಜನಿಕರಿಗೆ ತೋರಿಸಲು ಜಂಬೂಸವಾರಿ ಮಾರ್ಗದಲ್ಲಿ ಎಲ್ಇಡಿ ಪರದೆ ಅಳವಡಿಸಲಾಗುತ್ತಿತ್ತು. ಸಾರ್ವಜನಿಕರು ತಾವು ಕುಳಿತಲ್ಲಿಯೇ ಎಲ್ಲವನ್ನೂ ವೀಕ್ಷಿಸಿ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಎಲ್ಇಡಿ ಪರದೆ ಅಳವಡಿಸಿರಲಿಲ್ಲ.</p>.<p>* ಪ್ರತಿ ಬಾರಿ ಪ್ರಮುಖ ವೃತ್ತಗಳಲ್ಲಿ ಆಯೋಜಿಸುತ್ತಿದ್ದ ವೀಕ್ಷಕರ ವಿವರಣೆಯನ್ನು ಈ ಬಾರಿ ಬಂದ್ ಮಾಡಲಾಗಿತ್ತು. ಜಂಬೂಸವಾರಿ ಮಾರ್ಗದಲ್ಲಿ ವೀಕ್ಷಕ ವಿವರಣೆಗಾರರು ಮೆರವಣಿಗೆಯಲ್ಲಿ ಭಾಗಿಯಾಗುವ ಕಲಾವಿದರು ಹಾಗೂ ಸ್ತಬ್ಧಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅರಮನೆ ಆವರಣದಲ್ಲಿ ಮಾತ್ರ ವೀಕ್ಷಕ ವಿವರಣೆ ನೀಡಲಾಯಿತು. ಲಕ್ಷ್ಮಿ, ಮಂಜುನಾಥ್ ಹಾಗೂ ನಂದಿನಿ ಆ ಕಾರ್ಯನಿರ್ವಹಿಸಿದರು.</p>.<p>* ಆನೆಗಳು ಹಾಕಿದ್ದ ಲದ್ದಿಗೆ ಕೆಲವರು ನಮನ ಸಲ್ಲಿಸಿದರು. ಕೆಲವರು ಅದನ್ನು ಒಯ್ದರು. ‘ಜಾನುವಾರುಗಳಿಗೆ ರೋಗ ಬಂದಾಗ, ಈ ಲದ್ದಿಯನ್ನು ಹಚ್ಚಿದರೆ ಬೇಗ ಗುಣವಾಗುತ್ತದೆ’ ಎಂದು ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜಂಬೂಸವಾರಿಯಲ್ಲಿ ಅಭಿಮನ್ಯು ಆನೆಯು ‘ಹ್ಯಾಟ್ರಿಕ್’ ಸಾಧನೆ ಮಾಡಿದೆ.<br /><br />ಗಜಪಡೆಯ ಕ್ಯಾಪ್ಟನ್ ‘ಗಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುವ ಮೂಲಕ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸಮರ್ಥವಾಗಿ ಬನ್ನಿಮಂಟಪದವರೆಗೆ ಸಾಗಿಸಿದ. ಹಿಂದಿನ ಎರಡು ಸರಳ ದಸರೆಯಲ್ಲಿ ಜಂಬೂಸವಾರಿಯು ಅರಮನೆಗೆ ಸೀಮಿತವಾಗಿ ನಡೆದಿತ್ತು. ಆಗಲೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರುನ ನಡೆಸಿದ ಎರಡನೇ ದಸರಾ ಆಯಿತು.</p>.<p>ಇದೇ ಮೊದಲ ಪಾಲ್ಗೊಂಡಿದ್ದ ಆನೆಗಳಲ್ಲಿ ಮಹೇಂದ್ರಗೆ ಮಾತ್ರ ಜಂಬೂಸವಾರಿಯಲ್ಲಿ ಅವಕಾಶ ಸಿಕ್ಕಿತು. 2017ರ ನಂತರ ಭೀಮ ರಾಜಪಥದಲ್ಲಿ ಹೆಜ್ಜೆ ಹಾಕಿದ.</p>.<p>* ಅಂಬಾರಿಗೆ ಪುಷ್ಪಾರ್ಚನೆಯು ಸಂಜೆಗೆ ನಿಗದಿಯಾಗಿದ್ದರಿಂದ, ಮಧ್ಯಾಹ್ನ 1ರ ವೇಳೆಗಾಗಲೇ ಬಹುತೇಕರು ಅರಮನೆ ಆವರಣ ಪ್ರವೇಶಿಸಿದ್ದರು. ಆಹ್ವಾನಿತರು ಪಾಸ್ ಹೊಂದಿದ್ದವರಿಗೆ ನೆರಳಿನ ವ್ಯವಸ್ಥೆಗಾಗಿ ಪೆಂಡಾಲ್ ಹಾಕಲಾಗಿತ್ತು. ಆದರೆ, ಗೋಲ್ಡ್ ಕಾರ್ಡ್, ಟಿಕೆಟ್ ಖರೀದಿಸಿದ್ದವರು, ಗಣ್ಯರಿಗೆ ಬಿಸಿಲಿನಲ್ಲೇ ಆಸನಗಳ ವ್ಯವಸ್ಥೆ ಮಾಡಲಾಗಿತ್ತು!</p>.<p>* ಮೆರವಣಿಗೆಗೆ ಪುಷ್ಪಾರ್ಚನೆ ವೇಳೆ ಗಣ್ಯರೊಂದಿಗೆ ಪಾಲ್ಗೊಂಡಿದ್ದ ಮೇಯರ್ ಶಿವಕುಮಾರ್ ನಂತರ ರಾಜಬೀದಿಯಲ್ಲಿ ಕುದುರೆ ಸವಾರಿ ನಡೆಸಿದರು.</p>.<p>* ಕೃಷಿ ಸಚಿವ ಬಿ.ಸಿ.ಪಾಟೀಲ ಜಂಬೂಸವಾರಿ ವೀಕ್ಷಣೆಗೆ ಕುಟುಂಬ ಸಮೇತ ಬಂದಿದ್ದರು.</p>.<p>* ಕಲಾತಂಡಗಳು ಜಿಲ್ಲಾಡಳಿತ ನೀಡಿದ್ದ ಪಟ್ಟಿಯಂತೆ ಅನುಕ್ರಮವಾಗಿ ಬರಲಿಲ್ಲ. ಇದು, ಗೊಂದಲಕ್ಕೆ ಕಾರಣವಾಯಿತು.</p>.<p>ಮೆರವಣಿಗೆಯಲ್ಲಿ ಅವ್ಯವಸ್ಥೆ:</p>.<p>* ಮೆರವಣಿಗೆಯಲ್ಲಿ ಅವ್ಯವಸ್ಥೆ ಕಂಡುಬಂತು. ಹಾದಿಯಲ್ಲಿ ಕಲಾವಿದರಿಗಿಂತ ಕಲಾವಿದರೇತರರೇ ಇದ್ದರು. ಬಿಜೆಪಿ ಕಾರ್ಯಕರ್ತರು, ಅವರ ಬೆಂಬಲಿಗರು, ಅಧಿಕಾರಿಗಳ ಕಡೆಯವರೇ ತುಂಬಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ವಿಜಯಪುರ ಸ್ತಬ್ಧಚಿತ್ರದ ನಂತರ ಮತ್ತೊಂದು ಕಲಾತಂಡ ಹಾಗೂ ಸ್ತಬ್ಧಚಿತ್ರ ಬರುವುದು ತಡವಾಯಿತು. ಈ ವೇಳೆ, ಮಾರ್ಗವು ಖಾಲಿಯೇ ಇತ್ತು. ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಪ್ರದರ್ಶನ ಮುಗಿದ ಬಳಿಕ ಅರಮನೆ ಆವರಣದ ವಿಶೇಷ ವೇದಿಕೆಯ ಬಳಿ ನೆರೆದಿದ್ದವರನ್ನು ಕಳುಹಿಸಲು ಪೊಲೀಸರಿಗೆ ಬಹಳ ಸಮಯ ಹಿಡಿಯಿತು!</p>.<p>* ಜಂಬೂಸವಾರಿಯ ಮಾರ್ಗದಲ್ಲಿನ ಹಸಿರು ಚಪ್ಪರ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಗಣಪತಿ ದೇವಸ್ಥಾನದ ಬಳಿ ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಬಾರಿ ಆನೆ ಅಭಿಮನ್ಯುಗೆ ಹಣ್ಣು ನೀಡಲಾಯಿತು.</p>.<p>* ಎಲ್ಇಡಿ ಪರದೆ ಇರಲಿಲ್ಲ: ಪ್ರತಿ ಬಾರಿ ಅರಮನೆಯಲ್ಲಿ ಜಂಬೂಸವಾರಿ ಚಾಲನೆ ದೃಶ್ಯವನ್ನು ಸಾರ್ವಜನಿಕರಿಗೆ ತೋರಿಸಲು ಜಂಬೂಸವಾರಿ ಮಾರ್ಗದಲ್ಲಿ ಎಲ್ಇಡಿ ಪರದೆ ಅಳವಡಿಸಲಾಗುತ್ತಿತ್ತು. ಸಾರ್ವಜನಿಕರು ತಾವು ಕುಳಿತಲ್ಲಿಯೇ ಎಲ್ಲವನ್ನೂ ವೀಕ್ಷಿಸಿ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಎಲ್ಇಡಿ ಪರದೆ ಅಳವಡಿಸಿರಲಿಲ್ಲ.</p>.<p>* ಪ್ರತಿ ಬಾರಿ ಪ್ರಮುಖ ವೃತ್ತಗಳಲ್ಲಿ ಆಯೋಜಿಸುತ್ತಿದ್ದ ವೀಕ್ಷಕರ ವಿವರಣೆಯನ್ನು ಈ ಬಾರಿ ಬಂದ್ ಮಾಡಲಾಗಿತ್ತು. ಜಂಬೂಸವಾರಿ ಮಾರ್ಗದಲ್ಲಿ ವೀಕ್ಷಕ ವಿವರಣೆಗಾರರು ಮೆರವಣಿಗೆಯಲ್ಲಿ ಭಾಗಿಯಾಗುವ ಕಲಾವಿದರು ಹಾಗೂ ಸ್ತಬ್ಧಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅರಮನೆ ಆವರಣದಲ್ಲಿ ಮಾತ್ರ ವೀಕ್ಷಕ ವಿವರಣೆ ನೀಡಲಾಯಿತು. ಲಕ್ಷ್ಮಿ, ಮಂಜುನಾಥ್ ಹಾಗೂ ನಂದಿನಿ ಆ ಕಾರ್ಯನಿರ್ವಹಿಸಿದರು.</p>.<p>* ಆನೆಗಳು ಹಾಕಿದ್ದ ಲದ್ದಿಗೆ ಕೆಲವರು ನಮನ ಸಲ್ಲಿಸಿದರು. ಕೆಲವರು ಅದನ್ನು ಒಯ್ದರು. ‘ಜಾನುವಾರುಗಳಿಗೆ ರೋಗ ಬಂದಾಗ, ಈ ಲದ್ದಿಯನ್ನು ಹಚ್ಚಿದರೆ ಬೇಗ ಗುಣವಾಗುತ್ತದೆ’ ಎಂದು ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>