<p>ಹುಣಸೂರು: ‘ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡುವ ಸುರಕ್ಷಾ ಸೌಲಭ್ಯಗಳನ್ನು ತಲುಪಿಸಿ, ಆರೋಗ್ಯ ಸುಧಾರಿಸುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ’ ಎಂದು ಉಪವಿಭಾಗಾಧಿಕಾರಿ ಕಾವ್ಯರಾಣಿ ಹೇಳಿದರು.</p>.<p>ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ‘ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮಾಡಲು ಅಗತ್ಯ ಬೇಕಿರುವ ಸುರಕ್ಷಾ ವಸ್ತುಗಳನ್ನು ನೀಡಬೇಕು ಮತ್ತು ಆರೋಗ್ಯ ತಪಾಸಣೆ ನಿಯಮಾನುಸಾರ ಕೈಗೊಳ್ಳಬೇಕು. ಈ ಸಂಬಂಧ ಮುಂದಿನ ಸಭೆಯೊಳಗೆ ಉಪವಿಭಾಗದಲ್ಲಿನ ಎಲ್ಲಾ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಿ ನೀಡಬೇಕು’ ಎಂದು ತಾಕೀತು ಮಾಡಿದರು.</p>.<p>ಸಮಿತಿ ಸದಸ್ಯ ಲಕ್ಷ್ಮಣ್ ಮಾತನಾಡಿ, ‘ಪೌರಕಾರ್ಮಿಕರಿಗೆ ನಿವೇಶನ ಇಲ್ಲದೆ ಒಂದು ಸೂರಿನಲ್ಲಿ ಮೂರು, ನಾಲ್ಕು ಕುಟುಂಬ ಬದುಕು ನಡೆಸುತ್ತಿವೆ. ಈ ಕುಟುಂಬಕ್ಕೆ ನಿವೇಶನ ನೀಡಿದರೆ ನಗರಸಭೆಯಲ್ಲಿ ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಕಾಯ್ದಿಟ್ಟ ₹ 98 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯವಾಗಲಿದೆ’ ಎಂದರು.</p>.<p>‘ನಗರ ವ್ಯಾಪ್ತಿಯಲ್ಲಿ 34 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದು, ಈ ಪೈಕಿ 2 ಎಕರೆ ನಗರಸಭೆಯಲ್ಲಿ ಕಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ 34 ಕುಟುಂಬಗಳಿಗೆ ನಿವೇಶನ ನೀಡಬೇಕು’ ಎಂದರು.</p>.<p>ತಹಶೀಲ್ದಾರ್ ಮಂಜುನಾಥ್ ಉತ್ತರಿಸಿ, ‘ಈ ಹಿಂದೆ ಸರ್ವೆ ನಂ 75 ರಲ್ಲಿ ಗುರುತಿಸಿದ್ದ ನಿವೇಶನ ಕರ್ದಾ ಭೂಮಿ ಎಂದು ನಮೂದಾಗಿದ್ದು, ಈ ಭೂಮಿ ಯಾರಿಗೂ ನೀಡಲು ಬರುವುದಿಲ್ಲ. ಸ.ನಂ. 73ರ ನಿವೇಶನ ಗುರುತಿಸಿದ್ದು, ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನದಲ್ಲಿ ಅಂತ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.</p>.<p>ನಗರಸಭೆ ಆಯುಕ್ತೆ ಮಾನಸ ಮಾತನಾಡಿ, ‘ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಕಾದಿಟ್ಟ ಅನುದಾನದಲ್ಲಿ ನಿವೇಶನ ಹೊಂದಿರುವ ಕಾಯಂ ನೌಕರರಿಗೆ ತಲಾ ₹ 3 ಲಕ್ಷ ನೀಡಲು ಈ ಹಿಂದಿನ ಆಡಳಿತ ಮಂಡಳಿ ತೀರ್ಮಾನಿಸಿದೆ. ಅದರಂತೆ ನೀಡಲು ಬದ್ಧ’ ಎಂದರು.</p>.<p>‘ನಗರಸಭೆಗೆ ಹೊಂದಿಕೊಂಡಂತೆ ಪೌರಕಾರ್ಮಿಕರಿಗೆ ವಿಶ್ರಾಂತಿ ಭವನ ಮತ್ತು ಕ್ಯಾಂಟಿನ್ಗೆ ಕಟ್ಟಡ ನಿರ್ಮಿಸಿದ್ದರೂ ಅಧಿಕಾರಿಗಳು ಖಾಸಗಿ ಹೋಟೆಲ್ಗೆ ಗುತ್ತಿಗೆ ನೀಡಲಾಗಿದೆ. ಪೌರಕಾರ್ಮಿಕರ ಭವನ ಗೋದಾಮಾಗಿದೆ’ ಎಂದು ಸದಸ್ಯ ಲಕ್ಷ್ಮಣ್ ಸಭೆ ಗಮನಕ್ಕೆ ತಂದರು.</p>.<p>ಆಯುಕ್ತೆ ಮಾನಸ ಉತ್ತರಿಸಿ, ‘ಕ್ಯಾಂಟಿನ್ ಆರಂಭಿಸಲು ಕಷ್ಟವಾಗಿದ್ದು, ಸರ್ಕಾರದ ನಿಯಮದಂತೆ ಪ್ರತಿಯೊಬ್ಬರಿಗೂ ₹36 ರಂತೆ ಗುಣಮಟ್ಟದ ಉಪಾಹಾರ ನೀಡಲಾಗಿದೆ’ ಎಂದರು.</p>.<p>ಸಭೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಸದಸ್ಯೆ ನಾಗಮಣಿ, ಉಪವಿಭಾಗ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><blockquote>ಪೌರಕಾರ್ಮಿಕರ ಕಾಲೊನಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ರಸ್ತೆಗೆ ಅಡ್ಡಲಾಗಿ ಖಾಸಗಿ ಬಡಾವಣೆಯ ನಿವಾಸಿಯೊಬ್ಬರು ಶೆಡ್ ನಿರ್ಮಿಸಿದ್ದು ತೆರವಿಗೆ ಕ್ರಮವಹಿಸಬೇಕು </blockquote><span class="attribution">ಲಕ್ಷ್ಮಣ್ ಸದಸ್ಯ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ‘ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡುವ ಸುರಕ್ಷಾ ಸೌಲಭ್ಯಗಳನ್ನು ತಲುಪಿಸಿ, ಆರೋಗ್ಯ ಸುಧಾರಿಸುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ’ ಎಂದು ಉಪವಿಭಾಗಾಧಿಕಾರಿ ಕಾವ್ಯರಾಣಿ ಹೇಳಿದರು.</p>.<p>ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ‘ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮಾಡಲು ಅಗತ್ಯ ಬೇಕಿರುವ ಸುರಕ್ಷಾ ವಸ್ತುಗಳನ್ನು ನೀಡಬೇಕು ಮತ್ತು ಆರೋಗ್ಯ ತಪಾಸಣೆ ನಿಯಮಾನುಸಾರ ಕೈಗೊಳ್ಳಬೇಕು. ಈ ಸಂಬಂಧ ಮುಂದಿನ ಸಭೆಯೊಳಗೆ ಉಪವಿಭಾಗದಲ್ಲಿನ ಎಲ್ಲಾ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಿ ನೀಡಬೇಕು’ ಎಂದು ತಾಕೀತು ಮಾಡಿದರು.</p>.<p>ಸಮಿತಿ ಸದಸ್ಯ ಲಕ್ಷ್ಮಣ್ ಮಾತನಾಡಿ, ‘ಪೌರಕಾರ್ಮಿಕರಿಗೆ ನಿವೇಶನ ಇಲ್ಲದೆ ಒಂದು ಸೂರಿನಲ್ಲಿ ಮೂರು, ನಾಲ್ಕು ಕುಟುಂಬ ಬದುಕು ನಡೆಸುತ್ತಿವೆ. ಈ ಕುಟುಂಬಕ್ಕೆ ನಿವೇಶನ ನೀಡಿದರೆ ನಗರಸಭೆಯಲ್ಲಿ ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಕಾಯ್ದಿಟ್ಟ ₹ 98 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯವಾಗಲಿದೆ’ ಎಂದರು.</p>.<p>‘ನಗರ ವ್ಯಾಪ್ತಿಯಲ್ಲಿ 34 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದು, ಈ ಪೈಕಿ 2 ಎಕರೆ ನಗರಸಭೆಯಲ್ಲಿ ಕಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ 34 ಕುಟುಂಬಗಳಿಗೆ ನಿವೇಶನ ನೀಡಬೇಕು’ ಎಂದರು.</p>.<p>ತಹಶೀಲ್ದಾರ್ ಮಂಜುನಾಥ್ ಉತ್ತರಿಸಿ, ‘ಈ ಹಿಂದೆ ಸರ್ವೆ ನಂ 75 ರಲ್ಲಿ ಗುರುತಿಸಿದ್ದ ನಿವೇಶನ ಕರ್ದಾ ಭೂಮಿ ಎಂದು ನಮೂದಾಗಿದ್ದು, ಈ ಭೂಮಿ ಯಾರಿಗೂ ನೀಡಲು ಬರುವುದಿಲ್ಲ. ಸ.ನಂ. 73ರ ನಿವೇಶನ ಗುರುತಿಸಿದ್ದು, ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನದಲ್ಲಿ ಅಂತ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.</p>.<p>ನಗರಸಭೆ ಆಯುಕ್ತೆ ಮಾನಸ ಮಾತನಾಡಿ, ‘ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಕಾದಿಟ್ಟ ಅನುದಾನದಲ್ಲಿ ನಿವೇಶನ ಹೊಂದಿರುವ ಕಾಯಂ ನೌಕರರಿಗೆ ತಲಾ ₹ 3 ಲಕ್ಷ ನೀಡಲು ಈ ಹಿಂದಿನ ಆಡಳಿತ ಮಂಡಳಿ ತೀರ್ಮಾನಿಸಿದೆ. ಅದರಂತೆ ನೀಡಲು ಬದ್ಧ’ ಎಂದರು.</p>.<p>‘ನಗರಸಭೆಗೆ ಹೊಂದಿಕೊಂಡಂತೆ ಪೌರಕಾರ್ಮಿಕರಿಗೆ ವಿಶ್ರಾಂತಿ ಭವನ ಮತ್ತು ಕ್ಯಾಂಟಿನ್ಗೆ ಕಟ್ಟಡ ನಿರ್ಮಿಸಿದ್ದರೂ ಅಧಿಕಾರಿಗಳು ಖಾಸಗಿ ಹೋಟೆಲ್ಗೆ ಗುತ್ತಿಗೆ ನೀಡಲಾಗಿದೆ. ಪೌರಕಾರ್ಮಿಕರ ಭವನ ಗೋದಾಮಾಗಿದೆ’ ಎಂದು ಸದಸ್ಯ ಲಕ್ಷ್ಮಣ್ ಸಭೆ ಗಮನಕ್ಕೆ ತಂದರು.</p>.<p>ಆಯುಕ್ತೆ ಮಾನಸ ಉತ್ತರಿಸಿ, ‘ಕ್ಯಾಂಟಿನ್ ಆರಂಭಿಸಲು ಕಷ್ಟವಾಗಿದ್ದು, ಸರ್ಕಾರದ ನಿಯಮದಂತೆ ಪ್ರತಿಯೊಬ್ಬರಿಗೂ ₹36 ರಂತೆ ಗುಣಮಟ್ಟದ ಉಪಾಹಾರ ನೀಡಲಾಗಿದೆ’ ಎಂದರು.</p>.<p>ಸಭೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಸದಸ್ಯೆ ನಾಗಮಣಿ, ಉಪವಿಭಾಗ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><blockquote>ಪೌರಕಾರ್ಮಿಕರ ಕಾಲೊನಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ರಸ್ತೆಗೆ ಅಡ್ಡಲಾಗಿ ಖಾಸಗಿ ಬಡಾವಣೆಯ ನಿವಾಸಿಯೊಬ್ಬರು ಶೆಡ್ ನಿರ್ಮಿಸಿದ್ದು ತೆರವಿಗೆ ಕ್ರಮವಹಿಸಬೇಕು </blockquote><span class="attribution">ಲಕ್ಷ್ಮಣ್ ಸದಸ್ಯ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>