<p><strong>ಮೈಸೂರು</strong>: ‘ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳು ವೃತ್ತಿ ಗಳಿಸುವುದನ್ನೇ ಗುರಿ ಎಂದುಕೊಳ್ಳಬಾರದು. ಬದುಕಿನ ಯಾವುದೇ ಕ್ಷಣಗಳನ್ನು ಎದುರಿಸುವ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಬೇಕು’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಡಾ.ಬಿ.ಸುರೇಶ್ ಸಲಹೆ ನೀಡಿದರು.</p>.<p>ನಗರದ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಗೋಲ್ಡನ್ ಜ್ಯುಬಿಲಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಎವಾಲ್ವ್–ಟೆಕ್ ಫೆಸ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣವೆಂದರೆ ಕೇವಲ ಕಾಲೇಜಿನ ಕೊಠಡಿಯೊಳಗಿನ ಕಲಿಕೆ ಮಾತ್ರವಲ್ಲ. ಹೊರಗಿನ ಬದುಕಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವ ಕ್ರಮ. ಗುರಿಯನ್ನು ಇರಿಸಿಕೊಳ್ಳುವುದು, ಉತ್ತಮ ಸಂವಹನ ಮತ್ತು ಸದಾ ಕ್ರಿಯಾಶೀಲವಾಗಿರುವುದು ನಮಗೆ ಸ್ಥಿರತೆ ನೀಡುತ್ತದೆ. ಸ್ಥಿರವಾದ ವ್ಯಕ್ತಿಗೆ ಉಜ್ವಲ ಭವಿಷ್ಯ ದೊರೆಯುವುದು ಖಂಡಿತ’ ಎಂದು ತಿಳಿಸಿದರು.</p>.<p>ಟೆಕ್ಸ್ಯಾಂಡ್ಸ್ ಎಐ ಕಂಪನಿ ಸಿಇಒ ಮಾನಸ್ ದಾಸ್ಗುಪ್ತಾ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಪಠ್ಯಗಳನ್ನು ಕರಗತ ಮಾಡಿಕೊಳ್ಳುವುದರ ಜೊತೆಗೆ ಹೊರಗಿನ ಉದ್ಯಮಗಳಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳತ್ತಲೂ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ಉತ್ಪನ್ನ ಮತ್ತು ಸೇವಾ ವಲಯಗಳಲ್ಲಿ ಇಂದು ಭಾರಿ ಪ್ರಮಾಣದ ಬದಲಾವಣೆಗಳಾಗಿವೆ. ದಿನ ದಿನವೂ ನೂತನ ತಂತ್ರಾಂಶ ಮತ್ತು ನಿರ್ಮಾಣ ವ್ಯವಸ್ಥೆಗಳು ಸೇರ್ಪಡೆಗೊಳ್ಳುತ್ತಿವೆ. ಅದನ್ನು ತಿಳಿದುಕೊಂಡು, ಅವಕಾಶಗಳಿಗಾಗಿ ನಾವೂ ಅಪ್ಡೇಟ್ ಆಗುತ್ತಿರಬೇಕು’ ಎಂದು ತಿಳಿಸಿದರು.</p>.<p>ಟಿಸಿಎಸ್ನ ಎಚ್ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಆರ್.ಅಂಜನ, ಜೆಎಸ್ಎಸ್ ಎಸ್ಟಿಯು ಉಪ ಕುಲಪತಿ ಡಾ.ಎ.ಎಸ್.ಸಂತೋಷ್ಕುಮಾರ್, ಪ್ಲೇಸ್ಮೆಂಟ್ ಅಧಿಕಾರಿ ಡಾ.ಎಂ.ಪ್ರದೀಪ್, ಸಿಂಧು ಹಾಗೂ ಋತು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳು ವೃತ್ತಿ ಗಳಿಸುವುದನ್ನೇ ಗುರಿ ಎಂದುಕೊಳ್ಳಬಾರದು. ಬದುಕಿನ ಯಾವುದೇ ಕ್ಷಣಗಳನ್ನು ಎದುರಿಸುವ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಬೇಕು’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಡಾ.ಬಿ.ಸುರೇಶ್ ಸಲಹೆ ನೀಡಿದರು.</p>.<p>ನಗರದ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಗೋಲ್ಡನ್ ಜ್ಯುಬಿಲಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಎವಾಲ್ವ್–ಟೆಕ್ ಫೆಸ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣವೆಂದರೆ ಕೇವಲ ಕಾಲೇಜಿನ ಕೊಠಡಿಯೊಳಗಿನ ಕಲಿಕೆ ಮಾತ್ರವಲ್ಲ. ಹೊರಗಿನ ಬದುಕಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವ ಕ್ರಮ. ಗುರಿಯನ್ನು ಇರಿಸಿಕೊಳ್ಳುವುದು, ಉತ್ತಮ ಸಂವಹನ ಮತ್ತು ಸದಾ ಕ್ರಿಯಾಶೀಲವಾಗಿರುವುದು ನಮಗೆ ಸ್ಥಿರತೆ ನೀಡುತ್ತದೆ. ಸ್ಥಿರವಾದ ವ್ಯಕ್ತಿಗೆ ಉಜ್ವಲ ಭವಿಷ್ಯ ದೊರೆಯುವುದು ಖಂಡಿತ’ ಎಂದು ತಿಳಿಸಿದರು.</p>.<p>ಟೆಕ್ಸ್ಯಾಂಡ್ಸ್ ಎಐ ಕಂಪನಿ ಸಿಇಒ ಮಾನಸ್ ದಾಸ್ಗುಪ್ತಾ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಪಠ್ಯಗಳನ್ನು ಕರಗತ ಮಾಡಿಕೊಳ್ಳುವುದರ ಜೊತೆಗೆ ಹೊರಗಿನ ಉದ್ಯಮಗಳಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳತ್ತಲೂ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ಉತ್ಪನ್ನ ಮತ್ತು ಸೇವಾ ವಲಯಗಳಲ್ಲಿ ಇಂದು ಭಾರಿ ಪ್ರಮಾಣದ ಬದಲಾವಣೆಗಳಾಗಿವೆ. ದಿನ ದಿನವೂ ನೂತನ ತಂತ್ರಾಂಶ ಮತ್ತು ನಿರ್ಮಾಣ ವ್ಯವಸ್ಥೆಗಳು ಸೇರ್ಪಡೆಗೊಳ್ಳುತ್ತಿವೆ. ಅದನ್ನು ತಿಳಿದುಕೊಂಡು, ಅವಕಾಶಗಳಿಗಾಗಿ ನಾವೂ ಅಪ್ಡೇಟ್ ಆಗುತ್ತಿರಬೇಕು’ ಎಂದು ತಿಳಿಸಿದರು.</p>.<p>ಟಿಸಿಎಸ್ನ ಎಚ್ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಆರ್.ಅಂಜನ, ಜೆಎಸ್ಎಸ್ ಎಸ್ಟಿಯು ಉಪ ಕುಲಪತಿ ಡಾ.ಎ.ಎಸ್.ಸಂತೋಷ್ಕುಮಾರ್, ಪ್ಲೇಸ್ಮೆಂಟ್ ಅಧಿಕಾರಿ ಡಾ.ಎಂ.ಪ್ರದೀಪ್, ಸಿಂಧು ಹಾಗೂ ಋತು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>