<p><strong>ಮೈಸೂರು</strong>: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾನುವಾರ ಐದಂಕಿ ತಲುಪಿದೆ. ಇದರ ಬೆನ್ನಿಗೆ ಪೀಡಿತರ ಸಾವಿನ ಸಂಖ್ಯೆಯೂ ತ್ರಿಶತಕ ದಾಟಿದೆ. ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ, ಮೈಸೂರು ಜಿಲ್ಲೆಯಲ್ಲೇ ಹೆಚ್ಚಿನ ಸಾವು ಸಂಭವಿಸಿವೆ.</p>.<p>620 ಜನರು ಹೊಸದಾಗಿ ಸೋಂಕು ಪೀಡಿತರಾಗಿದ್ದಾರೆ. 386 ಮಂದಿಯಷ್ಟೇ ಗುಣಮುಖರಾಗಿ ಮನೆಗೆ ಮರಳಿ, ಹೋಂ ಕ್ವಾರಂಟೈನ್ ಆಗಿದ್ದಾರೆ. ಗುಣಮುಖರಿಗಿಂತ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ.</p>.<p>ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾನುವಾರ 10,535ಕ್ಕೆ ತಲುಪಿದೆ. ಗುಣಮುಖರ ಸಂಖ್ಯೆಯೂ 6,475 ಆಗಿದೆ. 3756 ಜನರು ಕೋವಿಡ್–19ಗೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.</p>.<p>ಆರೋಗ್ಯ ಇಲಾಖೆಯ ಪ್ರಕಟಣೆ 10 ಜನರ ಸಾವನ್ನು ದೃಢಪಡಿಸಿದೆ. ಇವರಲ್ಲಿ 9 ಪುರುಷರಿದ್ದರೆ, ಒಬ್ಬರು ಮಹಿಳೆಯರು. ಈ ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ವಿವಿಧ ಅನಾರೋಗ್ಯಕ್ಕೀಡಾಗಿದ್ದವರು ಎಂಬುದನ್ನು ತಿಳಿಸಿದೆ. 46 ವರ್ಷದಿಂದ 80 ವರ್ಷದವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 304 ಆಗಿದೆ.</p>.<p>ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ 3,756 ಜನರಲ್ಲಿ 243 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, 1,055 ಜನರು ಕೋವಿಡ್ ಕೇರ್ ಸೆಂಟರ್ನಲ್ಲಿ ಆರೈಕೆಯಲ್ಲಿದ್ದಾರೆ. 97 ಮಂದಿ ಹೆಲ್ತ್ ಕೇರ್ ಸೆಂಟರ್ಗೆ ದಾಖಲಾಗಿದ್ದಾರೆ.</p>.<p>ಮನೆಯಲ್ಲೇ 2,087 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸಗಳಲ್ಲೇ ಐಸೊಲೇಷನ್ ಆಗುವವರ ಸಂಖ್ಯೆ ಮತ್ತೆ ತುಸು ಹೆಚ್ಚಿದೆ. 137 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 137 ಜನರು ಖಾಸಗಿ ಕೋವಿಡ್ ಕೇರ್ ಸೆಂಟರ್ಗೆ ಆರೈಕೆಗಾಗಿ ದಾಖಲಾಗಿದ್ದಾರೆ. ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಜಿಲ್ಲಾಡಳಿತದ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.</p>.<p class="Briefhead"><strong>ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್ ಇಂದು</strong></p>.<p>ಜಿಲ್ಲಾ ಆರೋಗ್ಯ ಇಲಾಖೆ ಆ.17ರ ಸೋಮವಾರ ನಗರವೂ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಕೋವಿಡ್-19 ಆ್ಯಂಟಿಜನ್ ರ್ಯಾಪಿಡ್ ತಪಾಸಣಾ ಶಿಬಿರ ಆಯೋಜಿಸಿದೆ.</p>.<p>ಮೈಸೂರಿನ ಟೌನ್ಹಾಲ್, ಉದಯಗಿರಿಯ ಕೂಬಾ ಸ್ಕೂಲ್, ಹೆಬ್ಬಾಳದ ಸಿಐಟಿಬಿ ಕಲ್ಯಾಣ ಮಂಟಪ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ರಾಜೀವ್ ನಗರದ ಆಲ್ ಕರೀಮ್ ಶಾಲೆ ಆವರಣದಲ್ಲಿ ಕೋವಿಡ್–19 ತಪಾಸಣೆಗಾಗಿ ಸಾರ್ವಜನಿಕರಿಂದ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.</p>.<p>ಮೈಸೂರು ಮಕ್ಕಳ ಕೂಟ, ಕುರುಬಾರಹಳ್ಳಿ ವೃತ್ತದ ಬಳಿಯ ಆಸ್ಪತ್ರೆ, ಎನ್.ಎಚ್.ಪಾಳ್ಯದ ಸರ್ಕಾರಿ ಆಸ್ಪತ್ರೆ, ಉದ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಬೆಳವಾಡಿ ಶಾಲೆಯ ಆವರಣದಲ್ಲೂ ಪರೀಕ್ಷೆ ನಡೆಯಲಿದೆ.</p>.<p><strong>ಕೋವಿಡ್ ಅಂಕಿ–ಅಂಶ</strong></p>.<p><strong>ಜಿಲ್ಲೆಯಲ್ಲಿ ಒಟ್ಟು–10,535,ಸಕ್ರಿಯ ಪ್ರಕರಣ–3,756, ಗುಣಮುಖ–6,475, ಸಾವು–304</strong></p>.<p><strong>ದಿನದ ಏರಿಕೆ–620, ಗುಣಮುಖ–386, ಸಾವು–10</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾನುವಾರ ಐದಂಕಿ ತಲುಪಿದೆ. ಇದರ ಬೆನ್ನಿಗೆ ಪೀಡಿತರ ಸಾವಿನ ಸಂಖ್ಯೆಯೂ ತ್ರಿಶತಕ ದಾಟಿದೆ. ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ, ಮೈಸೂರು ಜಿಲ್ಲೆಯಲ್ಲೇ ಹೆಚ್ಚಿನ ಸಾವು ಸಂಭವಿಸಿವೆ.</p>.<p>620 ಜನರು ಹೊಸದಾಗಿ ಸೋಂಕು ಪೀಡಿತರಾಗಿದ್ದಾರೆ. 386 ಮಂದಿಯಷ್ಟೇ ಗುಣಮುಖರಾಗಿ ಮನೆಗೆ ಮರಳಿ, ಹೋಂ ಕ್ವಾರಂಟೈನ್ ಆಗಿದ್ದಾರೆ. ಗುಣಮುಖರಿಗಿಂತ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ.</p>.<p>ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾನುವಾರ 10,535ಕ್ಕೆ ತಲುಪಿದೆ. ಗುಣಮುಖರ ಸಂಖ್ಯೆಯೂ 6,475 ಆಗಿದೆ. 3756 ಜನರು ಕೋವಿಡ್–19ಗೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.</p>.<p>ಆರೋಗ್ಯ ಇಲಾಖೆಯ ಪ್ರಕಟಣೆ 10 ಜನರ ಸಾವನ್ನು ದೃಢಪಡಿಸಿದೆ. ಇವರಲ್ಲಿ 9 ಪುರುಷರಿದ್ದರೆ, ಒಬ್ಬರು ಮಹಿಳೆಯರು. ಈ ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ವಿವಿಧ ಅನಾರೋಗ್ಯಕ್ಕೀಡಾಗಿದ್ದವರು ಎಂಬುದನ್ನು ತಿಳಿಸಿದೆ. 46 ವರ್ಷದಿಂದ 80 ವರ್ಷದವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 304 ಆಗಿದೆ.</p>.<p>ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ 3,756 ಜನರಲ್ಲಿ 243 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, 1,055 ಜನರು ಕೋವಿಡ್ ಕೇರ್ ಸೆಂಟರ್ನಲ್ಲಿ ಆರೈಕೆಯಲ್ಲಿದ್ದಾರೆ. 97 ಮಂದಿ ಹೆಲ್ತ್ ಕೇರ್ ಸೆಂಟರ್ಗೆ ದಾಖಲಾಗಿದ್ದಾರೆ.</p>.<p>ಮನೆಯಲ್ಲೇ 2,087 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸಗಳಲ್ಲೇ ಐಸೊಲೇಷನ್ ಆಗುವವರ ಸಂಖ್ಯೆ ಮತ್ತೆ ತುಸು ಹೆಚ್ಚಿದೆ. 137 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 137 ಜನರು ಖಾಸಗಿ ಕೋವಿಡ್ ಕೇರ್ ಸೆಂಟರ್ಗೆ ಆರೈಕೆಗಾಗಿ ದಾಖಲಾಗಿದ್ದಾರೆ. ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಜಿಲ್ಲಾಡಳಿತದ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.</p>.<p class="Briefhead"><strong>ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್ ಇಂದು</strong></p>.<p>ಜಿಲ್ಲಾ ಆರೋಗ್ಯ ಇಲಾಖೆ ಆ.17ರ ಸೋಮವಾರ ನಗರವೂ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಕೋವಿಡ್-19 ಆ್ಯಂಟಿಜನ್ ರ್ಯಾಪಿಡ್ ತಪಾಸಣಾ ಶಿಬಿರ ಆಯೋಜಿಸಿದೆ.</p>.<p>ಮೈಸೂರಿನ ಟೌನ್ಹಾಲ್, ಉದಯಗಿರಿಯ ಕೂಬಾ ಸ್ಕೂಲ್, ಹೆಬ್ಬಾಳದ ಸಿಐಟಿಬಿ ಕಲ್ಯಾಣ ಮಂಟಪ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ರಾಜೀವ್ ನಗರದ ಆಲ್ ಕರೀಮ್ ಶಾಲೆ ಆವರಣದಲ್ಲಿ ಕೋವಿಡ್–19 ತಪಾಸಣೆಗಾಗಿ ಸಾರ್ವಜನಿಕರಿಂದ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.</p>.<p>ಮೈಸೂರು ಮಕ್ಕಳ ಕೂಟ, ಕುರುಬಾರಹಳ್ಳಿ ವೃತ್ತದ ಬಳಿಯ ಆಸ್ಪತ್ರೆ, ಎನ್.ಎಚ್.ಪಾಳ್ಯದ ಸರ್ಕಾರಿ ಆಸ್ಪತ್ರೆ, ಉದ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಬೆಳವಾಡಿ ಶಾಲೆಯ ಆವರಣದಲ್ಲೂ ಪರೀಕ್ಷೆ ನಡೆಯಲಿದೆ.</p>.<p><strong>ಕೋವಿಡ್ ಅಂಕಿ–ಅಂಶ</strong></p>.<p><strong>ಜಿಲ್ಲೆಯಲ್ಲಿ ಒಟ್ಟು–10,535,ಸಕ್ರಿಯ ಪ್ರಕರಣ–3,756, ಗುಣಮುಖ–6,475, ಸಾವು–304</strong></p>.<p><strong>ದಿನದ ಏರಿಕೆ–620, ಗುಣಮುಖ–386, ಸಾವು–10</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>