<p><strong>ಮೈಸೂರು</strong>: ‘ಹಕ್ಕು ಮತ್ತು ಅಧಿಕಾರ ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಇಲ್ಲಿ ತಮ್ಮ ಬೆಂಬಲಿಗರಿಗೆ ಹೇಳಿದರು.</p>.<p>ನಗರದ ಕಲಾಮಂದಿರದಲ್ಲಿ ‘ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ’ವು ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ಅವರು ಮಾತನಾಡಿದರು.</p>.<p>‘ನೀವು ಮುಖ್ಯಮಂತ್ರಿಯಾಗಬೇಕು’ ಎಂಬ ಅಭಿಮಾನಿಗಳ ಕೂಗಿಗೆ, ‘ಎಲ್ಲರಿಗೂ ಹೃದಯ ವೈಶಾಲ್ಯ ಇರಬೇಕು. ಆದರೆ ಅದು ಆಗುತ್ತಿಲ್ಲ. ಹೋರಾಟಕ್ಕೆ ಸಜ್ಜಾಗದಿದ್ದರೆ ಬಾಬಾಸಾಹೇಬರಿಗೆ ಮಾಡುವ ಅಪಮಾನ’ ಎಂದರು. </p>.<p>‘ಒಂದು ಸಮುದಾಯವು ನಿಮ್ಮ ಜೊತೆಗೆ ಯಾವಾಗಲೂ ನಿಂತಿದೆ. ಅವರಿಗೆ ಮೋಸ ಮಾಡಿದರೆ ಅದು ಬುದ್ದಿ ಕಲಿಸುತ್ತದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಅದು ನಿಜ. ಹೃದಯ ಶ್ರೀಮಂತಿಕೆ ನಿಮಗೆ ಬರಬಾರದೇ’ ಎಂದು ಪ್ರಶ್ನಿಸಿದರು. </p>.<p>‘ದಲಿತ ಸಮುದಾಯವು ಸಮಾನತೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಕಾಯ ಬೇಕು? ದೇಶ 3ನೇ ದೊಡ್ಡ ಆರ್ಥಿಕತೆಯಾಗಿದೆ. ಚಂದ್ರಯಾನ ಮಾಡಿದೆ. ಬಲಿಷ್ಠ ಸೇನೆಯಿದೆ. ಆದರೂ, ಜಾತಿ ಸಂಘಗಳು ರಚನೆಯಾಗುತ್ತಿವೆ. ಶಾಶ್ವತ ಸಮಾನತೆ ಬರುವವರೆಗೂ ಮೀಸಲಾತಿ ಇರಲೇಬೇಕು’ ಎಂದರು.</p>.<p>‘ಪ್ರತಿನಿಧಿಸಿದ ಜನರಿಗಾಗಿ ಹೋರಾಡಿದ್ದೇನೆ. ಬಡ್ತಿ ಮೀಸಲಾತಿ ಜಾರಿಗೊಳಿಸದಿದ್ದರೆ ಡಿಸಿಎಂ ಹುದ್ದೆಯಲ್ಲಿ ಒಂದು ಕ್ಷಣ ಇರುವುದಿಲ್ಲ ಎಂದು ಆಗಿನ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ ಮೇಲೆ ಜಾರಿಯಾಯಿತು. ಶೋಷಿತರ ಪರ ಕೆಲಸ ಮಾಡದೇ ಇದ್ದರೆ, ಸ್ಥಾನದಲ್ಲಿದ್ದೂ ಪ್ರಯೋಜನವಿಲ್ಲ’ ಎಂದರು. </p>.<p>ಮುಖ್ಯಮಂತ್ರಿ ಮಾಡಿ: ‘ಜನಸಂಖ್ಯೆಯಲ್ಲಿ 1ನೇ ಸ್ಥಾನದಲ್ಲಿರುವ ದಲಿತ ಸಮುದಾಯದಿಂದ ಯಾರೊಬ್ಬರೂ ಸಿ.ಎಂ ಆಗಿಲ್ಲ. ರಾಷ್ಟ್ರೀಯ ಪಕ್ಷ ಇಲ್ಲಿಯವರೆಗೆ ಮಾಡಿರುವ ತಪ್ಪನ್ನು ಪರಮೇಶ್ವರ ಅವರಿಗೆ ಸಿ.ಎಂ ಸ್ಥಾನ ನೀಡಿ ಸರಿಪಡಿಸಿಕೊಳ್ಳಬೇಕು’ ಎಂದು ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು. </p>.<p>‘ಒಂದು ಸಮುದಾಯಕ್ಕೆ 9 ಸಲ, ಮತ್ತೊಂದಕ್ಕೆ 7 ಬಾರಿ ಅವಕಾಶ ಸಿಕ್ಕಿದೆ. ಅಧಿಕಾರವು ಸಣ್ಣ ಪುಟ್ಟ ಸಮುದಾಯದವರಿಗೂ ಸಿಕ್ಕಿದೆ. ನೂರಕ್ಕೆ ನೂರರಷ್ಟು ಬೆಂಬಲಿಸಿರುವ ದಲಿತ ಸಮುದಾಯವನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. </p>.<p>‘ಪರಮ ಪಯಣ’ ಕೃತಿ ಬಿಡುಗಡೆ ಮಾಡಿದ ಶಾಸಕ ತನ್ವೀರ್ ಸೇಠ್, ‘ಪರಮೇಶ್ವರ ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರೊಂದಿಗೆ ಹೆಜ್ಜೆ ಹಾಕುತ್ತೇವೆ’ ಎಂದರು. </p>.<p>ಶಾಸಕರಾದ ದರ್ಶನ್ ಧ್ರುವನಾರಾಯಣ, ಕೆ.ಹರೀಶ್ಗೌಡ ಪಾಲ್ಗೊಂಡಿದ್ದರು.</p>.<div><blockquote>ಸಮಾಜವು ಬದಲಾಗದಿದ್ದರೆ ನಾವೇ ಬದಲಾಯಿಸಬೇಕು. ಅಂಬೇಡ್ಕರ್ ಅವರು ನಮಗೆ ಮತದಾನದ ಅಸ್ತ್ರ ಕೊಟ್ಟಿದ್ದಾರೆ. ತೀರ್ಮಾನಿಸಬೇಕು</blockquote><span class="attribution"> ಡಾ.ಜಿ.ಪರಮೇಶ್ವರ ಗೃಹ ಸಚಿವ</span></div>.<p> <strong>‘ಕಾರ್ಯಕ್ರಮಕ್ಕೆ ಅನೇಕ ವಿಘ್ನ’</strong></p><p> ‘ನನ್ನ ವ್ಯಕ್ತಿತ್ವವಲ್ಲದೇ ಅನೇಕ ವಿಚಾರಗಳು ಬೇರೆ ಬೇರೆ ಆಯಾಮಗಳಲ್ಲಿ ರಾಜ್ಯಕ್ಕೆ ತಲುಪಬಹುದೆಂಬ ಕಾರಣಕ್ಕೆ ಅನೇಕ ಜನರಿಗೆ ಈ ಕಾರ್ಯಕ್ರಮ ಆಗುವುದು ಬೇಕಿರಲಿಲ್ಲ. ಅನೇಕ ವಿಘ್ನಗಳು ಎದುರಾಗಿವೆ’ ಎಂದು ಸಚಿವ ಪರಮೇಶ್ವರ ಹೇಳಿದರು. ‘ನೀನೊಬ್ಬನೇ ಕುಳಿತು ಕೋ ನಾನು ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಘಟಕ ಬಿಳಿಕೆರೆ ರಾಜು ಅವರಿಗೆ ಹೇಳಿದ್ದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಹಕ್ಕು ಮತ್ತು ಅಧಿಕಾರ ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಇಲ್ಲಿ ತಮ್ಮ ಬೆಂಬಲಿಗರಿಗೆ ಹೇಳಿದರು.</p>.<p>ನಗರದ ಕಲಾಮಂದಿರದಲ್ಲಿ ‘ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ’ವು ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ಅವರು ಮಾತನಾಡಿದರು.</p>.<p>‘ನೀವು ಮುಖ್ಯಮಂತ್ರಿಯಾಗಬೇಕು’ ಎಂಬ ಅಭಿಮಾನಿಗಳ ಕೂಗಿಗೆ, ‘ಎಲ್ಲರಿಗೂ ಹೃದಯ ವೈಶಾಲ್ಯ ಇರಬೇಕು. ಆದರೆ ಅದು ಆಗುತ್ತಿಲ್ಲ. ಹೋರಾಟಕ್ಕೆ ಸಜ್ಜಾಗದಿದ್ದರೆ ಬಾಬಾಸಾಹೇಬರಿಗೆ ಮಾಡುವ ಅಪಮಾನ’ ಎಂದರು. </p>.<p>‘ಒಂದು ಸಮುದಾಯವು ನಿಮ್ಮ ಜೊತೆಗೆ ಯಾವಾಗಲೂ ನಿಂತಿದೆ. ಅವರಿಗೆ ಮೋಸ ಮಾಡಿದರೆ ಅದು ಬುದ್ದಿ ಕಲಿಸುತ್ತದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಅದು ನಿಜ. ಹೃದಯ ಶ್ರೀಮಂತಿಕೆ ನಿಮಗೆ ಬರಬಾರದೇ’ ಎಂದು ಪ್ರಶ್ನಿಸಿದರು. </p>.<p>‘ದಲಿತ ಸಮುದಾಯವು ಸಮಾನತೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಕಾಯ ಬೇಕು? ದೇಶ 3ನೇ ದೊಡ್ಡ ಆರ್ಥಿಕತೆಯಾಗಿದೆ. ಚಂದ್ರಯಾನ ಮಾಡಿದೆ. ಬಲಿಷ್ಠ ಸೇನೆಯಿದೆ. ಆದರೂ, ಜಾತಿ ಸಂಘಗಳು ರಚನೆಯಾಗುತ್ತಿವೆ. ಶಾಶ್ವತ ಸಮಾನತೆ ಬರುವವರೆಗೂ ಮೀಸಲಾತಿ ಇರಲೇಬೇಕು’ ಎಂದರು.</p>.<p>‘ಪ್ರತಿನಿಧಿಸಿದ ಜನರಿಗಾಗಿ ಹೋರಾಡಿದ್ದೇನೆ. ಬಡ್ತಿ ಮೀಸಲಾತಿ ಜಾರಿಗೊಳಿಸದಿದ್ದರೆ ಡಿಸಿಎಂ ಹುದ್ದೆಯಲ್ಲಿ ಒಂದು ಕ್ಷಣ ಇರುವುದಿಲ್ಲ ಎಂದು ಆಗಿನ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ ಮೇಲೆ ಜಾರಿಯಾಯಿತು. ಶೋಷಿತರ ಪರ ಕೆಲಸ ಮಾಡದೇ ಇದ್ದರೆ, ಸ್ಥಾನದಲ್ಲಿದ್ದೂ ಪ್ರಯೋಜನವಿಲ್ಲ’ ಎಂದರು. </p>.<p>ಮುಖ್ಯಮಂತ್ರಿ ಮಾಡಿ: ‘ಜನಸಂಖ್ಯೆಯಲ್ಲಿ 1ನೇ ಸ್ಥಾನದಲ್ಲಿರುವ ದಲಿತ ಸಮುದಾಯದಿಂದ ಯಾರೊಬ್ಬರೂ ಸಿ.ಎಂ ಆಗಿಲ್ಲ. ರಾಷ್ಟ್ರೀಯ ಪಕ್ಷ ಇಲ್ಲಿಯವರೆಗೆ ಮಾಡಿರುವ ತಪ್ಪನ್ನು ಪರಮೇಶ್ವರ ಅವರಿಗೆ ಸಿ.ಎಂ ಸ್ಥಾನ ನೀಡಿ ಸರಿಪಡಿಸಿಕೊಳ್ಳಬೇಕು’ ಎಂದು ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು. </p>.<p>‘ಒಂದು ಸಮುದಾಯಕ್ಕೆ 9 ಸಲ, ಮತ್ತೊಂದಕ್ಕೆ 7 ಬಾರಿ ಅವಕಾಶ ಸಿಕ್ಕಿದೆ. ಅಧಿಕಾರವು ಸಣ್ಣ ಪುಟ್ಟ ಸಮುದಾಯದವರಿಗೂ ಸಿಕ್ಕಿದೆ. ನೂರಕ್ಕೆ ನೂರರಷ್ಟು ಬೆಂಬಲಿಸಿರುವ ದಲಿತ ಸಮುದಾಯವನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. </p>.<p>‘ಪರಮ ಪಯಣ’ ಕೃತಿ ಬಿಡುಗಡೆ ಮಾಡಿದ ಶಾಸಕ ತನ್ವೀರ್ ಸೇಠ್, ‘ಪರಮೇಶ್ವರ ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರೊಂದಿಗೆ ಹೆಜ್ಜೆ ಹಾಕುತ್ತೇವೆ’ ಎಂದರು. </p>.<p>ಶಾಸಕರಾದ ದರ್ಶನ್ ಧ್ರುವನಾರಾಯಣ, ಕೆ.ಹರೀಶ್ಗೌಡ ಪಾಲ್ಗೊಂಡಿದ್ದರು.</p>.<div><blockquote>ಸಮಾಜವು ಬದಲಾಗದಿದ್ದರೆ ನಾವೇ ಬದಲಾಯಿಸಬೇಕು. ಅಂಬೇಡ್ಕರ್ ಅವರು ನಮಗೆ ಮತದಾನದ ಅಸ್ತ್ರ ಕೊಟ್ಟಿದ್ದಾರೆ. ತೀರ್ಮಾನಿಸಬೇಕು</blockquote><span class="attribution"> ಡಾ.ಜಿ.ಪರಮೇಶ್ವರ ಗೃಹ ಸಚಿವ</span></div>.<p> <strong>‘ಕಾರ್ಯಕ್ರಮಕ್ಕೆ ಅನೇಕ ವಿಘ್ನ’</strong></p><p> ‘ನನ್ನ ವ್ಯಕ್ತಿತ್ವವಲ್ಲದೇ ಅನೇಕ ವಿಚಾರಗಳು ಬೇರೆ ಬೇರೆ ಆಯಾಮಗಳಲ್ಲಿ ರಾಜ್ಯಕ್ಕೆ ತಲುಪಬಹುದೆಂಬ ಕಾರಣಕ್ಕೆ ಅನೇಕ ಜನರಿಗೆ ಈ ಕಾರ್ಯಕ್ರಮ ಆಗುವುದು ಬೇಕಿರಲಿಲ್ಲ. ಅನೇಕ ವಿಘ್ನಗಳು ಎದುರಾಗಿವೆ’ ಎಂದು ಸಚಿವ ಪರಮೇಶ್ವರ ಹೇಳಿದರು. ‘ನೀನೊಬ್ಬನೇ ಕುಳಿತು ಕೋ ನಾನು ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಘಟಕ ಬಿಳಿಕೆರೆ ರಾಜು ಅವರಿಗೆ ಹೇಳಿದ್ದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>