<p><strong>ಮೈಸೂರು</strong>: ‘ಉದ್ದೇಶಿತ ಗ್ರೇಟರ್ ಮೈಸೂರು ನೀಲನಕ್ಷೆಯು ಅಮೀಬಾ ಸೂಕ್ಷ್ಮಜೀವಿಯಂತಿದ್ದು, ಇಡೀ ಯೋಜನೆ ಅವೈಜ್ಞಾನಿಕವಾಗಿದೆ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ದೂರಿದರು.</p>.<p>‘ಯೋಜನೆಯನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.</p>.<p>‘ನಗರದ ಸುತ್ತಲಿನ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ನಗರದ ವ್ಯಾಪ್ತಿಗೆ ವಿಲೀನ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದು ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಒಂದೆಡೆ ನಗರದಿಂದ 2 ಕಿ.ಮೀ.ವರೆಗೆ, ಕೆಲವೆಡೆ ಕಡೆ 22 ಕಿ.ಮೀಟರ್ನಷ್ಟು ವ್ಯಾಪ್ತಿಯನ್ನು ಹೆಚ್ಚಿಸಿರುವುದು ಸರಿಯೇ? ಹೀಗೆ ಮಾಡಲು ಕಾರಣವೇನು? ಅಧಿಕಾರಿಗಳು ಒತ್ತಡದಿಂದ ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮೈಸೂರು ನಗರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಯೋಜನೆ ರೂಪಿಸಬೇಕು. ನಗರದ 365 ಡಿಗ್ರಿ ಸುತ್ತಳತೆಯಲ್ಲೂ ಇದು ಜಾರಿಯಾಗಬೇಕು. ಅದಕ್ಕೂ ಮುನ್ನ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.</p>.<p><strong>ನ್ಯೂನತೆ ಸರಿಪಡಿಸಿ</strong></p>.<p>‘ಗ್ರೇಟರ್ ಮೈಸೂರು ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗ ಸಿದ್ಧಪಡಿಸಿರುವ ಯೋಜನೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಕೇವಲ ರಿಯಲ್ ಎಸ್ಟೇಟ್ಗೆ ಒತ್ತು ಕೊಟ್ಟರೆ ಸಾಲದು. ಅಭಿವೃದ್ಧಿಗೂ ಆದ್ಯತೆ ಕೊಡಬೇಕು’ ಎಂದರು.</p>.<p>‘ಗ್ರೇಟರ್ ಮೈಸೂರು ರಚನೆಗೆ ಎರಡು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಪಾಲಿಕೆ ಚುನಾವಣೆ ನಡೆಯಬಾರದು ಎಂಬ ಉದ್ದೇಶವಿದೆಯೇ? ಚುನಾವಣೆಗೆ ಭಯವೇಕೆ? ಗ್ರೇಟರ್ ಮೈಸೂರು ಮಾಡಲು ಸಾವಿರಾರು ಕೋಟಿ ರೂಪಾಯಿ ಬೇಕು. ಆ ಹಣವನ್ನು ಮೊದಲು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘2022-23ನೇ ಸಾಲಿನ ಸಿಎಂ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 57 ಹಳ್ಳಿಗಳ ರಸ್ತೆ ಕಾಮಗಾರಿಗಾಗಿ ₹ 10 ಕೋಟಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಭೂಮಿಪೂಜೆಯನ್ನೂ ನಡೆಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೆಲ ಕಾಮಗಾರಿಗಳನ್ನು ರದ್ದುಪಡಿಸಿ ಮತ್ತೊಮ್ಮೆ ಭೂಮಿಪೂಜೆಯನ್ನು ಮುಖ್ಯಮಂತ್ರಿ ಮತ್ತು ಶಾಸಕರು ಸ್ಥಳೀಯವಾಗಿ ಮಾಡಿದ್ದಾರೆ’ ಎಂದು ಆರೋಪಿಸಿದರು. </p>.<div><blockquote>ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ ₹ 90 ಹೆಚ್ಚಿಸಲಾಗಿದೆ. ಹಾಗೆಯೇ ರೈತರಿಂದ ಖರೀದಿಸುವ ಹಾಲಿನ ದರವನ್ನೂ ಹೆಚ್ಚಿಸಬೇಕಲ್ಲವೇ?</blockquote><span class="attribution">– ಸಾ.ರಾ. ಮಹೇಶ್, ಮಾಜಿ ಸಚಿವ</span></div>.<p><strong>‘ಪರಂಪರೆ ಧಕ್ಕೆಯಾಗದಂತಿರಲಿ’</strong></p><p>‘ವಾಹನ ದಟ್ಟಣೆ ಕಡಿಮೆ ಮಾಡಲು ನಗರದ ಕೆಲವೆಡೆ ಫ್ಲೈಓವರ್ ನಿರ್ಮಾಣ ಅಗತ್ಯವಿದೆ. ಆದರೆ ಯಾವ ಆಯಾಮ ಮತ್ತು ದೃಷ್ಟಿಕೋನ ಇಟ್ಟುಕೊಂಡು ಸಂಸದ ಯದುವೀರ್ ಅವರು ಮೇಲ್ಸೇತುವೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆಯೋ ಗೊತ್ತಿಲ್ಲ. ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ಈ ಯೋಜನೆ ಜಾರಿಗೊಳಿಸಿದರೆ ಯಾವುದೇ ಅಭ್ಯಂತರ ಇಲ್ಲ’ ಎಂದು ಮಹೇಶ್ ಪ್ರತಿಕ್ರಿಯಿಸಿದರು.</p>.<p><strong>ಉಳಿಯುವುದು ಈ ದಾಖಲೆಯಷ್ಟೆ...</strong></p><p>‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2013ರಿಂದ 2018ರವರೆಗೆ ಉತ್ತಮ ಆಡಳಿತ ನೀಡಿದ್ದಾರೆ. ಈಗ ರಾಜಿ ಮಾಡಿಕೊಂಡಿದ್ದಾರೆ. ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಅತಿ ಹೆಚ್ಚು ಸಾಲ ಮಾಡಿದ ವಿಶೇಷ ವಿಮಾನವನ್ನು ಹೆಚ್ಚು ಬಳಸಿದ ಮುಖ್ಯಮಂತ್ರಿ ಎಂಬುದಷ್ಟೇ ದಾಖಲೆಯಲ್ಲಿ ಉಳಿಯಲಿದೆ’ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಉದ್ದೇಶಿತ ಗ್ರೇಟರ್ ಮೈಸೂರು ನೀಲನಕ್ಷೆಯು ಅಮೀಬಾ ಸೂಕ್ಷ್ಮಜೀವಿಯಂತಿದ್ದು, ಇಡೀ ಯೋಜನೆ ಅವೈಜ್ಞಾನಿಕವಾಗಿದೆ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ದೂರಿದರು.</p>.<p>‘ಯೋಜನೆಯನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.</p>.<p>‘ನಗರದ ಸುತ್ತಲಿನ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ನಗರದ ವ್ಯಾಪ್ತಿಗೆ ವಿಲೀನ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದು ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಒಂದೆಡೆ ನಗರದಿಂದ 2 ಕಿ.ಮೀ.ವರೆಗೆ, ಕೆಲವೆಡೆ ಕಡೆ 22 ಕಿ.ಮೀಟರ್ನಷ್ಟು ವ್ಯಾಪ್ತಿಯನ್ನು ಹೆಚ್ಚಿಸಿರುವುದು ಸರಿಯೇ? ಹೀಗೆ ಮಾಡಲು ಕಾರಣವೇನು? ಅಧಿಕಾರಿಗಳು ಒತ್ತಡದಿಂದ ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮೈಸೂರು ನಗರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಯೋಜನೆ ರೂಪಿಸಬೇಕು. ನಗರದ 365 ಡಿಗ್ರಿ ಸುತ್ತಳತೆಯಲ್ಲೂ ಇದು ಜಾರಿಯಾಗಬೇಕು. ಅದಕ್ಕೂ ಮುನ್ನ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.</p>.<p><strong>ನ್ಯೂನತೆ ಸರಿಪಡಿಸಿ</strong></p>.<p>‘ಗ್ರೇಟರ್ ಮೈಸೂರು ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗ ಸಿದ್ಧಪಡಿಸಿರುವ ಯೋಜನೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಕೇವಲ ರಿಯಲ್ ಎಸ್ಟೇಟ್ಗೆ ಒತ್ತು ಕೊಟ್ಟರೆ ಸಾಲದು. ಅಭಿವೃದ್ಧಿಗೂ ಆದ್ಯತೆ ಕೊಡಬೇಕು’ ಎಂದರು.</p>.<p>‘ಗ್ರೇಟರ್ ಮೈಸೂರು ರಚನೆಗೆ ಎರಡು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಪಾಲಿಕೆ ಚುನಾವಣೆ ನಡೆಯಬಾರದು ಎಂಬ ಉದ್ದೇಶವಿದೆಯೇ? ಚುನಾವಣೆಗೆ ಭಯವೇಕೆ? ಗ್ರೇಟರ್ ಮೈಸೂರು ಮಾಡಲು ಸಾವಿರಾರು ಕೋಟಿ ರೂಪಾಯಿ ಬೇಕು. ಆ ಹಣವನ್ನು ಮೊದಲು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘2022-23ನೇ ಸಾಲಿನ ಸಿಎಂ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 57 ಹಳ್ಳಿಗಳ ರಸ್ತೆ ಕಾಮಗಾರಿಗಾಗಿ ₹ 10 ಕೋಟಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಭೂಮಿಪೂಜೆಯನ್ನೂ ನಡೆಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೆಲ ಕಾಮಗಾರಿಗಳನ್ನು ರದ್ದುಪಡಿಸಿ ಮತ್ತೊಮ್ಮೆ ಭೂಮಿಪೂಜೆಯನ್ನು ಮುಖ್ಯಮಂತ್ರಿ ಮತ್ತು ಶಾಸಕರು ಸ್ಥಳೀಯವಾಗಿ ಮಾಡಿದ್ದಾರೆ’ ಎಂದು ಆರೋಪಿಸಿದರು. </p>.<div><blockquote>ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ ₹ 90 ಹೆಚ್ಚಿಸಲಾಗಿದೆ. ಹಾಗೆಯೇ ರೈತರಿಂದ ಖರೀದಿಸುವ ಹಾಲಿನ ದರವನ್ನೂ ಹೆಚ್ಚಿಸಬೇಕಲ್ಲವೇ?</blockquote><span class="attribution">– ಸಾ.ರಾ. ಮಹೇಶ್, ಮಾಜಿ ಸಚಿವ</span></div>.<p><strong>‘ಪರಂಪರೆ ಧಕ್ಕೆಯಾಗದಂತಿರಲಿ’</strong></p><p>‘ವಾಹನ ದಟ್ಟಣೆ ಕಡಿಮೆ ಮಾಡಲು ನಗರದ ಕೆಲವೆಡೆ ಫ್ಲೈಓವರ್ ನಿರ್ಮಾಣ ಅಗತ್ಯವಿದೆ. ಆದರೆ ಯಾವ ಆಯಾಮ ಮತ್ತು ದೃಷ್ಟಿಕೋನ ಇಟ್ಟುಕೊಂಡು ಸಂಸದ ಯದುವೀರ್ ಅವರು ಮೇಲ್ಸೇತುವೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆಯೋ ಗೊತ್ತಿಲ್ಲ. ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ಈ ಯೋಜನೆ ಜಾರಿಗೊಳಿಸಿದರೆ ಯಾವುದೇ ಅಭ್ಯಂತರ ಇಲ್ಲ’ ಎಂದು ಮಹೇಶ್ ಪ್ರತಿಕ್ರಿಯಿಸಿದರು.</p>.<p><strong>ಉಳಿಯುವುದು ಈ ದಾಖಲೆಯಷ್ಟೆ...</strong></p><p>‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2013ರಿಂದ 2018ರವರೆಗೆ ಉತ್ತಮ ಆಡಳಿತ ನೀಡಿದ್ದಾರೆ. ಈಗ ರಾಜಿ ಮಾಡಿಕೊಂಡಿದ್ದಾರೆ. ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಅತಿ ಹೆಚ್ಚು ಸಾಲ ಮಾಡಿದ ವಿಶೇಷ ವಿಮಾನವನ್ನು ಹೆಚ್ಚು ಬಳಸಿದ ಮುಖ್ಯಮಂತ್ರಿ ಎಂಬುದಷ್ಟೇ ದಾಖಲೆಯಲ್ಲಿ ಉಳಿಯಲಿದೆ’ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>