<p><strong>ಮೈಸೂರು</strong>: ‘ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ಬಹಳ ದೊಡ್ಡದು’ ಎಂದು ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.</p><p>ಇಲ್ಲಿನ ನ್ಯೂ ಸಯ್ಯಾಜಿರಾವ್ ರಸ್ತೆಯ ಶಾಂತಿನಾಥ ಬಸದಿಯಲ್ಲಿ ನಡೆದ ಭಗವಾನ್ 1008ನೇ ಶಾಂತಿನಾಥ ತೀರ್ಥಂಕರರ ಮಾನಸ್ತಂಭೋಪದಿ ಜಿನ ಬಿಂಬಗಳ ಪಂಚಕಲ್ಯಾಣ, ಮಂಡಲಪೂಜಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p><p>‘ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನೀತಿ, ಸದಾಚಾರ ಮತ್ತು ಸಾರ್ವತ್ರಿಕ ಸತ್ಯಗಳನ್ನು ಒಳಗೊಳ್ಳಬೇಕು. ಯಾರಿಗೂ ಕೇಡು ಬಯಸದೆ, ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿದಾಗ ಮಾತ್ರ ನಿಜವಾದ ಮನುಷ್ಯ ಧರ್ಮ ಮೂಡಲಿದೆ’ ಎಂದರು.</p>.<p><strong>ಅಹಿಂಸಾ ಮಾರ್ಗ ದಾರಿದೀಪ</strong></p><p>‘ಜೈನ ಧರ್ಮ ಜಗತ್ತಿನಲ್ಲಿ ಯಾರಿಗೂ ಕೇಡು ಬಯಸದ ಶ್ರೇಷ್ಠ ಧರ್ಮ. ಅಹಿಂಸೆಯೇ ಈ ಧರ್ಮದ ಮೂಲ ತತ್ವ. ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆನ್ನುವ ಸಮುದಾಯದ ಮೌಲ್ಯವು ಸಮಾಜಕ್ಕೆ ದಾರಿದೀಪ. ಸಮುದಾಯವು ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದನ್ನು ಕಲಿಸಿದೆ, ಶಾಂತಿ ಬೋಧನೆ ಮಾಡಿದೆ’ ಎಂದರು.</p><p>‘ಪೂರ್ವಜರು ಹಾಕಿಕೊಟ್ಟ ಧಾರ್ಮಿಕ ಪರಂಪರೆ, ಆಚರಣೆ ಮುಂದುವರೆಸಿ, ಉಳಿಸಿಕೊಂಡು ಧರ್ಮ ಯಾವುದಾದರೂ ಇದ್ದರೆ ಅದು ಜೈನ ಧರ್ಮ ಮಾತ್ರ. ಈ ಧರ್ಮದ ಆಚರಣೆ ಕಠಿಣ. ತಮ್ಮನ್ನು ತಾವು ದಂಡಿಸಿಕೊಂಡು, ಯೋಗಿಗಳಾಗಿ ಸಕಲ ಜೀವರಾಶಿಗಳ ಒಳಿತಿಗೆ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ಏಕತೆ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.</p><p>‘ಈ ನಾಡಿನ ಒಕ್ಕಲಿಗರು ಹಾಗೂ ಜೈನ ಸಮುದಾಯದ ನಡುವೆ ಬಾಂಧವ್ಯ ಹೆಚ್ಚಿದೆ’ ಎಂದರು.</p><p>ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಸಮಾಜವನ್ನು ಸಂಯಮ, ಅನುಶಾಸನದಲ್ಲಿ ತೆಗೆದುಕೊಂಡು ಹೋಗಬೇಕಿದೆ. ಇವೆರಡೂ ಇದ್ದಲ್ಲಿ ಮಾತ್ರ ಆ ಸಮಾಜಕ್ಕೆ ಗೌರವ ಸ್ಥಾನಮಾನಗಳು ಲಭಿಸುತ್ತದೆ’ ಎಂದು ತಿಳಿಸಿದರು.</p><p>‘ನಂಜಾವಧೂತ ಸ್ವಾಮೀಜಿ ಅವರದ್ದು ಜಾಗೃತಿ ಮೂಡಿಸುವ ವ್ಯಕ್ತಿತ್ವ. ರಾಷ್ಟ್ರಕ್ಕೆ ಇಂತಹ ಸ್ವಾಮೀಜಿಗಳು ಅಗತ್ಯವಿದೆ. ಅಪಾರ ಶಿಷ್ಯ ವರ್ಗ ಹೊಂದಿದ್ದಾರೆ. ತಮ್ಮದೇ ಪರಂಪರೆ ಶಕ್ತಿ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಸುವಲ್ಲಿ ತೊಡಗಿದ್ದಾರೆ. ಇದು ಎಲ್ಲರಿಗೂ ಆದರ್ಶ, ಅನುಕರಣೀಯವಾಗಿದೆ’ ಎಂದರು.</p><p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಶಾಂತಿನಾಥ ಸೇವಾ ಸಮಿತಿ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಜೆ.ಎನ್.ನಂದಿನಿ ಸಂಜಯ್, ಸುರೇಶ್ಕುಮಾರ್ ಜೈನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ಬಹಳ ದೊಡ್ಡದು’ ಎಂದು ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.</p><p>ಇಲ್ಲಿನ ನ್ಯೂ ಸಯ್ಯಾಜಿರಾವ್ ರಸ್ತೆಯ ಶಾಂತಿನಾಥ ಬಸದಿಯಲ್ಲಿ ನಡೆದ ಭಗವಾನ್ 1008ನೇ ಶಾಂತಿನಾಥ ತೀರ್ಥಂಕರರ ಮಾನಸ್ತಂಭೋಪದಿ ಜಿನ ಬಿಂಬಗಳ ಪಂಚಕಲ್ಯಾಣ, ಮಂಡಲಪೂಜಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p><p>‘ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನೀತಿ, ಸದಾಚಾರ ಮತ್ತು ಸಾರ್ವತ್ರಿಕ ಸತ್ಯಗಳನ್ನು ಒಳಗೊಳ್ಳಬೇಕು. ಯಾರಿಗೂ ಕೇಡು ಬಯಸದೆ, ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿದಾಗ ಮಾತ್ರ ನಿಜವಾದ ಮನುಷ್ಯ ಧರ್ಮ ಮೂಡಲಿದೆ’ ಎಂದರು.</p>.<p><strong>ಅಹಿಂಸಾ ಮಾರ್ಗ ದಾರಿದೀಪ</strong></p><p>‘ಜೈನ ಧರ್ಮ ಜಗತ್ತಿನಲ್ಲಿ ಯಾರಿಗೂ ಕೇಡು ಬಯಸದ ಶ್ರೇಷ್ಠ ಧರ್ಮ. ಅಹಿಂಸೆಯೇ ಈ ಧರ್ಮದ ಮೂಲ ತತ್ವ. ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆನ್ನುವ ಸಮುದಾಯದ ಮೌಲ್ಯವು ಸಮಾಜಕ್ಕೆ ದಾರಿದೀಪ. ಸಮುದಾಯವು ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದನ್ನು ಕಲಿಸಿದೆ, ಶಾಂತಿ ಬೋಧನೆ ಮಾಡಿದೆ’ ಎಂದರು.</p><p>‘ಪೂರ್ವಜರು ಹಾಕಿಕೊಟ್ಟ ಧಾರ್ಮಿಕ ಪರಂಪರೆ, ಆಚರಣೆ ಮುಂದುವರೆಸಿ, ಉಳಿಸಿಕೊಂಡು ಧರ್ಮ ಯಾವುದಾದರೂ ಇದ್ದರೆ ಅದು ಜೈನ ಧರ್ಮ ಮಾತ್ರ. ಈ ಧರ್ಮದ ಆಚರಣೆ ಕಠಿಣ. ತಮ್ಮನ್ನು ತಾವು ದಂಡಿಸಿಕೊಂಡು, ಯೋಗಿಗಳಾಗಿ ಸಕಲ ಜೀವರಾಶಿಗಳ ಒಳಿತಿಗೆ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ಏಕತೆ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.</p><p>‘ಈ ನಾಡಿನ ಒಕ್ಕಲಿಗರು ಹಾಗೂ ಜೈನ ಸಮುದಾಯದ ನಡುವೆ ಬಾಂಧವ್ಯ ಹೆಚ್ಚಿದೆ’ ಎಂದರು.</p><p>ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಸಮಾಜವನ್ನು ಸಂಯಮ, ಅನುಶಾಸನದಲ್ಲಿ ತೆಗೆದುಕೊಂಡು ಹೋಗಬೇಕಿದೆ. ಇವೆರಡೂ ಇದ್ದಲ್ಲಿ ಮಾತ್ರ ಆ ಸಮಾಜಕ್ಕೆ ಗೌರವ ಸ್ಥಾನಮಾನಗಳು ಲಭಿಸುತ್ತದೆ’ ಎಂದು ತಿಳಿಸಿದರು.</p><p>‘ನಂಜಾವಧೂತ ಸ್ವಾಮೀಜಿ ಅವರದ್ದು ಜಾಗೃತಿ ಮೂಡಿಸುವ ವ್ಯಕ್ತಿತ್ವ. ರಾಷ್ಟ್ರಕ್ಕೆ ಇಂತಹ ಸ್ವಾಮೀಜಿಗಳು ಅಗತ್ಯವಿದೆ. ಅಪಾರ ಶಿಷ್ಯ ವರ್ಗ ಹೊಂದಿದ್ದಾರೆ. ತಮ್ಮದೇ ಪರಂಪರೆ ಶಕ್ತಿ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಸುವಲ್ಲಿ ತೊಡಗಿದ್ದಾರೆ. ಇದು ಎಲ್ಲರಿಗೂ ಆದರ್ಶ, ಅನುಕರಣೀಯವಾಗಿದೆ’ ಎಂದರು.</p><p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಶಾಂತಿನಾಥ ಸೇವಾ ಸಮಿತಿ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಜೆ.ಎನ್.ನಂದಿನಿ ಸಂಜಯ್, ಸುರೇಶ್ಕುಮಾರ್ ಜೈನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>