ಮಾರ್ಚ್ 4ರಂದು ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಹುಲಿವಾಹನ ಮೂರ್ತಿಗೆ ಅಭಿಷೇಕ ನೆರವೇರಿಸಿ ಬರಡನಪುರ ಗ್ರಾಮದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ಮೆರವಣಿಗೆಯಲ್ಲಿ ಭಕ್ತರು ಹುಲಿವಾಹನ ಮೂರ್ತಿಯನ್ನು ಹೊತ್ತು ತರುತ್ತಾರೆ. ದಾರಿಯುದ್ದಕ್ಕೂ ಭಕ್ತರು ಸಾವಿರಾರು ಈಡುಗಾಯಿಗಳನ್ನು ಒಡೆಯುತ್ತಾರೆ. ಭಾರಿ ಗಾತ್ರದ ಹೂವಿನ ಹಾರಗಳನ್ನು ಉತ್ಸವ ಮೂರ್ತಿಗೆ ಸಮರ್ಪಿಸುತ್ತಾರೆ. ಮೆರವಣಿಗೆಯ ಸಾಗುವ ದಾರಿಯುದ್ದಕ್ಕೂ ಭಕ್ತರು ಚೆಂಡುಹೂವಿನ ಹಾಸು ಹಾಕುತ್ತಾರೆ, ಕರ್ಪೂರ ಹಚ್ಚುತ್ತಾರೆ. ಸೋಮವಾರ ಬೆಳಿಗ್ಗೆ 7.15ರ ಸಮಯಕ್ಕೆ ಹುಲಿವಾಹನ ಮೂರ್ತಿ ಮೆರವಣಿಗೆಯು ಜೇಡಿಕಟ್ಟೆ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಸೇರುತ್ತದೆ. ಭಕ್ತರಿಗೆ ಮಹಾಪ್ರಸಾದ ವಿನಿಯೋಗವಾಗುತ್ತದೆ.