<p><strong>ಮೈಸೂರು:</strong> ‘ಜೀವನ ಗಣಿತ ಸರಿಯಾದರೆ ಭವಿಷ್ಯ ಸುಂದರ ಸಮೀಕರಣವಾಗುತ್ತದೆ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.</p>.<p>ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಸಿ.ಎನ್ ಮೃತ್ಯುಂಜಯಪ್ಪ ಅವರ ದತ್ತಿ ಅಂಗವಾಗಿ ಸರಗೂರಿನ ಜೆ.ಎಸ್.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಾಲೆಗಳೆಡೆಗೆ ವಚನಗಳ ನಡಿಗೆ’ 125ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಮಾನವನ ಜೀವನವೂ ಗಣಿತದ ಮೂಲಕ್ರಿಯೆಗಳಂತೆ ಸರಳವೂ, ಗಂಭೀರವೂ ಆಗಿದೆ. ಮಿತ್ರರನ್ನು ಸಂಕಲನ ಮಾಡಿ ಒಳ್ಳೆಯವರನ್ನು ಬದುಕಿಗೆ ಸೇರಿಸಿಕೊಳ್ಳಬೇಕು. ಶತ್ರುಗಳನ್ನು ವ್ಯವಕಲನ ಮಾಡಿ ದ್ವೇಷ, ಅಸೂಯೆ ಮತ್ತು ವೈಮನಸ್ಸನ್ನು ಜೀವನದಿಂದ ತೆಗೆದು ಹಾಕಬೇಕು. ಸದ್ಗುಣಗಳನ್ನು ಗುಣಾಕಾರ ಮಾಡಿ ದಯೆ, ಪ್ರಾಮಾಣಿಕತೆ, ಶ್ರಮ ಮತ್ತು ಸಹಾನುಭೂತಿಯನ್ನು ನಿರಂತರವಾಗಿ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>ವ್ಯಕ್ತಿತ್ವ ರೂಪಾಂತರ:</strong> </p>.<p>‘ವಚನ ಸಾಹಿತ್ಯವು ಮಾನವನೊಳಗಿನ ಅಜ್ಞಾನ, ಅಂಧಕಾರ ಕಳೆಯುವ ಬೆಳಕಿನ ದೀಪವಾಗಿದೆ. ಅದನ್ನು ಅಧ್ಯಯನ ಮಾಡಿದರೆ ಮನುಷ್ಯನ ಸಂಪೂರ್ಣ ವ್ಯಕ್ತಿತ್ವವೇ ರೂಪಾಂತರಗೊಳ್ಳುತ್ತದೆ’ ಎಂದು ತಿಳಿಸಿದರು.</p>.<p>ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ ಉದ್ಘಾಟಿಸಿ ಮಾತನಾಡಿ, ‘ಎಲ್ಲರೂ ಕಳಬೇಡ ಎಂಬ ತತ್ವವನ್ನು ಅಳವಡಿಸಿಕೊಂಡರೆ ಪರರ ಸಂಪತ್ತಿನ ಮೇಲೆ ಕಣ್ಣಿಡುವ ಮನೋಭಾವ ದೂರವಾಗುತ್ತದೆ’ ಎಂದರು.</p>.<p>ಶರಣರ ವೇಷ ಧರಿಸಿ ವಚನ ವಾಚನ ಮತ್ತು ಗಾಯನ ಮಾಡಿದ 50 ವಿದ್ಯಾರ್ಥಿಗಳಿಗೆ ವಚನಗ್ರಾಮ ಪುಸ್ತಕ ಮತ್ತು ವಚನ ದೀವಿಗೆ ಪ್ರಮಾಣಪತ್ರ ನೀಡಲಾಯಿತು. ಉತ್ತಮ ವಾಚನ ಮಾಡಿದವರಿಗೆ ನಗದು ಬಹುಮಾನ ವಿತರಿಸಲಾಯಿತು.</p>.<p>ಶಿಕ್ಷಕಿ ನಂದಿನಿ ಶಿರೂರು ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವರಚಿತ ಆಧುನಿಕ ವಚನ ವಾಚಿಸಿದರು. </p>.<p>ಜೆ.ಎಸ್.ಎಸ್. ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ಎನ್. ಜಯಣ್ಣ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಜೀವನ ಗಣಿತ ಸರಿಯಾದರೆ ಭವಿಷ್ಯ ಸುಂದರ ಸಮೀಕರಣವಾಗುತ್ತದೆ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.</p>.<p>ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಸಿ.ಎನ್ ಮೃತ್ಯುಂಜಯಪ್ಪ ಅವರ ದತ್ತಿ ಅಂಗವಾಗಿ ಸರಗೂರಿನ ಜೆ.ಎಸ್.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಾಲೆಗಳೆಡೆಗೆ ವಚನಗಳ ನಡಿಗೆ’ 125ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಮಾನವನ ಜೀವನವೂ ಗಣಿತದ ಮೂಲಕ್ರಿಯೆಗಳಂತೆ ಸರಳವೂ, ಗಂಭೀರವೂ ಆಗಿದೆ. ಮಿತ್ರರನ್ನು ಸಂಕಲನ ಮಾಡಿ ಒಳ್ಳೆಯವರನ್ನು ಬದುಕಿಗೆ ಸೇರಿಸಿಕೊಳ್ಳಬೇಕು. ಶತ್ರುಗಳನ್ನು ವ್ಯವಕಲನ ಮಾಡಿ ದ್ವೇಷ, ಅಸೂಯೆ ಮತ್ತು ವೈಮನಸ್ಸನ್ನು ಜೀವನದಿಂದ ತೆಗೆದು ಹಾಕಬೇಕು. ಸದ್ಗುಣಗಳನ್ನು ಗುಣಾಕಾರ ಮಾಡಿ ದಯೆ, ಪ್ರಾಮಾಣಿಕತೆ, ಶ್ರಮ ಮತ್ತು ಸಹಾನುಭೂತಿಯನ್ನು ನಿರಂತರವಾಗಿ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>ವ್ಯಕ್ತಿತ್ವ ರೂಪಾಂತರ:</strong> </p>.<p>‘ವಚನ ಸಾಹಿತ್ಯವು ಮಾನವನೊಳಗಿನ ಅಜ್ಞಾನ, ಅಂಧಕಾರ ಕಳೆಯುವ ಬೆಳಕಿನ ದೀಪವಾಗಿದೆ. ಅದನ್ನು ಅಧ್ಯಯನ ಮಾಡಿದರೆ ಮನುಷ್ಯನ ಸಂಪೂರ್ಣ ವ್ಯಕ್ತಿತ್ವವೇ ರೂಪಾಂತರಗೊಳ್ಳುತ್ತದೆ’ ಎಂದು ತಿಳಿಸಿದರು.</p>.<p>ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ ಉದ್ಘಾಟಿಸಿ ಮಾತನಾಡಿ, ‘ಎಲ್ಲರೂ ಕಳಬೇಡ ಎಂಬ ತತ್ವವನ್ನು ಅಳವಡಿಸಿಕೊಂಡರೆ ಪರರ ಸಂಪತ್ತಿನ ಮೇಲೆ ಕಣ್ಣಿಡುವ ಮನೋಭಾವ ದೂರವಾಗುತ್ತದೆ’ ಎಂದರು.</p>.<p>ಶರಣರ ವೇಷ ಧರಿಸಿ ವಚನ ವಾಚನ ಮತ್ತು ಗಾಯನ ಮಾಡಿದ 50 ವಿದ್ಯಾರ್ಥಿಗಳಿಗೆ ವಚನಗ್ರಾಮ ಪುಸ್ತಕ ಮತ್ತು ವಚನ ದೀವಿಗೆ ಪ್ರಮಾಣಪತ್ರ ನೀಡಲಾಯಿತು. ಉತ್ತಮ ವಾಚನ ಮಾಡಿದವರಿಗೆ ನಗದು ಬಹುಮಾನ ವಿತರಿಸಲಾಯಿತು.</p>.<p>ಶಿಕ್ಷಕಿ ನಂದಿನಿ ಶಿರೂರು ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವರಚಿತ ಆಧುನಿಕ ವಚನ ವಾಚಿಸಿದರು. </p>.<p>ಜೆ.ಎಸ್.ಎಸ್. ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ಎನ್. ಜಯಣ್ಣ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>