ರಂಗನಾಥ ಬಡಾವಣೆಯಿಂದ ಪಂಚಲೋಹದ ಭುವನೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ವಿವಿಧ ಶಾಲೆಗಳಿಂದ ಮತ್ತು ಸರ್ಕಾರಿ ಇಲಾಖೆಗಳ ಸ್ತಬ್ಥ ಚಿತ್ರ ಗಮನ ಸೆಳೆಯಿತು. ಜಾನಪದ ಸೊಗಡಿನ ಗಾವಡಗೆರೆ ಗ್ರಾಮದ ಗೋವಿಂದನಾಯಕ ನೇತೃತ್ವದ ಡೊಳ್ಳು ಕುಣಿತ, ಕಟ್ಟೆಮಳಲವಾಡಿ ಅಂಬೇಡ್ಕರ್ ಕೋಲಾಟ ತಂಡದ ಕೋಲಾಟ, ಮೋದೂರು ಗ್ರಾಮದ ವೀರಗಾಸೆ, ಪೌರಕಾರ್ಮಿಕರ ಕಾಲೋನಿಯ ಬ್ಯಾಂಡ್ ಮತ್ತು ಕೇರಳದ ಚೆಂಡೆ ನೆರೆದವರನ್ನು ಆಕರ್ಷಿಸಿತು.