<p><strong>ಮೈಸೂರು: ‘</strong>ಕಿಶೋರಾವಸ್ಥೆಯಲ್ಲಿ ಮಾದಕ ವಸ್ತುಗಳ ಸೇವನೆಗೆ ಮುಂದಾಗುವವರು, ಜೀವನಪೂರ್ತಿ ಅದಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು’ ಎಂದು ಕರ್ನಾಟಕ ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿ ಅಧ್ಯಕ್ಷ ಡಾ.ಕಿಶೋರ್ ಬೈಂದೂರ್ ಹೇಳಿದರು.</p>.<p>ಮೈಸೂರು ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿಯು ಖಾಸಗಿ ಹೋಟೆಲ್ನಲ್ಲಿ ಭಾನುವಾರ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಸಮ್ಮೇಳನದಲ್ಲಿ ‘ಮಾದಕ ವಸ್ತುಗಳ ಸೇವನೆಯಿಂದ ಹದಿಹರೆಯದವರಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮ ಮತ್ತು ಪರಿಹಾರ’ ಕುರಿತು ಮಾತನಾಡಿದರು.</p>.<p>‘ಮದ್ಯಪಾನ, ತಂಬಾಕು, ಗಾಂಜಾ ಮೊದಲಾದ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ 16 ವರ್ಷದೊಳಗಿನವರೇ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಅಂಥ ಮಕ್ಕಳ ವರ್ತನೆಯನ್ನು ಅರ್ಥೈಸಿಕೊಂಡು ಉಪಚರಿಸಬೇಕಾದ ಜವಾಬ್ದಾರಿ ಪೋಷಕರು ಮತ್ತು ವೈದ್ಯರ ಮೇಲಿದೆ’ ಎಂದರು.</p>.<p>‘ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. 20 ವರ್ಷದವರೆಗೆ ನಮ್ಮ ಮಿದುಳು ಪರಿಪೂರ್ಣ ಬೆಳವಣಿಗೆ ಹೊಂದಿರುವುದಿಲ್ಲ. ಈ ಹಂತದಲ್ಲಿ ವ್ಯಸನದಿಂದ ದೂರ ಇರಿಸುವುದೇ ಸವಾಲು’ ಎಂದರು.</p>.<p>ಕೇಂದ್ರೀಯ ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿ ಅಧ್ಯಕ್ಷೆ ಡಾ.ಗೀತಾ ಪಾಟೀಲ್ ಮಾತನಾಡಿ, ‘ಮಕ್ಕಳು ಹಾಗೂ ಯುವಜನರು ಪೌಷ್ಟಿಕಾಂಶಯುಕ್ತ ಆಹಾರದ ಆಯ್ಕೆ, ಸೇವನೆಯಲ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಪೋಷಕರು ಹಾಗೂ ವೈದ್ಯರು ಈ ಬಗ್ಗೆಯೂ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.</p>.<p>ಹದಿಹರೆಯದ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ವಿಷಯ ಮಂಡಿಸಿದರು. 50 ಮಕ್ಕಳ ವೈದ್ಯರು ಪಾಲ್ಗೊಂಡಿದ್ದರು.</p>.<p>ಅಕಾಡೆಮಿ ಕಾರ್ಯದರ್ಶಿ ಡಾ.ಆರ್.ಪ್ರೇಮ, ಮೈಸೂರು ಘಟಕದ ಅಧ್ಯಕ್ಷ ಡಾ.ಯು.ಜಿ. ಶೆಣೈ, ಐ.ಎ.ಪಿ. ಅಧ್ಯಕ್ಷ ಡಾ.ಎಂ.ಆರ್.ಪ್ರಶಾಂತ್, ಡಾ.ರೂಪಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಕಿಶೋರಾವಸ್ಥೆಯಲ್ಲಿ ಮಾದಕ ವಸ್ತುಗಳ ಸೇವನೆಗೆ ಮುಂದಾಗುವವರು, ಜೀವನಪೂರ್ತಿ ಅದಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು’ ಎಂದು ಕರ್ನಾಟಕ ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿ ಅಧ್ಯಕ್ಷ ಡಾ.ಕಿಶೋರ್ ಬೈಂದೂರ್ ಹೇಳಿದರು.</p>.<p>ಮೈಸೂರು ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿಯು ಖಾಸಗಿ ಹೋಟೆಲ್ನಲ್ಲಿ ಭಾನುವಾರ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಸಮ್ಮೇಳನದಲ್ಲಿ ‘ಮಾದಕ ವಸ್ತುಗಳ ಸೇವನೆಯಿಂದ ಹದಿಹರೆಯದವರಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮ ಮತ್ತು ಪರಿಹಾರ’ ಕುರಿತು ಮಾತನಾಡಿದರು.</p>.<p>‘ಮದ್ಯಪಾನ, ತಂಬಾಕು, ಗಾಂಜಾ ಮೊದಲಾದ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ 16 ವರ್ಷದೊಳಗಿನವರೇ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಅಂಥ ಮಕ್ಕಳ ವರ್ತನೆಯನ್ನು ಅರ್ಥೈಸಿಕೊಂಡು ಉಪಚರಿಸಬೇಕಾದ ಜವಾಬ್ದಾರಿ ಪೋಷಕರು ಮತ್ತು ವೈದ್ಯರ ಮೇಲಿದೆ’ ಎಂದರು.</p>.<p>‘ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. 20 ವರ್ಷದವರೆಗೆ ನಮ್ಮ ಮಿದುಳು ಪರಿಪೂರ್ಣ ಬೆಳವಣಿಗೆ ಹೊಂದಿರುವುದಿಲ್ಲ. ಈ ಹಂತದಲ್ಲಿ ವ್ಯಸನದಿಂದ ದೂರ ಇರಿಸುವುದೇ ಸವಾಲು’ ಎಂದರು.</p>.<p>ಕೇಂದ್ರೀಯ ಅಡೋಲ್ಸೆಂಟ್ ಹೆಲ್ತ್ ಅಕಾಡೆಮಿ ಅಧ್ಯಕ್ಷೆ ಡಾ.ಗೀತಾ ಪಾಟೀಲ್ ಮಾತನಾಡಿ, ‘ಮಕ್ಕಳು ಹಾಗೂ ಯುವಜನರು ಪೌಷ್ಟಿಕಾಂಶಯುಕ್ತ ಆಹಾರದ ಆಯ್ಕೆ, ಸೇವನೆಯಲ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಪೋಷಕರು ಹಾಗೂ ವೈದ್ಯರು ಈ ಬಗ್ಗೆಯೂ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.</p>.<p>ಹದಿಹರೆಯದ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ವಿಷಯ ಮಂಡಿಸಿದರು. 50 ಮಕ್ಕಳ ವೈದ್ಯರು ಪಾಲ್ಗೊಂಡಿದ್ದರು.</p>.<p>ಅಕಾಡೆಮಿ ಕಾರ್ಯದರ್ಶಿ ಡಾ.ಆರ್.ಪ್ರೇಮ, ಮೈಸೂರು ಘಟಕದ ಅಧ್ಯಕ್ಷ ಡಾ.ಯು.ಜಿ. ಶೆಣೈ, ಐ.ಎ.ಪಿ. ಅಧ್ಯಕ್ಷ ಡಾ.ಎಂ.ಆರ್.ಪ್ರಶಾಂತ್, ಡಾ.ರೂಪಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>