<p><strong>ಮೈಸೂರು:</strong> ರಾಜ್ಯದಲ್ಲಿರುವ ಕೆಎಸ್ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದೆ. ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಯ ಆವರಣದ ಮಳಿಗೆಯನ್ನು ಸೀರೆಗಳಿಲ್ಲದ ಕಾರಣ ಮುಚ್ಚಲಾಗಿದೆ. ಇದರಿಂದಾಗಿ, ಗ್ರಾಹಕರು ನಿರಾಸೆಯಿಂದ ಹಿಂದಿರುಗಿದರು.</p>.<p>ತಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ನಿಗಮದ ಉತ್ಪಾದನಾ ಘಟಕದ 1,052 ಸಿಬ್ಬಂದಿ ಬುಧವಾರದಿಂದ ಕೆಲಸ ನಿಲ್ಲಿಸಿರುವ ಕಾರಣ, ಸೀರೆ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ದಾಸ್ತಾನು ಅಲಭ್ಯತೆ ಉಂಟಾಗಿದೆ. </p>.<p>‘ಪ್ರತಿಭಟನೆ ನಡೆಸುತ್ತಿರುವ 900 ಮಂದಿ ಹೊರಗುತ್ತಿಗೆ ನೌಕರರೊಂದಿಗೆ ಸಂಸ್ಥೆಯ 150 ಸಿಬ್ಬಂದಿಯೂ ಸೇರಿದ್ದಾರೆ. ಕ್ರೀಡಾಂಗಣ ನಿರ್ಮಾಣವಾದರೆ ತಿ.ನರಸೀಪುರ ಘಟಕವು ಮುಚ್ಚುವ ಜೊತೆಗೆ ಮೈಸೂರು ಹಾಗೂ ಚನ್ನಪಟ್ಟಣದಲ್ಲಿರುವ ಸೀರೆ ನೇಯ್ಗೆಯ ಘಟಕಗಳೂ ಮುಚ್ಚಬಹುದು’ ಎಂದು ನೌಕರರೊಬ್ಬರು ಹೇಳಿದರು.</p>.<p>‘ಘಟಕದಲ್ಲಿನ 5 ಟನ್ಗಳ ಸಾಮರ್ಥ್ಯದ ಬಾಯ್ಲರ್ ಸಮೀಪವೇ ಕ್ರೀಡಾಂಗಣ ನಿರ್ಮಾಣದ ನಕ್ಷೆ ರೂಪಿಸುವುದು ಆತಂಕಕಾರಿ. ಆ ಸ್ಥಳದಲ್ಲಿಯೇ ಘಟಕಕ್ಕೆ ಕಲ್ಲಿದ್ದಲುಗಳನ್ನು ತರುವ ದಾರಿ, ನೀರು ಪೂರೈಕೆ ಮಾರ್ಗವಿದೆ. ಇದರಿಂದ ತೊಂದರೆ ಆಗಲಿದೆ’ ಎಂದು ಹೇಳಿದರು.</p>.<p>‘ಶಿಡ್ಲಘಟ್ಟ, ರಾಮನಗರದಿಂದ ನಿತ್ಯ ಒಂದು ಸಾವಿರ ಕೆ.ಜಿ.ಯಷ್ಟು ರೇಷ್ಮೆ ಗೂಡುಗಳ ಖರೀದಿ ನಿಲ್ಲಿಸಲಾಗಿದೆ. ಉತ್ಪಾದನೆ ಇಲ್ಲದೇ ದಾಸ್ತಾನು ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದಲ್ಲಿರುವ ಕೆಎಸ್ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದೆ. ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಯ ಆವರಣದ ಮಳಿಗೆಯನ್ನು ಸೀರೆಗಳಿಲ್ಲದ ಕಾರಣ ಮುಚ್ಚಲಾಗಿದೆ. ಇದರಿಂದಾಗಿ, ಗ್ರಾಹಕರು ನಿರಾಸೆಯಿಂದ ಹಿಂದಿರುಗಿದರು.</p>.<p>ತಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ನಿಗಮದ ಉತ್ಪಾದನಾ ಘಟಕದ 1,052 ಸಿಬ್ಬಂದಿ ಬುಧವಾರದಿಂದ ಕೆಲಸ ನಿಲ್ಲಿಸಿರುವ ಕಾರಣ, ಸೀರೆ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ದಾಸ್ತಾನು ಅಲಭ್ಯತೆ ಉಂಟಾಗಿದೆ. </p>.<p>‘ಪ್ರತಿಭಟನೆ ನಡೆಸುತ್ತಿರುವ 900 ಮಂದಿ ಹೊರಗುತ್ತಿಗೆ ನೌಕರರೊಂದಿಗೆ ಸಂಸ್ಥೆಯ 150 ಸಿಬ್ಬಂದಿಯೂ ಸೇರಿದ್ದಾರೆ. ಕ್ರೀಡಾಂಗಣ ನಿರ್ಮಾಣವಾದರೆ ತಿ.ನರಸೀಪುರ ಘಟಕವು ಮುಚ್ಚುವ ಜೊತೆಗೆ ಮೈಸೂರು ಹಾಗೂ ಚನ್ನಪಟ್ಟಣದಲ್ಲಿರುವ ಸೀರೆ ನೇಯ್ಗೆಯ ಘಟಕಗಳೂ ಮುಚ್ಚಬಹುದು’ ಎಂದು ನೌಕರರೊಬ್ಬರು ಹೇಳಿದರು.</p>.<p>‘ಘಟಕದಲ್ಲಿನ 5 ಟನ್ಗಳ ಸಾಮರ್ಥ್ಯದ ಬಾಯ್ಲರ್ ಸಮೀಪವೇ ಕ್ರೀಡಾಂಗಣ ನಿರ್ಮಾಣದ ನಕ್ಷೆ ರೂಪಿಸುವುದು ಆತಂಕಕಾರಿ. ಆ ಸ್ಥಳದಲ್ಲಿಯೇ ಘಟಕಕ್ಕೆ ಕಲ್ಲಿದ್ದಲುಗಳನ್ನು ತರುವ ದಾರಿ, ನೀರು ಪೂರೈಕೆ ಮಾರ್ಗವಿದೆ. ಇದರಿಂದ ತೊಂದರೆ ಆಗಲಿದೆ’ ಎಂದು ಹೇಳಿದರು.</p>.<p>‘ಶಿಡ್ಲಘಟ್ಟ, ರಾಮನಗರದಿಂದ ನಿತ್ಯ ಒಂದು ಸಾವಿರ ಕೆ.ಜಿ.ಯಷ್ಟು ರೇಷ್ಮೆ ಗೂಡುಗಳ ಖರೀದಿ ನಿಲ್ಲಿಸಲಾಗಿದೆ. ಉತ್ಪಾದನೆ ಇಲ್ಲದೇ ದಾಸ್ತಾನು ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>