ಕೆರೆಯಿಂದ ಸಾಗುವ ಜಾತ್ರಾ ಮೆರವಣಿಗೆಯು ಮಧ್ಯರಾತ್ರಿ ದೇವಾಲಯ ತಲುಪಿದಾಗ ಮದ್ದು ಗುಂಡು ಸಿಡಿಸಲಾಗುತ್ತದೆ. ಕರ್ಪೂರದಿಂದ ಕೊಂಡ ಹಚ್ಚಲಾಗುತ್ತದೆ. ಮಂಗಳವಾರ ಮುಂಜಾನೆ ಸೂರ್ಯೋದಯಕ್ಕೂ ಮುನ್ನಾ ಕೊಂಡೋತ್ಸವ ನಡೆಯಲಿದೆ. ಅನಂತರ ಮಹದೇಶ್ವರ ಸ್ವಾಮಿ ಹುಲಿವಾಹನ ಮೂರ್ತಿ, ವೀರಭದ್ರೇಶ್ವರ ಸ್ವಾಮಿ, ಸಂಗಮ ತಾತಯ್ಯ, ಶಿವಕುಮಾರ ಸ್ವಾಮೀಜಿ, ಬಸವೇಶ್ವರರ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ.