<p><strong>ಮೈಸೂರು</strong>: ಬೆಂಗಳೂರಿನಲ್ಲಿ ಗುರುವಾರ ನಿಧನರಾದ ಸಾಹಿತಿ ಮಳಲಿ ವಸಂತ ಕುಮಾರ್ ಕೇವಲ ಸಾಹಿತಿ, ಪ್ರಾಧ್ಯಾಪಕರಷ್ಟೇ ಆಗಿರಲಿಲ್ಲ. ಸಾಹಿತ್ಯ ಕೃಷಿ ಜೊತೆಗೆ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಇವರು ನಿರತರಾಗಿದ್ದರು.</p>.<p>ನಗರ ಹೊರವಲಯದ ಕಳಲವಾಡಿ ಸಮೀಪ ಮೂರು ಎಕರೆಯಷ್ಟು ಭೂಮಿಯಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದರು. ತೆಂಗು, ಹಲಸಿನ ಜತೆಗೆ 8 ತಳಿಗಳ ಮಾವಿನ ಮರ ಬೆಳೆಸಿ ಪೋಷಣೆ ಮಾಡುತ್ತಿದ್ದರು.</p>.<p>ಸಪೋಟ, ಸೀಬೆ, ಬಟರ್ಫ್ರೂಟ್, ರಾಮಫಲ, ಸೀತಾಫಲ, ಹನುಮಫಲ, ಕಮರಕ ದ್ರಾಕ್ಷಿಗಳನ್ನು ಇವರು ಬೆಳೆಸಿದ್ದರು. ಸೇಬು ಕೃಷಿಯ ಪ್ರಯತ್ನ ವನ್ನೂ ನಡೆಸಿದ್ದರು ಎಂದು ಇವರ ಪುತ್ರಿ ರೂಪಾ ಮಳಲಿ ನೆನಪಿಸಿಕೊಂಡರು.</p>.<p>ಹಣ್ಣಿನ ಮರಗಳ ಮಧ್ಯೆ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಯುತ್ತಿ ದ್ದರು. ತರಕಾರಿಯ ಪ್ರಮಾಣ ಹೆಚ್ಚಾದರೆ ಅದನ್ನು ಸಮೀಪದ ಸಾವಯವ ಅಂಗಡಿಗೆ ಮಾರಾಟ ಮಾಡುತ್ತಿದ್ದರು.</p>.<p>ಕೋಲಾಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು, ನಾಟಕದಲ್ಲೂ ಅಭಿನಯಿಸಿದ್ದರು. ಕರ್ನಾಟಕ ವಿಚಾರ ವೇದಿಕೆ ಸೇರಿದಂತೆ ಹಲವು ಬಗೆಯ ಸಂಘಟನೆಗಳನ್ನು ಸಂಘಟಿಸಿದ್ದ ಇವರು, ಹಾಸನದ ಸ್ನಾತಕೋತ್ತರ ಪದವಿ ವಿಭಾಗದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಬೆಂಗಳೂರಿನಲ್ಲಿ ಗುರುವಾರ ನಿಧನರಾದ ಸಾಹಿತಿ ಮಳಲಿ ವಸಂತ ಕುಮಾರ್ ಕೇವಲ ಸಾಹಿತಿ, ಪ್ರಾಧ್ಯಾಪಕರಷ್ಟೇ ಆಗಿರಲಿಲ್ಲ. ಸಾಹಿತ್ಯ ಕೃಷಿ ಜೊತೆಗೆ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಇವರು ನಿರತರಾಗಿದ್ದರು.</p>.<p>ನಗರ ಹೊರವಲಯದ ಕಳಲವಾಡಿ ಸಮೀಪ ಮೂರು ಎಕರೆಯಷ್ಟು ಭೂಮಿಯಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದರು. ತೆಂಗು, ಹಲಸಿನ ಜತೆಗೆ 8 ತಳಿಗಳ ಮಾವಿನ ಮರ ಬೆಳೆಸಿ ಪೋಷಣೆ ಮಾಡುತ್ತಿದ್ದರು.</p>.<p>ಸಪೋಟ, ಸೀಬೆ, ಬಟರ್ಫ್ರೂಟ್, ರಾಮಫಲ, ಸೀತಾಫಲ, ಹನುಮಫಲ, ಕಮರಕ ದ್ರಾಕ್ಷಿಗಳನ್ನು ಇವರು ಬೆಳೆಸಿದ್ದರು. ಸೇಬು ಕೃಷಿಯ ಪ್ರಯತ್ನ ವನ್ನೂ ನಡೆಸಿದ್ದರು ಎಂದು ಇವರ ಪುತ್ರಿ ರೂಪಾ ಮಳಲಿ ನೆನಪಿಸಿಕೊಂಡರು.</p>.<p>ಹಣ್ಣಿನ ಮರಗಳ ಮಧ್ಯೆ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಯುತ್ತಿ ದ್ದರು. ತರಕಾರಿಯ ಪ್ರಮಾಣ ಹೆಚ್ಚಾದರೆ ಅದನ್ನು ಸಮೀಪದ ಸಾವಯವ ಅಂಗಡಿಗೆ ಮಾರಾಟ ಮಾಡುತ್ತಿದ್ದರು.</p>.<p>ಕೋಲಾಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು, ನಾಟಕದಲ್ಲೂ ಅಭಿನಯಿಸಿದ್ದರು. ಕರ್ನಾಟಕ ವಿಚಾರ ವೇದಿಕೆ ಸೇರಿದಂತೆ ಹಲವು ಬಗೆಯ ಸಂಘಟನೆಗಳನ್ನು ಸಂಘಟಿಸಿದ್ದ ಇವರು, ಹಾಸನದ ಸ್ನಾತಕೋತ್ತರ ಪದವಿ ವಿಭಾಗದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>