ಎಚ್.ಡಿ.ಕೋಟೆ: ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳೂರು ಹಾಡಿಯ ಪುಟ್ಟ (40) ಕಾಡಿಗೆ ಹೋಗಿ ಸುಮಾರು 10 ದಿನ ಕಳೆದರು ಇನ್ನೂ ವಾಪಾಸ್ಸಾಗಿಲ್ಲ ಎಂದು ಆತನ ಪತ್ನಿ ಲಕ್ಷ್ಮೀ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಕಾಡಿನಲ್ಲಿ ಕಾಡುಪ್ರಾಣಿಗಳಿಗೆ ನನ್ನ ಗಂಡ ಬಲಿಯಾಗಿರುವ ಶಂಕೆ ಇದ್ದು ಪತ್ತೆ ಮಾಡಿಕೊಡಿ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂತರಸಂತೆ ಪೊಲೀಸ್ ಠಾಣೆಯ ಪಿಎಸ್ಐ ರವಿಶಂಕರ್ ಮತ್ತು ತಂಡ ಶೋಧ ಕಾರ್ಯ ಆರಂಭಿಸಿದ್ದಾರೆ.