ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸೂಚನೆಯಂತೆ ಮೃತಪಟ್ಟ ಕನಕರಾಜು ಕುಟುಂಬಕ್ಕೆ ₹2 ಲಕ್ಷ ಪರಿಹಾರ ನೀಡುತ್ತೇವೆ. ಕಲುಷಿತ ನೀರಿನಿಂದ 98 ಜನ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಾದರಿ ಪರಿಶೀಲಿಸಿದಾಗ ವಿಪ್ರಿಯೋ ಕಾಲರಾ ಕಂಡುಬಂದಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ರೋಗ ತಡೆಗಟ್ಟಲು ಕ್ರಮವಹಿಸಿದೆ’ ಎಂದರು.