<p><strong>ಮೈಸೂರು :</strong> ತನ್ನ ವಿರುದ್ಧ ಪ್ರಕರಣ ದಾಖಲಾದ ಸಂಬಂಧ ಇಲ್ಲಿನ ಲಕ್ಷ್ಮಿಪುರಂ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಸಾ.ರಾ.ಮಹೇಶ್ ತಮ್ಮ ಧರಣಿಯನ್ನು ಶನಿವಾರ ತಡರಾತ್ರಿ ವಾಪಸ್ ಪಡೆದರು.<br />ಸ್ಥಳಕ್ಕೆ ಬಂದ ಕಮಿಷನರ್ ಡಾ.ಚಂದ್ರಗುಪ್ತ ಅವರ ಮನವೊಲಿಸಿದರು.</p>.<p>ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, 'ನನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಗೊತ್ತಾಯಿತು. ಬಂಧಿಸಲಿ ಎಂದು ಠಾಣೆಗೆ ಬಂದೆ. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದರು. ಹಿಂದೆ ಮಚ್ಚು ಹಿಡಿದು ಬೆದರಿಸುವ ರೌಡಿಗಳು ಇದ್ದರು.<br />ಇಂದು ಪೆನ್ನು ಹಿಡಿದು ಬೆದರಿಸುವ ರೌಡಿಗಳಿದ್ದಾರೆ. ಆ ಆರ್ಟಿಐ ಕಾರ್ಯಕರ್ತನ ಹಿನ್ನೆಲೆ ಏನು? ಅವರ ಆದಾಯದ ಮೂಲ ಏನು? ಕಳೆದ ಎರಡು ತಿಂಗಳಿಂದ ನಡೆದಿರುವ ಮೊಬೈಲ್ ಫೋನ್ ಸಂಭಾಷಣೆ ಕುರಿತ ವಿವರ ತೆಗೆಸಿದರೆ ಬಂಡವಾಳ ಬಯಲಾಗುತ್ತದೆ ಎಂದು ಹೇಳಿದರು.</p>.<p>ನಾನು ಈಜುಕೊಳ, ಬಟ್ಟೆ ಬ್ಯಾಗ್ ಹಗರಣ ಕುರಿತಂತೆ ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ.<br />ನನ್ನ ವಿರುದ್ದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಅವರ ಜೊತೆ ಈ ಮಾಹಿತಿ ಹಕ್ಕು ಕಾರ್ಯಕರ್ತರೂ ಸೇರಿಕೊಂಡಿರಬಹುದು. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ರೀತಿ ದೂರು ನೀಡುವುದು ಇಲ್ಲಿಗೆ ಕೊನೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು :</strong> ತನ್ನ ವಿರುದ್ಧ ಪ್ರಕರಣ ದಾಖಲಾದ ಸಂಬಂಧ ಇಲ್ಲಿನ ಲಕ್ಷ್ಮಿಪುರಂ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಸಾ.ರಾ.ಮಹೇಶ್ ತಮ್ಮ ಧರಣಿಯನ್ನು ಶನಿವಾರ ತಡರಾತ್ರಿ ವಾಪಸ್ ಪಡೆದರು.<br />ಸ್ಥಳಕ್ಕೆ ಬಂದ ಕಮಿಷನರ್ ಡಾ.ಚಂದ್ರಗುಪ್ತ ಅವರ ಮನವೊಲಿಸಿದರು.</p>.<p>ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, 'ನನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಗೊತ್ತಾಯಿತು. ಬಂಧಿಸಲಿ ಎಂದು ಠಾಣೆಗೆ ಬಂದೆ. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದರು. ಹಿಂದೆ ಮಚ್ಚು ಹಿಡಿದು ಬೆದರಿಸುವ ರೌಡಿಗಳು ಇದ್ದರು.<br />ಇಂದು ಪೆನ್ನು ಹಿಡಿದು ಬೆದರಿಸುವ ರೌಡಿಗಳಿದ್ದಾರೆ. ಆ ಆರ್ಟಿಐ ಕಾರ್ಯಕರ್ತನ ಹಿನ್ನೆಲೆ ಏನು? ಅವರ ಆದಾಯದ ಮೂಲ ಏನು? ಕಳೆದ ಎರಡು ತಿಂಗಳಿಂದ ನಡೆದಿರುವ ಮೊಬೈಲ್ ಫೋನ್ ಸಂಭಾಷಣೆ ಕುರಿತ ವಿವರ ತೆಗೆಸಿದರೆ ಬಂಡವಾಳ ಬಯಲಾಗುತ್ತದೆ ಎಂದು ಹೇಳಿದರು.</p>.<p>ನಾನು ಈಜುಕೊಳ, ಬಟ್ಟೆ ಬ್ಯಾಗ್ ಹಗರಣ ಕುರಿತಂತೆ ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ.<br />ನನ್ನ ವಿರುದ್ದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಅವರ ಜೊತೆ ಈ ಮಾಹಿತಿ ಹಕ್ಕು ಕಾರ್ಯಕರ್ತರೂ ಸೇರಿಕೊಂಡಿರಬಹುದು. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ರೀತಿ ದೂರು ನೀಡುವುದು ಇಲ್ಲಿಗೆ ಕೊನೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>