<p><strong>ಮೈಸೂರು:</strong> ‘ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ ನೀಡಬೇಕು?’ ಎಂದು ಚಲನಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನಿಸಿದರು.</p>.<p>ಮೈಸೂರು- ಗದ್ದಿಗೆ ರಸ್ತೆಯ ಆಲನಹಳ್ಳಿಯಲ್ಲಿ ಗುರುವಾರ ಜನಪರ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಮನೆಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರೊಂದಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಇತ್ತೀಚಿನ ಸಿನಿಮಾಗಳಿಗೆ ಇಂಗ್ಲಿಷ್ನಲ್ಲಿ ಶೀರ್ಷಿಕೆ ಇಡಲಾಗುತ್ತಿದೆ. ಇದು ಸರಿಯಲ್ಲ. ನಟರು ಕನ್ನಡ ನಾಡು-ನುಡಿಗೆ ಹೋರಾಡಲಿ. ಕನ್ನಡದಲ್ಲಿ ನಾಮಫಲಕಗಳಿರುವಂತೆ ನೋಡಿಕೊಳ್ಳಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕು. ಇದಕ್ಕಾಗಿ ವರನಟ ರಾಜಕುಮಾರ್ ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಹಣಕ್ಕಿಂತಲೂ ವ್ಯಕ್ತಿತ್ವ, ನಡವಳಿಕೆ ಮುಖ್ಯ ಎಂಬುದನ್ನು ಅರಿಯಬೇಕು’ ಎಂದರು.</p>.<p>‘ಕಲಾವಿದರು ಎಲ್ಲರೊಂದಿಗೂ ಸ್ನೇಹದಿಂದ ಇರಬೇಕು. ಸ್ಪರ್ಧೆಗಿಳಿದಂತೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು. ನಮ್ಮ ಸಿನಿಮಾ ರಂಗ ಚಿಕ್ಕದು. ಹೀಗಿರುವಾಗ ಎಲ್ಲ ಸಿನಿಮಾಗಳು ಹೆಚ್ಚು ದಿನಗಳವರೆಗೆ ಪ್ರದರ್ಶನ ಕಾಣಬೇಕು. ಆದರೆ, ಪೈಪೋಟಿಯಿಂದಾಗಿ ನಮ್ಮ ಚಿತ್ರರಂಗ ಸೊರಗುತ್ತಿದೆ’ ಎಂದು ಹೇಳಿದರು.</p>.<h2>ಓದುವ ಅಗತ್ಯವಿದೆ: </h2>.<p>‘ಕನ್ನಡದ ಅನನ್ಯ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಕೃತಿಗಳನ್ನು ಈಗಿನ ತಲೆಮಾರು ಓದುವ ಅಗತ್ಯವಿದೆ. ನಾನು ಅವರ ಕಾದಂಬರಿ, ಕಥೆಗಳಿಂದ ಪ್ರೇರಿತನಾಗಿದ್ದೆ’ ಎಂದು ನೆನೆದರು.</p>.<p>ಉದ್ಘಾಟಿಸಿದ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ‘ಆಲನಹಳ್ಳಿ ಪ್ರತಿಷ್ಠಾನ ಆರಂಭಿಸಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಉದ್ದೇಶವಿದೆ’ ಎಂದು ತಿಳಿಸಿದರು.</p>.<p>ಮೈಸೂರು ಆನಂದ್ ಹಾಸ್ಯ ಕಾರ್ಯಕ್ರಮ ನೀಡಿದರು. ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಕನ್ನಡ ಉಪನ್ಯಾಸಕಿ ಎಂ.ಎಸ್. ಅನಿತಾ, ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಮಹೇಶ ಚಿಕ್ಕಲ್ಲೂರು, ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರಾಜ್ಯ ನಿರ್ದೇಶಕರಾದ ಎಂ.ಚಂದ್ರಶೇಖರ್, ವೀರಭದ್ರಸ್ವಾಮಿ ಮಾತನಾಡಿದರು.</p>.<p>ಶ್ರೀಕೃಷ್ಣ ಆಲನಹಳ್ಳಿ ಅವರ ಪತ್ನಿ ವಿನುತಾ, ಪುತ್ರ ಪ್ರದ್ಯುಮ್ನ, ಪುತ್ರಿ ಕೃತಿಕಾ, ಎಎಪಿ ಮುಖಂಡರಾದ ರಂಗಯ್ಯ, ಕುಲಕರ್ಣಿ, ಪದ್ಮಾ ‘ಮುಖ್ಯಮಂತ್ರಿ’ ಚಂದ್ರು, ಸಿಪಿಐಗಳಾದ ಜಗದೀಶ, ಶಶಿಕುಮಾರ್, ಶಿವಪ್ರಕಾಶ್, ಉಪನ್ಯಾಸಕ ಆಲನಹಳ್ಳಿ ಸೋಮಣ್ಣ, ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ರವೀಶ್ ಪಾಲ್ಗೊಂಡಿದ್ದರು. </p>.<div><blockquote>ನಟ ಸುದೀಪ್ ಅವರು ಬದ್ಧ ಯುದ್ಧಕ್ಕೆ ಸಿದ್ಧ ಎನ್ನುವ ಬದಲಿಗೆ ನೇರವಾಗಿ ಪೈರಸಿ ವಿರುದ್ಧ ಯುದ್ಧ ಎನ್ನಬೇಕಿತ್ತು</blockquote><span class="attribution"> ‘ಮುಖ್ಯಮಂತ್ರಿ’ ಚಂದ್ರು ಚಲನಚಿತ್ರ ನಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ ನೀಡಬೇಕು?’ ಎಂದು ಚಲನಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನಿಸಿದರು.</p>.<p>ಮೈಸೂರು- ಗದ್ದಿಗೆ ರಸ್ತೆಯ ಆಲನಹಳ್ಳಿಯಲ್ಲಿ ಗುರುವಾರ ಜನಪರ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಮನೆಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರೊಂದಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಇತ್ತೀಚಿನ ಸಿನಿಮಾಗಳಿಗೆ ಇಂಗ್ಲಿಷ್ನಲ್ಲಿ ಶೀರ್ಷಿಕೆ ಇಡಲಾಗುತ್ತಿದೆ. ಇದು ಸರಿಯಲ್ಲ. ನಟರು ಕನ್ನಡ ನಾಡು-ನುಡಿಗೆ ಹೋರಾಡಲಿ. ಕನ್ನಡದಲ್ಲಿ ನಾಮಫಲಕಗಳಿರುವಂತೆ ನೋಡಿಕೊಳ್ಳಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕು. ಇದಕ್ಕಾಗಿ ವರನಟ ರಾಜಕುಮಾರ್ ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಹಣಕ್ಕಿಂತಲೂ ವ್ಯಕ್ತಿತ್ವ, ನಡವಳಿಕೆ ಮುಖ್ಯ ಎಂಬುದನ್ನು ಅರಿಯಬೇಕು’ ಎಂದರು.</p>.<p>‘ಕಲಾವಿದರು ಎಲ್ಲರೊಂದಿಗೂ ಸ್ನೇಹದಿಂದ ಇರಬೇಕು. ಸ್ಪರ್ಧೆಗಿಳಿದಂತೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು. ನಮ್ಮ ಸಿನಿಮಾ ರಂಗ ಚಿಕ್ಕದು. ಹೀಗಿರುವಾಗ ಎಲ್ಲ ಸಿನಿಮಾಗಳು ಹೆಚ್ಚು ದಿನಗಳವರೆಗೆ ಪ್ರದರ್ಶನ ಕಾಣಬೇಕು. ಆದರೆ, ಪೈಪೋಟಿಯಿಂದಾಗಿ ನಮ್ಮ ಚಿತ್ರರಂಗ ಸೊರಗುತ್ತಿದೆ’ ಎಂದು ಹೇಳಿದರು.</p>.<h2>ಓದುವ ಅಗತ್ಯವಿದೆ: </h2>.<p>‘ಕನ್ನಡದ ಅನನ್ಯ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಕೃತಿಗಳನ್ನು ಈಗಿನ ತಲೆಮಾರು ಓದುವ ಅಗತ್ಯವಿದೆ. ನಾನು ಅವರ ಕಾದಂಬರಿ, ಕಥೆಗಳಿಂದ ಪ್ರೇರಿತನಾಗಿದ್ದೆ’ ಎಂದು ನೆನೆದರು.</p>.<p>ಉದ್ಘಾಟಿಸಿದ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ‘ಆಲನಹಳ್ಳಿ ಪ್ರತಿಷ್ಠಾನ ಆರಂಭಿಸಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಉದ್ದೇಶವಿದೆ’ ಎಂದು ತಿಳಿಸಿದರು.</p>.<p>ಮೈಸೂರು ಆನಂದ್ ಹಾಸ್ಯ ಕಾರ್ಯಕ್ರಮ ನೀಡಿದರು. ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಕನ್ನಡ ಉಪನ್ಯಾಸಕಿ ಎಂ.ಎಸ್. ಅನಿತಾ, ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಮಹೇಶ ಚಿಕ್ಕಲ್ಲೂರು, ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರಾಜ್ಯ ನಿರ್ದೇಶಕರಾದ ಎಂ.ಚಂದ್ರಶೇಖರ್, ವೀರಭದ್ರಸ್ವಾಮಿ ಮಾತನಾಡಿದರು.</p>.<p>ಶ್ರೀಕೃಷ್ಣ ಆಲನಹಳ್ಳಿ ಅವರ ಪತ್ನಿ ವಿನುತಾ, ಪುತ್ರ ಪ್ರದ್ಯುಮ್ನ, ಪುತ್ರಿ ಕೃತಿಕಾ, ಎಎಪಿ ಮುಖಂಡರಾದ ರಂಗಯ್ಯ, ಕುಲಕರ್ಣಿ, ಪದ್ಮಾ ‘ಮುಖ್ಯಮಂತ್ರಿ’ ಚಂದ್ರು, ಸಿಪಿಐಗಳಾದ ಜಗದೀಶ, ಶಶಿಕುಮಾರ್, ಶಿವಪ್ರಕಾಶ್, ಉಪನ್ಯಾಸಕ ಆಲನಹಳ್ಳಿ ಸೋಮಣ್ಣ, ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ರವೀಶ್ ಪಾಲ್ಗೊಂಡಿದ್ದರು. </p>.<div><blockquote>ನಟ ಸುದೀಪ್ ಅವರು ಬದ್ಧ ಯುದ್ಧಕ್ಕೆ ಸಿದ್ಧ ಎನ್ನುವ ಬದಲಿಗೆ ನೇರವಾಗಿ ಪೈರಸಿ ವಿರುದ್ಧ ಯುದ್ಧ ಎನ್ನಬೇಕಿತ್ತು</blockquote><span class="attribution"> ‘ಮುಖ್ಯಮಂತ್ರಿ’ ಚಂದ್ರು ಚಲನಚಿತ್ರ ನಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>