<p><strong>ನಂಜನಗೂಡು (ಮೈಸೂರು):</strong> ತಾಲ್ಲೂಕಿನ ಅಡಕನಹಳ್ಳಿಯ ಕೃಷ್ಣ (20) ಎಂಬ ಯುವಕನನ್ನು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.</p>.<p>ದುಷ್ಕರ್ಮಿಗಳು, ಶವವನ್ನು ವಾಹನವೊಂದಕ್ಕೆ ಕಟ್ಟಿ ಸುಮಾರು ಒಂದೂವರೆ ಕಿ.ಮೀವರೆಗೆ ಡಾಂಬರು ರಸ್ತೆಯಲ್ಲಿ ಎಳೆದು ತಂದಿದ್ದು, ದೇಹದ ಎಡಭಾಗದ ಚರ್ಮವೆಲ್ಲ ಕಿತ್ತುಬಂದಿದೆ. ಎಳೆದು ತರಲಾದ ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ತುಂಡರಿಸಿದ ಬೆರಳುಗಳು, ಮೃತದೇಹದ ಬಟ್ಟೆಗಳು ಛಿದ್ರಛಿದ್ರವಾಗಿ ಬಿದ್ದಿದ್ದವು.</p>.<p>ನಂತರ ಯುವಕನ ಸ್ಕೂಟರ್ ಮೇಲೆಯೇ ಶವವನ್ನು ಮಲಗಿಸಿ, ಆರೋಪಿಗಳು ಪರಾರಿಯಾಗಿದ್ದಾರೆ. ಯಾವುದೋ ದ್ವೇಷಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.</p>.<p>ಶವ ಸಿಕ್ಕಿದ ಸ್ವಲ್ಪ ದೂರದಲ್ಲಿ ಮದ್ಯದ ಬಾಟಲಿಗಳು ದೊರಕಿವೆ. ಇಲ್ಲಿ ಮದ್ಯಸೇವಿಸಿ ನಂತರ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು (ಮೈಸೂರು):</strong> ತಾಲ್ಲೂಕಿನ ಅಡಕನಹಳ್ಳಿಯ ಕೃಷ್ಣ (20) ಎಂಬ ಯುವಕನನ್ನು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.</p>.<p>ದುಷ್ಕರ್ಮಿಗಳು, ಶವವನ್ನು ವಾಹನವೊಂದಕ್ಕೆ ಕಟ್ಟಿ ಸುಮಾರು ಒಂದೂವರೆ ಕಿ.ಮೀವರೆಗೆ ಡಾಂಬರು ರಸ್ತೆಯಲ್ಲಿ ಎಳೆದು ತಂದಿದ್ದು, ದೇಹದ ಎಡಭಾಗದ ಚರ್ಮವೆಲ್ಲ ಕಿತ್ತುಬಂದಿದೆ. ಎಳೆದು ತರಲಾದ ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ತುಂಡರಿಸಿದ ಬೆರಳುಗಳು, ಮೃತದೇಹದ ಬಟ್ಟೆಗಳು ಛಿದ್ರಛಿದ್ರವಾಗಿ ಬಿದ್ದಿದ್ದವು.</p>.<p>ನಂತರ ಯುವಕನ ಸ್ಕೂಟರ್ ಮೇಲೆಯೇ ಶವವನ್ನು ಮಲಗಿಸಿ, ಆರೋಪಿಗಳು ಪರಾರಿಯಾಗಿದ್ದಾರೆ. ಯಾವುದೋ ದ್ವೇಷಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.</p>.<p>ಶವ ಸಿಕ್ಕಿದ ಸ್ವಲ್ಪ ದೂರದಲ್ಲಿ ಮದ್ಯದ ಬಾಟಲಿಗಳು ದೊರಕಿವೆ. ಇಲ್ಲಿ ಮದ್ಯಸೇವಿಸಿ ನಂತರ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>