ಜಯಲಕ್ಷ್ಮಿಪುರಂ 2ನೇ ಕ್ರಾಸ್ನ ರಾಮಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್ ಮೈಸೂರು ಉತ್ತರ ವತಿಯಿಂದ ವಿ.ವಿ. ಮೊಹಲ್ಲಾದ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ‘30ನೇ ಶ್ರೀರಾಮನವಮಿ ಸಂಗೀತೋತ್ಸವ’ವನ್ನು ಏ.10ರಿಂದ 19ರವರೆಗೆ ಆಯೋಜಿಸಲಾಗಿದೆ. ಏ.1ರಂದು ಸಂಜೆ 6ಕ್ಕೆ ಉದ್ಘಾಟನೆ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ಆದಿತ್ಯಾನಂದ ‘ವಸಂತ ನವರಾತ್ರಿ’ ಕುರಿತು ಪ್ರವಚನ ನೀಡುವರು.