‘ತರಕಾರಿ ಮತ್ತು ಹಣ್ಣು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟವಾಗಿದೆ. ಇದರ ನಷ್ಟ ತುಂಬಿಸಿಕೊಡಬೇಕು. ಸಾಲ ಮರುಪಾವತಿಯನ್ನು ಒಂದು ವರ್ಷದವರೆಗೆ ಮುಂದೂಡಬೇಕು. ಯಾವುದೇ ಬಡ್ಡಿ ವಿಧಿಸಬಾರದು. ಈ ಸಾಲಿನ ಕೃಷಿ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ಒದಗಿಸಬೇಕು. ನಗರಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಮತ್ತೆ ಊರಿಗೆ ಬಂದಿದ್ದು, ಅವರ ಉದ್ಯೋಗ ಭದ್ರತೆಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.